Home / ಕವನ / ಕವಿತೆ / ಜಗವ ತೋರುವ ಕಣ್ಣು

ಜಗವ ತೋರುವ ಕಣ್ಣು

ಜೊತೆಜೊತೆಯಲಿ
ಕೈಯಲ್ಲಿ ಕೈಯಿಟ್ಟು ನಡೆವ
ಅವರನ್ನೂ ಕಂಡಾಗಲೆಲ್ಲಾ,
ಮುಂದೊಂದು ದಿನ ನಾನು ಹೀಗೆ,
ಬರಿಯ ಹಾಗೇ ಅಂದುಕೊಂಡಿದ್ದೆ, ಅಷ್ಟೇ.

ಪೇಟೆ ದಾರಿಯಲ್ಲಿ
ಹೀಗೆ ಕೈ ಕೈ ಹಿಡಿದು
ನಡೆದಾಡಿರಲೇ ಇಲ್ಲ ನಾವೆಂದೂ.
ಹಾಗೆ ಇರಲಾಗಲೇ ಇಲ್ಲ
ಎಂದುಕೊಳ್ಳುತ್ತಿರುವಾಗಲೇ,
ಆಕಸ್ಮಿಕವಾಗಿ ಆತ ಎದುರಾದದ್ದು.
ಕೊಂಚ ಗಲಿಬಿಲಿ ಮುಖದಲ್ಲೇ ನಕ್ಕು
ಹಲ್ಲು ಗಿಂಜಿದ.
ನನ್ನ ಮುಖದಲ್ಲೊಂದು ವಿಜಯದ ನಗೆ.

ಬಿಚ್ಚಿಕೊಳ್ಳಲು ಏನಿಲ್ಲ
ಗಿಡದ ಕೊರಳಲ್ಲಿ ಮೂಡಿದ ಏಕಾಂಗಿದನಿ
ಜಗದ ದನಿಯಾಗಿ ಮೂಡಿದ್ದಾಗಿದೆ.
ಹೆರಳಿಗೆ ಮುಡಿಸಿದ ಮಾಲೆ
ಕಿತ್ತೆಸೆದು ವರ್ಷಗಳಾಗಿವೆ.
ನಾಭಿಯಲ್ಲುದಿಸಿದ ನಾದ
ಅಶ್ರುತ ಗಾನವಾಗಿ
ಕರ್ಣಕ್ಕೊಲಿಯದೆ ಕರ್ಕಶವಾಗ ಲಾಗಾಯ್ತು.
ಬರಿಯ ದಾಸರ ಪದಗಳೇ
ಉಸಿರಾಗಿ ಕಳೆದಾಯ್ತು.

ಎಲ್ಲ ಹೆಣ್ಣು ಅಹಲ್ಯೆ ಎಂದೇ ಪರಿಭಾವಿಸಿ
ಅನರ್ಥಗೈಯುವ ಇಂದ್ರರಿರುವರು ಜಾಣೆ
ಸೀತೆಯಂತಿರಬೇಕು ನೀನು
ಎಂದಾಗಲೆಲ್ಲಾ ನಾನೆನ್ನುತ್ತಿದ್ದೆ
‘ನೀನು ರಾಮನಾದರೆ’
ಅಷ್ಟೇ ಪಲ್ಲಟಿಸಿಬಿಟ್ಟಿತು ಬದುಕು.
ಪರಿಪರಿಯಾದ
ಯಾವ ಪ್ರಲಾಪವೂ ಪ್ರಕೋಪವೂ ಇಲ್ಲದೇ.

ಈಗ ಪೇಟೆದಾರಿಯಲ್ಲಿ
ಕೈ ಕೈ ಹಿಡಿದು ನುಲಿವ
ಅವರು ಗೋಚರಿಸುವುದಿಲ್ಲ.
ಅದಕ್ಕೆಂದೆ ಗುತ್ತು ಬದಲಿಸಿ ಬೆಟ್ಟದ
ನೆತ್ತಿಯ ಮೇಲೆ ಕೂತೆ.
ಕನಸ ಕವನ ನೆಲನೆಲ್ಲಿಯ ಬಾಯಿಗಿಟ್ಟಿತು
ಸೋಂಕಿನ ಶೀತಕ್ಕೆ ರಾಮಬಾಣ
ಮನೆ ಕಿಬಳಿಯ ಬದಿಯಲ್ಲೆ
ಹುಟ್ಟಿದ ಇದಕ್ಕೆ ಅದೆಂಥಾ
ಇಸ್ರೂಪದ ಹೆಸರು- ನೆಲನೆಲ್ಲಿ
ಪೇಟೆದಾರಿಯಲ್ಲಿ ಸಿಗದ ಇದನ್ನು
ಹಿತ್ತಲು ಹುಡುಕಿಯೇ ತೆಗೆದದ್ದು
ಒಂದಿಷ್ಟು ನೀರು ಸೇರಿಸಿ ಕುದಿಸಿ ರಸ
ಬಸಿದು ಕುಡಿದಷ್ಟು ರಸವುಕ್ಕಿಸಿ
ಜಗವ ತೋರುವ ಕಣ್ಣಾದದ್ದು
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...