Home / ಕವನ / ಕವಿತೆ / ತಲೆಗಳು ಬೇಕು ತಲೆಗಳು

ತಲೆಗಳು ಬೇಕು ತಲೆಗಳು

ತಲೆಗಳು ಬೇಕು ತಲೆಗಳು
ಖಾಲಿ ತಲೆಗಳು ಬೇಕು
ಬಿಕರಿಗಿರುವ
ತಲೆಗಳಲ್ಲದ ತಲೆಗಳು ಬೇಕು.

ಸರಕಾಗಿ
ಬಳಕೆಗೆ ಸಿದ್ಧವಿರುವ
ಬೇಕಾದುದ, ಬೇಗ, ಸುಲಭವಾಗಿ
ತುಂಬಿಕೊಳ್ಳಬಹುದಾದ ಭೃತ್ಯ ತಲೆಗಳು ಬೇಕು.

ತನ್ನ ಕಣ್ಣುಗಳಲಿ
ನಮ್ಮ ವಿನಃ
ತನ್ನನ್ನಾಗಲಿ ಯಾರನ್ನಾಗಲಿ
ಛಾಪಿಸಿಕೊಳ್ಳದಿರುವ ಸೇವಾವ್ರತಿ ತಲೆಗಳು ಬೇಕು.

ವಾಸನೆ ಗ್ರಹಿಸಿ
ಆಗುವುದು ಆಗದಿರುವುದು ವಿಂಗಡಿಸಿ
ಮೇಲ್ಮೆಗೈಯ್ಯುವ
ಅಪೂರ್ವ ಶಕ್ತಿಯುಕ್ತಿಯ ಚತುರ ನಾಯಿ ತಲೆಗಳು
ಬೇಕು.

ನಮ್ಮನ್ನು ಸಹಿಸದ ದನಿ
ಹತ್ತಿರದ ದೂರದ ಯಾವುದೇ ಆಗಲಿ
ಹೇಗೆ ಮೊರೆದರೂ ಮಣಿಯದ
ನಮ್ಮದಕ್ಕೆ ತಕ್ಷಣವೆ ಸ್ಪಂದಿಸುವ ಯಂತ್ರಮಾನವ
ತಲೆಗಳು ಬೇಕು.

ಸುತ್ತಲ ಆಗು ಹೋಗುಗಳ ಗಮನಿಸಿ
ವಿಶ್ಲೇಷಿಸಿ
ಮಾರ್ಗದರ್ಶನ ನೀಡುವ
ಸ್ವಯಂ ಕ್ರಿಯಾಶೀಲವಾಗಿ ರಕ್ಷಿಸುವ ಮುತ್ಸದ್ದಿ,
ಮಾರಿಗೆ ತಲೆಗಳು ಬೇಕು.

ಬೆಟ್ಟದಷ್ಟು ಆಮಿಷ ಒಡ್ಡಲಿ
ಹಿಡಿದು ಹಿಂಡಿ ಹಿಪ್ಪೆ ಮಾಡಲಿ
ಸಡಿಲದ ನಿಷ್ಠೆಯ
ನಾವೆಸೆದುದನೆ ಮಹಾ ಪ್ರಸಾದವೆನ್ನುವ ಚರಣದಾಸ
ತಲೆಗಳು ಬೇಕು.

ನಮ್ಮ ನಡೆ, ನುಡಿ ಏನೇ ಇರಲಿ
ತಮ್ಮದನು ಉನ್ನತವಾಗಿರಿಸಿ
ಮಾನಾಪಮಾನ, ನ್ಯಾಯಾನ್ಯಾಯ ಗೌಣಮಾಡಿ
ತಮ್ಮ ಅಸ್ಮಿತೆಯ ನಮ್ಮದರಲಿ ಗುರತಿಸಿಕೊಳ್ಳುವ
ಗೂಂಡಾ ತಲೆಗಳು ಬೇಕು.

ಹುಬ್ಬೇರಿಸದಿರಿ
ಮಾನವತಾವಾದ ಪಠ್ಯಪುಸ್ತಕದ ಸರಕು
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...