Home / ಕವನ / ಕವಿತೆ / ಸಂದೂಕದೊಳಗಣ ಕಡತ

ಸಂದೂಕದೊಳಗಣ ಕಡತ

ಅವನ ನೆನಪಿನ ಕಿರು
ಕಡತಗಳು ಹಾಗೆ ಇವೆ.
ಸಂದೂಕದ ಅಡಿಯಲ್ಲಿ ಅಲ್ಲಲ್ಲಿ
ಧೂಳಿನ ಲೇಪನಗೊಂಡು

ಎಡತಾಕುವ ಬೆಕ್ಕಿನಂತೆ
ಸದಾ ಹಿಂದೆ ಸುತ್ತುತ್ತಿದ್ದವ
ಅಪರೂಪದ ಬಿಳಿ ಪಾರಿವಾಳವಾದ.
ನನ್ನೆದೆಯ ಗೂಡಲ್ಲಿ
ಕಾಪಿಡುವೆ ನಿನ್ನ ಎಂದವ
ನನ್ನೊಡಲ ಚಿಗುರು ಚೆಲುವುಗಳನ್ನೆಲ್ಲಾ
ಚಿಂದಿಗೊಪ್ಪಿಸಿ ನಡೆದ.

ಸರದಿ ಸಾಲಿನ ಇರುವೆಗಳಂತೆ
ಕಾದು ನಿಂತವರ ಕಡೆಗಣಿಸಿ
ತೆಕೈಸಿ ಬಂದರೆ
ಇರುವೆಯ ಕಾಲಲ್ಲಿ ಹೊಸಕಿದಂತೆ
ಹಿಸುಕಿ ಹಾಕಿದ..
ನೋವಿನ ಕಟಕಟೆಯಲ್ಲಿ
ನಿಂತಾಗಲೆಲ್ಲಾ
ಕೊರೆವ ಗರಗಸದ ಆತ್ಮಗತ
ಪಾಟಿಸವಾಲು

ಆದರೀಗ.. ಈಗೀಗ
ಸಂದೂಕದ ಸಂದಿಗೊಂದಿಗಳು
ಮೇಲೈಯಲ್ಲಿ
ವಿಪರೀತ ಅಲಂಕೃತಗೊಂಡಿವೆ.
ಹೊಸ ಪುಸ್ತಕವೊಂದು ಸಂದೂಕದ
ಬೆನ್ನೇರಿದೆ.
ಬಿಚ್ಚಿ ಮೈ ಚಾಚಿದೆ
ಅರ್‍ವಾಚೀನ ಸೌಂದರ್ಯದ
ನಾವಿನ್ಯತೆ ತೊಟ್ಟು.

ಆದರೂ ನೆನಪುಗಳು ಬೆದರುತ್ತವೆ
ಹಿಡಿದಿಡಲಾಗದೇ
ಹಳೆಯ ಉಸಿರ ಬಸಿರ
ಕಡತಗಳ ತೆಗೆದೊಮ್ಮೆ
ನೋಡಬೇಕೆನಿಸುತ್ತದೆ
ಅದೇ ಗಟ್ಟಿತನವೇ?
ಇಲ್ಲ. ಗೆದ್ದಲುಗೊಂಡ
ಪುಡಿಪುಡಿಗೊಂಡ ಕಾಗದದ ಚೂರೇ
ಎಂದು.
ಓದಬಲ್ಲನೇ ನಾನು
ಹಳೆಯ ದಿಟ್ಟಿಯ ಹಿಡಿದು
ಕನ್ನಡಕದ ದೃಷ್ಟಿಯಲ್ಲಿ ಮುಳುಗಿದವಳಿಗೆ
ತಿಳಿದೀತೆ ಮೊಗೆವ ಮಮತೆಯ
ಮಧುರ ಧಾರೆಯ ಚುಕ್ಕಿ ಹೊಳಪು.
ಕಂಡೀತೆ ಮಗದೊಮ್ಮೆ
ಅವನಲ್ಲೂ ಈ ಚಳಕು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...