ಮರದ ಮರಗು

ಮರ
ಸರ್ವೋಪಯೋಗಿ
ನಿಸರ್ಗದ ವರ
ಹಾದಿ ಬದಿಯಲಿ ನಿಂತು ಕೊರಗುತಿದೆ.

ನಾನು
ಜೀವ ವಿರೋಧಿಯಲ್ಲ
ಅಲ್ಲಗಳೆಯರು ಯಾರೂ ಇದನು!
ಆದರೂ… ಕೆಲವರು
ನನ್ನ ಮರೆಗೆ ಬರುವರು
ಮಾಡ ಬಾರದುದ ಮಾಡುವರು
ಸ್ವಯಂ ಸೊಂಪಾಗಿ ಬೆಳೆದುದ ತಪ್ಪುಮಾಡಿ
ಕೊಂಬೆ ರೆಂಬೆಗಳ ಎಳೆದೆಳೆದು ತುಳಿವರು, ಕಡಿವರು
ಹೋಗುತ್ತ… ಬರುತ್ತ… ಸುಮ್ಮ ಸುಮ್ಮನೆ ಕಲ್ಲು ಹೊಡೆವರು
ಮನ ಬಂದಂತೆ ಹಿಂಸಿಸುವರು
ತಣಿಯರು
ಅನ್ಯರನ್ನೂ ಹಿಂಸೆಗೆ ಪ್ರೇರೆಪಿಸುವರು
ವಿಕಟ ವಿನೋದಿಗಳು
ನಮ್ಮಂತಹ ತಮ್ಮ ಮಂದಿಯನ್ನೂ ಬಿಡರು.

ಲೋಕದಲಿ
ಎಲ್ಲರಿಗೂ ಪ್ರಿಯರಾರು
ದೇವರು ಸೇರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವಸ್ಥಾನ ಪ್ರವೇಶ
Next post ಕೃಷಿಯೆಂದು ಒಂದು ಹೆಸರು ಸಾಲದೇ ?

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…