ಸುಡಗಾಡುಗಟ್ಯಾಗ ಚಂದುಳ್ಳ ಚಲುವೇರು

ಸುಡಗಾಡುಗಟ್ಯಾಗ ಚಂದುಳ್ಳ ಚಲುವೇರು
ಕುಂಟಲ್ಪಿ ಹಂಚಲ್ಪಿ ಆಡ್ಯಾರೆ
ಹೆಣಗುಂಡ ತೆಗಿನ್ಯಾಗ ಚಕಚಂದ ಕುಂತಾರೆ
ಕ್ವಾಡ್ಬಾಳಿ ಗಾರೀಗಿ ತಿಂದಾರೆ ||೧||

ಏಂಚಂದಾ ಭೋಚಂದಾ ಮಾಚಂದಾ ಸುಡಗಾಡು
ಗೋರೀಯ ಮ್ಯಾಲ್ಹೂವು ನಕ್ಕಾವೊ
ಗಿಡದಾಗ ಗಿಳಿಯಣ್ಣ ಕಂಟ್ಯಾಗ ನರಿಯಣ್ಣ
ಕೂಗಾಡಿ ಕ್ಯಾಕೀಯ ಹಾಕ್ಯಾವೊ ||೨||

ಜೀನ್ಗೊಟ್ಟ ಸೂಗವ್ವ ಹಪೆಗೊಂಡ ಹಂಪವ್ವ
ಹೋಟಿಬಾಕ ಉಳವಪ್ಪ ಸತ್ತಾರೊ
ಕುಲವಂತ ಕಾಳಕ್ಕ ಹಲಕಟ್ಟ ಹೂವಕ್ಕ
ಬೋಳ್ಗುಂಡ ಸೀತಕ್ಕ ಅತ್ತಾರೊ ||೩||

ಕೊಳಿಬಿದ್ದ ಹೆಣಕಳ್ಳು ನರಿನಾಯಿ ಎಳದಾಡಿ
ಕಾಗ್ಹೆದ್ದು ಕಚ್ಯಾಡಿ ತಿಂದಾವೊ
ಈದಿಕ್ಕು ಆದಿಕ್ಕು ಯಾದಿಕ್ಕು ಮಾದಿಕ್ಕು
ಜಗವೆಲ್ಲ ಸುಡುಗಾಡು ಮಾಡ್ಯಾರೊ ||೪||
*****
ಸುಡುಗಾಡಗಟ್ಟಿ = ಪತಿತ ಜಗತ್ತು, ವಿಕಾರಿ ಜಗತ್ತು
ಚಂದುಳ್ಳ ಚಲುವೇರು = ಕಾಮ, ಕ್ರೋಧ, ಲೋಭ, ಮೋಹ ಮುಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾದರಗಿತ್ತಿ
Next post ಯಾಕೆ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…