Home / ಕವನ / ಕವಿತೆ / ಮಲ್ಲಿಗೆಯೆಂಬ ಪರಿಮಳ ಸಾಲೆ

ಮಲ್ಲಿಗೆಯೆಂಬ ಪರಿಮಳ ಸಾಲೆ

ಬಿಳಿಮಲ್ಲಿಗೆಯ ಕಂಪು ಕೊಳೆತು
ನಾರುವುದು ಗಾಳಿಗಂಧ ಆಡದ ಕಡೆಯಲ್ಲಿ
ತುರುಕಿ ಬಲವಂತ
ಮುಚ್ಚಿ ಹೊರತೋರದಂತೆ
ಅದುಮಿ ಇಟ್ಟು ಬಿಟ್ಟರೆ.
ಕೊಳೆಯದಂತಿಡಬೇಕು,
ಕೆಡದಂತಿರಬೇಕು.

ಮಲ್ಲಿಗೆ ಅರಳುವುದು
ಎಲರ ಅಲೆಯೊಳಗೆ ತೇಲಿ
ಪರಿಮಳ ಸಾಲೆಯಾಗಿ
ಪರಮಲೋಕವನ್ನೇ ಕಣ್ಣಲ್ಲಿ ಮೆರೆಸುವುದು

ಗೊತ್ತಲ್ಲ ನಿನಗೆ,
ಪ್ರೇಮದ ಕಣ್ಣು ತೆರೆದು ಕೊಂಡಷ್ಟು
ಮುದಗೊಳ್ಳುತ್ತದೆ ಮಲ್ಲಿಗೆ ಮನಸ್ಸು
ಎಷ್ಟೆಲ್ಲಾ ಜೀವಗಳ ಸೆಳೆವ ಯೋಗ
ಹೂದಾನಿಯಲ್ಲಿ ಬಿರಿದ ಮೊಗ್ಗು,
ಬಯಲ ಕೊನೆಯಲ್ಲಿ ಅರಳಿದ ಹೂ
ಇಬ್ಬನಿಯಿಂದಲೇ ಒದ್ದೆಯಾಗುತ್ತವೆ
ಮುಂಜಾನೆಯ ಹತ್ತಿ ಬಿಳುಪಿನ
ಹೊಸ ಭಾಷ್ಯ
ಉಕ್ಕಿ ಪಲ್ಲವಿಸುತ್ತವೆ
ಗಿಡ ಬಳ್ಳಿ ಚಿಗುರು ಹೂ ಹಣ್ಣು
ಕಪ್ಪುಮಣ್ಣಿನ ಸಾರ ಬೇರು
ಕಾಂಡದಲ್ಲೆಲ್ಲಾ ಕಸುವುಕ್ಕಿಸಿ
ಗರಿಗೆದರುತ್ತದೆ ಬಯಕೆ
ಕಾಮದ ತೋರಬೆರಳಿಗೆ
ಮಲ್ಲಿಗೆ ಹಾರ ಪ್ರೇಮದುಂಗುರ ತೊಡುಗೆ
ಘಮ್ ಘಮಲು…

ಮಲ್ಲಿಗೆಯ ಮೈದೊಗಲ ಮಾಯೆ
ದಾಹದ ನಾಲಿಗೆಗಳ ತೆರೆದುಬಿಡುವುದು
ಮುತ್ತುವ ದುಂಬಿಗಳ ಮೆಚ್ಚು ನೆಚ್ಚು
ಕಕ್ಕುವ ಹಿಕ್ಕೆಯಾಗಲುಬಹುದು
ಮಲ್ಲಿಗೆ ನುಣುಪುತನ
ಮಿದುತನ ವಿಷಮ ಬಾಹುಗಳಲ್ಲಿ
ಬಂಧಿಯಾಗಿ ಪುಡಿಗಟ್ಟಿ ಹೋಗದಂತಿರಬೇಕು

ಗೊತ್ತು ಮಾಡಿಕೊಳ್ಳಬೇಕು
ಕಿರು ನಾರೇ ಆದರೂ ಸಾಕು
ಹೆಣಿಗೆಯಲ್ಲಿ ಹೊದ್ದ ಗಡಸು ಬಂಧ
ಮಲ್ಲಿಗೆ ಮುದುರಿಕೊಂಡರೂ,
ಕಮರಿಹೋದರೂ
ಕಳೆದುಕೊಳ್ಳದಂತೆ ಪರಿಮಳದ ಸ್ನಿಗ್ಧ ಆನಂದ
ಸದಾ ಕಾಯುವುದು ಹೆಣ್ಣಹೆರಳಿಗೆ
ಮಾಲೆಯಾಗಿ
ಇಲ್ಲ ಗುಡಿಯ ಗಣಪನ
ಕೊರಳ ಹಾರವಾಗಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...