Home / ಕವನ / ಕವಿತೆ / ತಲೆಗಳು ಬೇಕು ತಲೆಗಳು

ತಲೆಗಳು ಬೇಕು ತಲೆಗಳು

ತಲೆಗಳು ಬೇಕು ತಲೆಗಳು
ಖಾಲಿ ತಲೆಗಳು ಬೇಕು
ಬಿಕರಿಗಿರುವ
ತಲೆಗಳಲ್ಲದ ತಲೆಗಳು ಬೇಕು.

ಸರಕಾಗಿ
ಬಳಕೆಗೆ ಸಿದ್ಧವಿರುವ
ಬೇಕಾದುದ, ಬೇಗ, ಸುಲಭವಾಗಿ
ತುಂಬಿಕೊಳ್ಳಬಹುದಾದ ಭೃತ್ಯ ತಲೆಗಳು ಬೇಕು.

ತನ್ನ ಕಣ್ಣುಗಳಲಿ
ನಮ್ಮ ವಿನಃ
ತನ್ನನ್ನಾಗಲಿ ಯಾರನ್ನಾಗಲಿ
ಛಾಪಿಸಿಕೊಳ್ಳದಿರುವ ಸೇವಾವ್ರತಿ ತಲೆಗಳು ಬೇಕು.

ವಾಸನೆ ಗ್ರಹಿಸಿ
ಆಗುವುದು ಆಗದಿರುವುದು ವಿಂಗಡಿಸಿ
ಮೇಲ್ಮೆಗೈಯ್ಯುವ
ಅಪೂರ್ವ ಶಕ್ತಿಯುಕ್ತಿಯ ಚತುರ ನಾಯಿ ತಲೆಗಳು
ಬೇಕು.

ನಮ್ಮನ್ನು ಸಹಿಸದ ದನಿ
ಹತ್ತಿರದ ದೂರದ ಯಾವುದೇ ಆಗಲಿ
ಹೇಗೆ ಮೊರೆದರೂ ಮಣಿಯದ
ನಮ್ಮದಕ್ಕೆ ತಕ್ಷಣವೆ ಸ್ಪಂದಿಸುವ ಯಂತ್ರಮಾನವ
ತಲೆಗಳು ಬೇಕು.

ಸುತ್ತಲ ಆಗು ಹೋಗುಗಳ ಗಮನಿಸಿ
ವಿಶ್ಲೇಷಿಸಿ
ಮಾರ್ಗದರ್ಶನ ನೀಡುವ
ಸ್ವಯಂ ಕ್ರಿಯಾಶೀಲವಾಗಿ ರಕ್ಷಿಸುವ ಮುತ್ಸದ್ದಿ,
ಮಾರಿಗೆ ತಲೆಗಳು ಬೇಕು.

ಬೆಟ್ಟದಷ್ಟು ಆಮಿಷ ಒಡ್ಡಲಿ
ಹಿಡಿದು ಹಿಂಡಿ ಹಿಪ್ಪೆ ಮಾಡಲಿ
ಸಡಿಲದ ನಿಷ್ಠೆಯ
ನಾವೆಸೆದುದನೆ ಮಹಾ ಪ್ರಸಾದವೆನ್ನುವ ಚರಣದಾಸ
ತಲೆಗಳು ಬೇಕು.

ನಮ್ಮ ನಡೆ, ನುಡಿ ಏನೇ ಇರಲಿ
ತಮ್ಮದನು ಉನ್ನತವಾಗಿರಿಸಿ
ಮಾನಾಪಮಾನ, ನ್ಯಾಯಾನ್ಯಾಯ ಗೌಣಮಾಡಿ
ತಮ್ಮ ಅಸ್ಮಿತೆಯ ನಮ್ಮದರಲಿ ಗುರತಿಸಿಕೊಳ್ಳುವ
ಗೂಂಡಾ ತಲೆಗಳು ಬೇಕು.

ಹುಬ್ಬೇರಿಸದಿರಿ
ಮಾನವತಾವಾದ ಪಠ್ಯಪುಸ್ತಕದ ಸರಕು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...