ಮಲ್ಲಿಗೆಯೆಂಬ ಪರಿಮಳ ಸಾಲೆ

ಬಿಳಿಮಲ್ಲಿಗೆಯ ಕಂಪು ಕೊಳೆತು
ನಾರುವುದು ಗಾಳಿಗಂಧ ಆಡದ ಕಡೆಯಲ್ಲಿ
ತುರುಕಿ ಬಲವಂತ
ಮುಚ್ಚಿ ಹೊರತೋರದಂತೆ
ಅದುಮಿ ಇಟ್ಟು ಬಿಟ್ಟರೆ.
ಕೊಳೆಯದಂತಿಡಬೇಕು,
ಕೆಡದಂತಿರಬೇಕು.

ಮಲ್ಲಿಗೆ ಅರಳುವುದು
ಎಲರ ಅಲೆಯೊಳಗೆ ತೇಲಿ
ಪರಿಮಳ ಸಾಲೆಯಾಗಿ
ಪರಮಲೋಕವನ್ನೇ ಕಣ್ಣಲ್ಲಿ ಮೆರೆಸುವುದು

ಗೊತ್ತಲ್ಲ ನಿನಗೆ,
ಪ್ರೇಮದ ಕಣ್ಣು ತೆರೆದು ಕೊಂಡಷ್ಟು
ಮುದಗೊಳ್ಳುತ್ತದೆ ಮಲ್ಲಿಗೆ ಮನಸ್ಸು
ಎಷ್ಟೆಲ್ಲಾ ಜೀವಗಳ ಸೆಳೆವ ಯೋಗ
ಹೂದಾನಿಯಲ್ಲಿ ಬಿರಿದ ಮೊಗ್ಗು,
ಬಯಲ ಕೊನೆಯಲ್ಲಿ ಅರಳಿದ ಹೂ
ಇಬ್ಬನಿಯಿಂದಲೇ ಒದ್ದೆಯಾಗುತ್ತವೆ
ಮುಂಜಾನೆಯ ಹತ್ತಿ ಬಿಳುಪಿನ
ಹೊಸ ಭಾಷ್ಯ
ಉಕ್ಕಿ ಪಲ್ಲವಿಸುತ್ತವೆ
ಗಿಡ ಬಳ್ಳಿ ಚಿಗುರು ಹೂ ಹಣ್ಣು
ಕಪ್ಪುಮಣ್ಣಿನ ಸಾರ ಬೇರು
ಕಾಂಡದಲ್ಲೆಲ್ಲಾ ಕಸುವುಕ್ಕಿಸಿ
ಗರಿಗೆದರುತ್ತದೆ ಬಯಕೆ
ಕಾಮದ ತೋರಬೆರಳಿಗೆ
ಮಲ್ಲಿಗೆ ಹಾರ ಪ್ರೇಮದುಂಗುರ ತೊಡುಗೆ
ಘಮ್ ಘಮಲು…

ಮಲ್ಲಿಗೆಯ ಮೈದೊಗಲ ಮಾಯೆ
ದಾಹದ ನಾಲಿಗೆಗಳ ತೆರೆದುಬಿಡುವುದು
ಮುತ್ತುವ ದುಂಬಿಗಳ ಮೆಚ್ಚು ನೆಚ್ಚು
ಕಕ್ಕುವ ಹಿಕ್ಕೆಯಾಗಲುಬಹುದು
ಮಲ್ಲಿಗೆ ನುಣುಪುತನ
ಮಿದುತನ ವಿಷಮ ಬಾಹುಗಳಲ್ಲಿ
ಬಂಧಿಯಾಗಿ ಪುಡಿಗಟ್ಟಿ ಹೋಗದಂತಿರಬೇಕು

ಗೊತ್ತು ಮಾಡಿಕೊಳ್ಳಬೇಕು
ಕಿರು ನಾರೇ ಆದರೂ ಸಾಕು
ಹೆಣಿಗೆಯಲ್ಲಿ ಹೊದ್ದ ಗಡಸು ಬಂಧ
ಮಲ್ಲಿಗೆ ಮುದುರಿಕೊಂಡರೂ,
ಕಮರಿಹೋದರೂ
ಕಳೆದುಕೊಳ್ಳದಂತೆ ಪರಿಮಳದ ಸ್ನಿಗ್ಧ ಆನಂದ
ಸದಾ ಕಾಯುವುದು ಹೆಣ್ಣಹೆರಳಿಗೆ
ಮಾಲೆಯಾಗಿ
ಇಲ್ಲ ಗುಡಿಯ ಗಣಪನ
ಕೊರಳ ಹಾರವಾಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦
Next post ಮುಸ್ಸಂಜೆಯ ಮಿಂಚು – ೮

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…