Home / ಕವನ / ಕವಿತೆ / ಊರುಗೋಲಿನ ಸುತ್ತ

ಊರುಗೋಲಿನ ಸುತ್ತ

ನಗು ಬಿತ್ತುವುದು ಅವಳಿಗೆ ಕಷ್ಟವೇನಲ್ಲ.
ನೆತ್ತರು ಬಸಿದ ಬಿಳಿಚಿದ ಮೊಗದಲ್ಲೂ
ಮಲ್ಲಿಗೆ ಅರಳಿಸುತ್ತಾಳೆ.
‘ಅಮ್ಮಾ,, ಬಸಳೇ ಸೊಪ್ಪು ತಂದಿ,
ಏಗಟ್ಟೇ ಮುರ್‍ಕಂಡ ಬಂದಿನ್ರಾ
ತಾಜಾನೇ ಇತು.. ಬರ್ರಾ ಬ್ಯಾಗೆ,
ಬಿಚಲು ನೆತ್ತಿಗೆ ಬಂದ್ರೇ ಮತ್ತೇ ತಿರುಗುಕಾಗುಲಾ.’

ಊರುಗೋಲಿನ ಟಕ್ ಟಕ್ ಸದ್ದು
ನೆಲದ ಬಸಿರಿಂದಲೇ ಹುಟ್ಟಿದಂತೆ.
ಒಳಕೋಣೆಯಿಂದ ಒಂಟಿ ದನಿ
‘ಬಂದೇ ತಡಿಯೇ, ಈ ಮುದುಕಿಗೆ
ಕಾಲ ಮುರ್‍ಕಾ ಅಂತ್ಯಾ.. ನಾನೇನ ಹೊಂತಗಾರಿಣ್ಯೇ?’

ಬಾಡಿದ ಮುಖದ ತುಂಬಾ
ಸಿಡಿಲು ಕೊರೆದ ಚೀರು ಚೀರು
ಸೀಳು ಗೆರೆಗಳು ಮುಗುಳ್ನಗುತ್ತವೆ. ಮುದ್ದಾದ
ನಗು ಚೆಲ್ಲುವ ಇವಳ ನೋಡುತ್ತಾ
ಒಂದಾನೊಂದು ಕಾಲ ನೆನಪಾಗುತ್ತದೆ.

ದುಂಡು ಮಲ್ಲಿಗೆ ಧರಿಸಿ ಬಂದ ಆಕೆ
ಹೊತ್ತ ಬುಟ್ಟಿಯ ಕೆಳಗಿಟ್ಟು
ಇರ್‍ಕಿ ತೆಗೆದಿರಿಸಿದಳು
ಬಾಗಿದ ತುರುಬನ್ನು ತಿರುತಿರುಗಿ
ಬಿಚ್ಚಿ ಸರಿ ಮಾಡಿದಳು.
‘ಅಮ್ಮಾ.. ಏನ ಬೇಕ್ರಾ.. ಬಸಳಿ, ಹರ್‍ಗಿ, ಬದನೀ.
ಎಲ್ಲಾ ತಂದಿ’
ಮೃಧುಭಾವಗಳು ವಿನಿಮಯಗೊಳ್ಳುತ್ತ
ಹಸಿರು ತರಕಾರಿಗಳು ನಳನಳಿಸುವಂತೆ
ಬೆವರಿಳಿದ ಮುಖದಲ್ಲೂ ಒಣಗಿದ ಗಂಟಲಲ್ಲೂ
ಉಕ್ಕುತ್ತದೆ ಜೀವದ್ರವ್ಯ. ನುಜ್ಜುಗುಜ್ಜಾದ ಕೈ
ಬೆಲ್ಲ ನೀರುಡಿಸುತ್ತದೆ.

‘ಪಾಪ ಮುದುಕಿ, ನೌಕ್ರಿ ಮಾಡು ಮಕ್ಕಳೆಂತಕೆ,
ನೋಡುದಿಲ್ಲಾ ಬಿಡುದಿಲ್ಲಾ,
ಸುಮ್ನೆ ಈದ ಸಾಯ್ತಿದು ಮುದ್ಕಿ’

ಅಂದುಕೊಳ್ಳುತಾ ಹಣ ಸಂಚಿಗೆ ಸೇರಿಸಿ
ಅಂಗಳವನ್ನೆಲ್ಲಾ ಗುಡಿಸಿಟ್ಟು ಹೋಗುತ್ತಾಳೆ.

‘ಪ್ರಾಯದ ಹೆಣ್ಣು. ಎಷ್ಟೊಂದು ಕಷ್ಟ.
ಅಯ್ಯೋ ಹೆಣ್ಣ ಜನ್ಮವೇ’

ಉಸುಗುಡುತ್ತಾ ಊರುಗೋಲು ಮೆಟ್ಟಿಲೇರಿ
ಕೋಣೆ ಸೇರುತ್ತದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...