ಜಗವ ತೋರುವ ಕಣ್ಣು

ಜೊತೆಜೊತೆಯಲಿ
ಕೈಯಲ್ಲಿ ಕೈಯಿಟ್ಟು ನಡೆವ
ಅವರನ್ನೂ ಕಂಡಾಗಲೆಲ್ಲಾ,
ಮುಂದೊಂದು ದಿನ ನಾನು ಹೀಗೆ,
ಬರಿಯ ಹಾಗೇ ಅಂದುಕೊಂಡಿದ್ದೆ, ಅಷ್ಟೇ.

ಪೇಟೆ ದಾರಿಯಲ್ಲಿ
ಹೀಗೆ ಕೈ ಕೈ ಹಿಡಿದು
ನಡೆದಾಡಿರಲೇ ಇಲ್ಲ ನಾವೆಂದೂ.
ಹಾಗೆ ಇರಲಾಗಲೇ ಇಲ್ಲ
ಎಂದುಕೊಳ್ಳುತ್ತಿರುವಾಗಲೇ,
ಆಕಸ್ಮಿಕವಾಗಿ ಆತ ಎದುರಾದದ್ದು.
ಕೊಂಚ ಗಲಿಬಿಲಿ ಮುಖದಲ್ಲೇ ನಕ್ಕು
ಹಲ್ಲು ಗಿಂಜಿದ.
ನನ್ನ ಮುಖದಲ್ಲೊಂದು ವಿಜಯದ ನಗೆ.

ಬಿಚ್ಚಿಕೊಳ್ಳಲು ಏನಿಲ್ಲ
ಗಿಡದ ಕೊರಳಲ್ಲಿ ಮೂಡಿದ ಏಕಾಂಗಿದನಿ
ಜಗದ ದನಿಯಾಗಿ ಮೂಡಿದ್ದಾಗಿದೆ.
ಹೆರಳಿಗೆ ಮುಡಿಸಿದ ಮಾಲೆ
ಕಿತ್ತೆಸೆದು ವರ್ಷಗಳಾಗಿವೆ.
ನಾಭಿಯಲ್ಲುದಿಸಿದ ನಾದ
ಅಶ್ರುತ ಗಾನವಾಗಿ
ಕರ್ಣಕ್ಕೊಲಿಯದೆ ಕರ್ಕಶವಾಗ ಲಾಗಾಯ್ತು.
ಬರಿಯ ದಾಸರ ಪದಗಳೇ
ಉಸಿರಾಗಿ ಕಳೆದಾಯ್ತು.

ಎಲ್ಲ ಹೆಣ್ಣು ಅಹಲ್ಯೆ ಎಂದೇ ಪರಿಭಾವಿಸಿ
ಅನರ್ಥಗೈಯುವ ಇಂದ್ರರಿರುವರು ಜಾಣೆ
ಸೀತೆಯಂತಿರಬೇಕು ನೀನು
ಎಂದಾಗಲೆಲ್ಲಾ ನಾನೆನ್ನುತ್ತಿದ್ದೆ
‘ನೀನು ರಾಮನಾದರೆ’
ಅಷ್ಟೇ ಪಲ್ಲಟಿಸಿಬಿಟ್ಟಿತು ಬದುಕು.
ಪರಿಪರಿಯಾದ
ಯಾವ ಪ್ರಲಾಪವೂ ಪ್ರಕೋಪವೂ ಇಲ್ಲದೇ.

ಈಗ ಪೇಟೆದಾರಿಯಲ್ಲಿ
ಕೈ ಕೈ ಹಿಡಿದು ನುಲಿವ
ಅವರು ಗೋಚರಿಸುವುದಿಲ್ಲ.
ಅದಕ್ಕೆಂದೆ ಗುತ್ತು ಬದಲಿಸಿ ಬೆಟ್ಟದ
ನೆತ್ತಿಯ ಮೇಲೆ ಕೂತೆ.
ಕನಸ ಕವನ ನೆಲನೆಲ್ಲಿಯ ಬಾಯಿಗಿಟ್ಟಿತು
ಸೋಂಕಿನ ಶೀತಕ್ಕೆ ರಾಮಬಾಣ
ಮನೆ ಕಿಬಳಿಯ ಬದಿಯಲ್ಲೆ
ಹುಟ್ಟಿದ ಇದಕ್ಕೆ ಅದೆಂಥಾ
ಇಸ್ರೂಪದ ಹೆಸರು- ನೆಲನೆಲ್ಲಿ
ಪೇಟೆದಾರಿಯಲ್ಲಿ ಸಿಗದ ಇದನ್ನು
ಹಿತ್ತಲು ಹುಡುಕಿಯೇ ತೆಗೆದದ್ದು
ಒಂದಿಷ್ಟು ನೀರು ಸೇರಿಸಿ ಕುದಿಸಿ ರಸ
ಬಸಿದು ಕುಡಿದಷ್ಟು ರಸವುಕ್ಕಿಸಿ
ಜಗವ ತೋರುವ ಕಣ್ಣಾದದ್ದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೬
Next post ಮುಸ್ಸಂಜೆಯ ಮಿಂಚು – ೨೩

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…