Home / ಕವನ / ಕವಿತೆ / ಜಗವ ತೋರುವ ಕಣ್ಣು

ಜಗವ ತೋರುವ ಕಣ್ಣು

ಜೊತೆಜೊತೆಯಲಿ
ಕೈಯಲ್ಲಿ ಕೈಯಿಟ್ಟು ನಡೆವ
ಅವರನ್ನೂ ಕಂಡಾಗಲೆಲ್ಲಾ,
ಮುಂದೊಂದು ದಿನ ನಾನು ಹೀಗೆ,
ಬರಿಯ ಹಾಗೇ ಅಂದುಕೊಂಡಿದ್ದೆ, ಅಷ್ಟೇ.

ಪೇಟೆ ದಾರಿಯಲ್ಲಿ
ಹೀಗೆ ಕೈ ಕೈ ಹಿಡಿದು
ನಡೆದಾಡಿರಲೇ ಇಲ್ಲ ನಾವೆಂದೂ.
ಹಾಗೆ ಇರಲಾಗಲೇ ಇಲ್ಲ
ಎಂದುಕೊಳ್ಳುತ್ತಿರುವಾಗಲೇ,
ಆಕಸ್ಮಿಕವಾಗಿ ಆತ ಎದುರಾದದ್ದು.
ಕೊಂಚ ಗಲಿಬಿಲಿ ಮುಖದಲ್ಲೇ ನಕ್ಕು
ಹಲ್ಲು ಗಿಂಜಿದ.
ನನ್ನ ಮುಖದಲ್ಲೊಂದು ವಿಜಯದ ನಗೆ.

ಬಿಚ್ಚಿಕೊಳ್ಳಲು ಏನಿಲ್ಲ
ಗಿಡದ ಕೊರಳಲ್ಲಿ ಮೂಡಿದ ಏಕಾಂಗಿದನಿ
ಜಗದ ದನಿಯಾಗಿ ಮೂಡಿದ್ದಾಗಿದೆ.
ಹೆರಳಿಗೆ ಮುಡಿಸಿದ ಮಾಲೆ
ಕಿತ್ತೆಸೆದು ವರ್ಷಗಳಾಗಿವೆ.
ನಾಭಿಯಲ್ಲುದಿಸಿದ ನಾದ
ಅಶ್ರುತ ಗಾನವಾಗಿ
ಕರ್ಣಕ್ಕೊಲಿಯದೆ ಕರ್ಕಶವಾಗ ಲಾಗಾಯ್ತು.
ಬರಿಯ ದಾಸರ ಪದಗಳೇ
ಉಸಿರಾಗಿ ಕಳೆದಾಯ್ತು.

ಎಲ್ಲ ಹೆಣ್ಣು ಅಹಲ್ಯೆ ಎಂದೇ ಪರಿಭಾವಿಸಿ
ಅನರ್ಥಗೈಯುವ ಇಂದ್ರರಿರುವರು ಜಾಣೆ
ಸೀತೆಯಂತಿರಬೇಕು ನೀನು
ಎಂದಾಗಲೆಲ್ಲಾ ನಾನೆನ್ನುತ್ತಿದ್ದೆ
‘ನೀನು ರಾಮನಾದರೆ’
ಅಷ್ಟೇ ಪಲ್ಲಟಿಸಿಬಿಟ್ಟಿತು ಬದುಕು.
ಪರಿಪರಿಯಾದ
ಯಾವ ಪ್ರಲಾಪವೂ ಪ್ರಕೋಪವೂ ಇಲ್ಲದೇ.

ಈಗ ಪೇಟೆದಾರಿಯಲ್ಲಿ
ಕೈ ಕೈ ಹಿಡಿದು ನುಲಿವ
ಅವರು ಗೋಚರಿಸುವುದಿಲ್ಲ.
ಅದಕ್ಕೆಂದೆ ಗುತ್ತು ಬದಲಿಸಿ ಬೆಟ್ಟದ
ನೆತ್ತಿಯ ಮೇಲೆ ಕೂತೆ.
ಕನಸ ಕವನ ನೆಲನೆಲ್ಲಿಯ ಬಾಯಿಗಿಟ್ಟಿತು
ಸೋಂಕಿನ ಶೀತಕ್ಕೆ ರಾಮಬಾಣ
ಮನೆ ಕಿಬಳಿಯ ಬದಿಯಲ್ಲೆ
ಹುಟ್ಟಿದ ಇದಕ್ಕೆ ಅದೆಂಥಾ
ಇಸ್ರೂಪದ ಹೆಸರು- ನೆಲನೆಲ್ಲಿ
ಪೇಟೆದಾರಿಯಲ್ಲಿ ಸಿಗದ ಇದನ್ನು
ಹಿತ್ತಲು ಹುಡುಕಿಯೇ ತೆಗೆದದ್ದು
ಒಂದಿಷ್ಟು ನೀರು ಸೇರಿಸಿ ಕುದಿಸಿ ರಸ
ಬಸಿದು ಕುಡಿದಷ್ಟು ರಸವುಕ್ಕಿಸಿ
ಜಗವ ತೋರುವ ಕಣ್ಣಾದದ್ದು
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...