ಕನ್ನಡ ನಾಡು

ಇದುವೆ.. ಇದುವೆ.. ನಮ್ಮ ಕನ್ನಡ ನಾಡು
ಸರ್ವರ ಸುಖವ ಬಯಸಿದ ನಾಡು
ಸಾಮಾಜಿಕ ನ್ಯಾಯ; ಕಾಯಕ, ಭಕ್ತಿಯ ಬಸವನ ಬೀಡು
ದಿಕ್ಕು, ದಿಕ್ಕಲಿ ಜ್ಯೋತಿಯ ಹೊತ್ತಿಸಿ
ಧರ್ಮ, ಸಂಸ್ಕೃತಿ ಬೆಳಗಿದ ನಾಡು.

ಅಂಧಾನುಕರಣೆ, ಆಚರಣೆಗಳ
ಬುಡವನು ಅಲುಗಿಸಿ, ಕ್ರಾಂತಿಯ ಮೊಳಗಿಸಿ
ಸಂಗೀತ, ಸಾಹಿತ್ಯ ಸಿರಿಯನು ಮೆರೆದ
ಸಂತ, ಪುರಂದರ, ಕನಕರ ನಾಡು.

ಬದುಕಿನ ಗಾಢ ಅನುಭವಗಳನು
ಸರಳೀಕರಿಸಿ ಸುಂದರವಾಗಿ ಶ್ರುತಪಡಿಸಿರುವ
ವಚನಕಾರರು, ಜನಪದರು, ಸರ್ವಜ್ಞರು ಬಂದ
ಶಾರದಾ ಪೀಠದ…
ಚೆಲುವು, ಕಲೆಗಳ ಸಂಗಮ ನಾಡು.

ಅನ್ಯರ ಹೆಣ್ಣು, ಹೊನ್ನು, ಮಣ್ಣು
ಕಣ್ಣೆತ್ತಿಯು ನೋಡದ ಹಿರಿಗುಣದವರು
ದುಷ್ಟರ, ದುರುಳರ ಸಂತತಿ ತರಿದು
ಶಾಂತಿ ಸಜ್ಜನಿಕೆ ಕಂಕಣ ಬದ್ಧ
ಶ್ರೀ ಭುವನೇಶ್ವರಿ ಮಕ್ಕಳ ನಾಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೈದ್ಯರ ಒಗ್ಗರಣೆ
Next post ಅನ್ನಕೆಮ್ಮವಯವ ಬಳಸದೊಡದನು ಸಾವಯವವೆನಲುಂಟೇ ?

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…