Home / ಕವನ / ಕವಿತೆ / ಸಂದೂಕದೊಳಗಣ ಕಡತ

ಸಂದೂಕದೊಳಗಣ ಕಡತ

ಅವನ ನೆನಪಿನ ಕಿರು
ಕಡತಗಳು ಹಾಗೆ ಇವೆ.
ಸಂದೂಕದ ಅಡಿಯಲ್ಲಿ ಅಲ್ಲಲ್ಲಿ
ಧೂಳಿನ ಲೇಪನಗೊಂಡು

ಎಡತಾಕುವ ಬೆಕ್ಕಿನಂತೆ
ಸದಾ ಹಿಂದೆ ಸುತ್ತುತ್ತಿದ್ದವ
ಅಪರೂಪದ ಬಿಳಿ ಪಾರಿವಾಳವಾದ.
ನನ್ನೆದೆಯ ಗೂಡಲ್ಲಿ
ಕಾಪಿಡುವೆ ನಿನ್ನ ಎಂದವ
ನನ್ನೊಡಲ ಚಿಗುರು ಚೆಲುವುಗಳನ್ನೆಲ್ಲಾ
ಚಿಂದಿಗೊಪ್ಪಿಸಿ ನಡೆದ.

ಸರದಿ ಸಾಲಿನ ಇರುವೆಗಳಂತೆ
ಕಾದು ನಿಂತವರ ಕಡೆಗಣಿಸಿ
ತೆಕೈಸಿ ಬಂದರೆ
ಇರುವೆಯ ಕಾಲಲ್ಲಿ ಹೊಸಕಿದಂತೆ
ಹಿಸುಕಿ ಹಾಕಿದ..
ನೋವಿನ ಕಟಕಟೆಯಲ್ಲಿ
ನಿಂತಾಗಲೆಲ್ಲಾ
ಕೊರೆವ ಗರಗಸದ ಆತ್ಮಗತ
ಪಾಟಿಸವಾಲು

ಆದರೀಗ.. ಈಗೀಗ
ಸಂದೂಕದ ಸಂದಿಗೊಂದಿಗಳು
ಮೇಲೈಯಲ್ಲಿ
ವಿಪರೀತ ಅಲಂಕೃತಗೊಂಡಿವೆ.
ಹೊಸ ಪುಸ್ತಕವೊಂದು ಸಂದೂಕದ
ಬೆನ್ನೇರಿದೆ.
ಬಿಚ್ಚಿ ಮೈ ಚಾಚಿದೆ
ಅರ್‍ವಾಚೀನ ಸೌಂದರ್ಯದ
ನಾವಿನ್ಯತೆ ತೊಟ್ಟು.

ಆದರೂ ನೆನಪುಗಳು ಬೆದರುತ್ತವೆ
ಹಿಡಿದಿಡಲಾಗದೇ
ಹಳೆಯ ಉಸಿರ ಬಸಿರ
ಕಡತಗಳ ತೆಗೆದೊಮ್ಮೆ
ನೋಡಬೇಕೆನಿಸುತ್ತದೆ
ಅದೇ ಗಟ್ಟಿತನವೇ?
ಇಲ್ಲ. ಗೆದ್ದಲುಗೊಂಡ
ಪುಡಿಪುಡಿಗೊಂಡ ಕಾಗದದ ಚೂರೇ
ಎಂದು.
ಓದಬಲ್ಲನೇ ನಾನು
ಹಳೆಯ ದಿಟ್ಟಿಯ ಹಿಡಿದು
ಕನ್ನಡಕದ ದೃಷ್ಟಿಯಲ್ಲಿ ಮುಳುಗಿದವಳಿಗೆ
ತಿಳಿದೀತೆ ಮೊಗೆವ ಮಮತೆಯ
ಮಧುರ ಧಾರೆಯ ಚುಕ್ಕಿ ಹೊಳಪು.
ಕಂಡೀತೆ ಮಗದೊಮ್ಮೆ
ಅವನಲ್ಲೂ ಈ ಚಳಕು.
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...