ಸಣ್ಣತನವ ನೀಗಿ

ನೀಗಿ… ನೀಗಿ… ನೀಗಿ…
ನನ್ನ ನೀನು, ನಿನ್ನ ನಾನು
ಕಂಡರಾಗದಂತ
ಸಣ್ಣತನವ ನೀಗಿ.

ನಿನ್ನ ಕೈಯ ನಾನು ಹಿಡಿವೆ
ನೀನು ಹಿಡಿ ಇನ್ನೊಬ್ಬರ
ಹೀಗೆ ಮುಂದೆ ಸಾಗುವ
ಬದುಕಿನಲ್ಲಿ ಪ್ರೀತಿ ಕಾಣುವ.

ಏನೇ ಎಡರು ತೊಡರು ಬರಲಿ
ಕೂಡಿ ಬದುಕುವ
ನನ್ನ ನಿನ್ನ ಬುದ್ಧಿ ಶಕ್ತಿ ಒಳ್ಳೆ ರೀತಿ ಬಳಸಿ
ಪರಿಹಾರ ಕಂಡುಕೊಳ್ಳುವ.

ನೀನು ದುಡಿ, ನಾನು ದುಡಿವೆ
ಕೂಡಿ ಉಣ್ಣುವ
ನಗುವ, ನಲಿವ
ನ್ಯಾಯ ರೀತಿ ಬಾಳುವ.

ನನ್ನ ನೀನು, ನಿನ್ನ ನಾನು ಗೌರವಿಸಿ
ಬಣ್ಣ, ಬಗೆ, ದೇಶ, ಭಾಷೆ ಯಾವುದೂ
ನಮ್ಮ ಸರಸ ಬದುಕಿಗೆ
ಅಡ್ಡವಾಗದಂತೆ ನೋಡಿಕೊಳ್ಳುವ.

ಎಂತ ವೇಳೆ ಬಂದರೂ
ನನ್ನ ಮೇಲೆ ನೀನು, ನಿನ್ನ ಮೇಲೆ ನಾನು
ಕೈಯ ಮಾಡದಿರುವ
ಅಸಹನೆಯ ಹೇಯ ಬೇರು ಕಿತ್ತು ಹಾಕುವ.

ನಾನು ನೀನು ಯಾರೇ ಆಗಲಿ
ಬದುಕಲೆಂದೆ ಬಂದವರು
ಯಾರೂ ಯಾರ ಬದುಕನು
ಕಿತ್ತುಕೊಳ್ಳಬಾರದು.

ಕಲಹವೆಂದೂ ನಗು ನಲಿವು ತಂದುದಿಲ್ಲ
ಎಂದೆಂದಿಗೂ ಅದು ಒಂದು
ಯಾರಿಗೂ… ಯಾವುದಕ್ಕೂ
ಪರಿಹಾರವಲ್ಲ; ಅವಿವೇಕ ಸಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಂಕಿ ಬಿದ್ದ ಬಯಲು
Next post ಪರಿಶೀಲಿಸಲೀ ಸಾವಯವದರ್ಥ ವೈಶಾಲ್ಯ ತಿಳಿಯದೇ?

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys