Home / ಕವನ / ಕವಿತೆ / ನಾನು ನನ್ನವಳ ಬಾಳು

ನಾನು ನನ್ನವಳ ಬಾಳು

ನಾನು, ನನ್ನವಳ ಬಾಳು
ಏನು ಬೇರೆ ಅಂತ ಹೇಳಿ ಕೊಳ್ಳೋಣ.

ಸಂಸಾರ ವ್ರತದಲಿ
ನನ್ನನ್ನವಳು ನಾನವಳನ್ನು
ಹಂಗಿಸಿ, ಜಂಖಿಸಿ ನಡೆವುದು
ಉದ್ದಕ್ಕೂ ಇದ್ದದ್ದೆ !
ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಕೂಡಿ ಬಾಳುವಾಗ
ಇದು ಸರ್ವೇ ಸಾಮಾನ್ಯತಾನೆ ?

ಎಲ್ಲದರಲಿ
ನನಗವಳು ನಾನವಳಿಗಿರಲಿ
ಅಂಕುಶವಿರಲಿ
ನ್ಯಾಯ, ಚಾರಿತ್ರ್ಯ ಕಡೆ ನಿಗಾ ಇರಲಿ
ಒಂದು ಮಾನದಂಡವಿರಲಿ ಸಿದ್ಧಾಂತ ಪಾಲಿಸುವೆವು.

ಸಮಯದಿ
ಇಬ್ಬರೂ ಕೋಣರಾಗದೆ
ಒಬ್ಬರಾದರೂ ಜಾಣರಾಗಿ
ಮೇಲು, ಕೀಳು ಸರಿ ಹೊಂದಿಸಿ
ಏರು ಇಳುವಿನಲ್ಲಿ ಮೋರೆ ತಿರುವದೆ
ಭಾವಾವೇಶದ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗದೆ
ವಿವೇಕದಣೆಯಲ್ಲಿ… ನಿಂತು, ನಿಂತು, ಸಾಗುವೆವು.

ನಾವು
ಪರಸ್ಪರರ ಶಕ್ತಿ, ಯುಕ್ತಿಗಳ ಬಗ್ಗೆ ಬಹಳ ಆಡುವುದಿಲ್ಲ
ಉಬ್ಬಿ ಹೋಗುವುದು
ಕೀಳಿರಿಮೆಯಲ್ಲಿ ನರಳುವುದು
ಬೇಡವೆನ್ನುವೆವು
ಬದುಕಿನಲಿ
ಅನಿವಾರ್ಯವೆಂದು
ತ್ಯಾಗ, ಸೇವೆಗೆ ಮುಂದಾಗಿ
ರಾಜಿ ಮಾಡಿಕೊಳ್ಳುವೆವು.

ದೂರ, ದೂರ ಹೋಗಿ
ಎಲ್ಲಾ ರೀತಿಯ ಆರೋಗ್ಯಕ್ಕೆ ಎರವಾಗಿ
ದುರಂತಕ್ಕೆ ತಲೆಕೊಡುವ ಸಾಧ್ಯತೆಗಂಜಿ
ಯಾರಿಗೆ ತಾನೆ ಎಲ್ಲದರಲಿ ಸಮನಾಗಿರುವುದೆಂಬ
ವಾಸ್ತವವ ನಂಬಿ
ಕಳೆದು ಉಳಿದು ಕೊಳ್ಳುವ
ಛಲ, ಛಾತಿಯಲಿ ಮುಂದುವರಿಯುತಿಹೆವು

ಯಾವ ಮನ
ಇರುವುದರಲ್ಲಿ ಏನು ಕಾಣುವುದಿಲ್ಲ
ಅದ ಕಾಣದು ಇನ್ನಾವುದರಲ್ಲೂ…!
ಭೃಂಗದ ತೆರ
ಅದಕೆ, ಇದಕೆ, ಎದೆದಕೋ…
ಅಲೆದಲೆದು
ಬರಿದೆ ದಣಿವುದು; ಸಾವುದೆಂಬ
ಎಚ್ಚರಿಕೆ ಮನದಲಿರಿಸಿ ನಡೆಯುತಿಹೆವು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...