ಕನ್ನಡ ನಾಡು

ಇದುವೆ.. ಇದುವೆ.. ನಮ್ಮ ಕನ್ನಡ ನಾಡು
ಸರ್ವರ ಸುಖವ ಬಯಸಿದ ನಾಡು
ಸಾಮಾಜಿಕ ನ್ಯಾಯ; ಕಾಯಕ, ಭಕ್ತಿಯ ಬಸವನ ಬೀಡು
ದಿಕ್ಕು, ದಿಕ್ಕಲಿ ಜ್ಯೋತಿಯ ಹೊತ್ತಿಸಿ
ಧರ್ಮ, ಸಂಸ್ಕೃತಿ ಬೆಳಗಿದ ನಾಡು.

ಅಂಧಾನುಕರಣೆ, ಆಚರಣೆಗಳ
ಬುಡವನು ಅಲುಗಿಸಿ, ಕ್ರಾಂತಿಯ ಮೊಳಗಿಸಿ
ಸಂಗೀತ, ಸಾಹಿತ್ಯ ಸಿರಿಯನು ಮೆರೆದ
ಸಂತ, ಪುರಂದರ, ಕನಕರ ನಾಡು.

ಬದುಕಿನ ಗಾಢ ಅನುಭವಗಳನು
ಸರಳೀಕರಿಸಿ ಸುಂದರವಾಗಿ ಶ್ರುತಪಡಿಸಿರುವ
ವಚನಕಾರರು, ಜನಪದರು, ಸರ್ವಜ್ಞರು ಬಂದ
ಶಾರದಾ ಪೀಠದ…
ಚೆಲುವು, ಕಲೆಗಳ ಸಂಗಮ ನಾಡು.

ಅನ್ಯರ ಹೆಣ್ಣು, ಹೊನ್ನು, ಮಣ್ಣು
ಕಣ್ಣೆತ್ತಿಯು ನೋಡದ ಹಿರಿಗುಣದವರು
ದುಷ್ಟರ, ದುರುಳರ ಸಂತತಿ ತರಿದು
ಶಾಂತಿ ಸಜ್ಜನಿಕೆ ಕಂಕಣ ಬದ್ಧ
ಶ್ರೀ ಭುವನೇಶ್ವರಿ ಮಕ್ಕಳ ನಾಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೈದ್ಯರ ಒಗ್ಗರಣೆ
Next post ಅನ್ನಕೆಮ್ಮವಯವ ಬಳಸದೊಡದನು ಸಾವಯವವೆನಲುಂಟೇ ?

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys