Home / ಕವನ / ಕವಿತೆ / ನಾನು ನನ್ನವಳ ಬಾಳು

ನಾನು ನನ್ನವಳ ಬಾಳು

ನಾನು, ನನ್ನವಳ ಬಾಳು
ಏನು ಬೇರೆ ಅಂತ ಹೇಳಿ ಕೊಳ್ಳೋಣ.

ಸಂಸಾರ ವ್ರತದಲಿ
ನನ್ನನ್ನವಳು ನಾನವಳನ್ನು
ಹಂಗಿಸಿ, ಜಂಖಿಸಿ ನಡೆವುದು
ಉದ್ದಕ್ಕೂ ಇದ್ದದ್ದೆ !
ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಕೂಡಿ ಬಾಳುವಾಗ
ಇದು ಸರ್ವೇ ಸಾಮಾನ್ಯತಾನೆ ?

ಎಲ್ಲದರಲಿ
ನನಗವಳು ನಾನವಳಿಗಿರಲಿ
ಅಂಕುಶವಿರಲಿ
ನ್ಯಾಯ, ಚಾರಿತ್ರ್ಯ ಕಡೆ ನಿಗಾ ಇರಲಿ
ಒಂದು ಮಾನದಂಡವಿರಲಿ ಸಿದ್ಧಾಂತ ಪಾಲಿಸುವೆವು.

ಸಮಯದಿ
ಇಬ್ಬರೂ ಕೋಣರಾಗದೆ
ಒಬ್ಬರಾದರೂ ಜಾಣರಾಗಿ
ಮೇಲು, ಕೀಳು ಸರಿ ಹೊಂದಿಸಿ
ಏರು ಇಳುವಿನಲ್ಲಿ ಮೋರೆ ತಿರುವದೆ
ಭಾವಾವೇಶದ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗದೆ
ವಿವೇಕದಣೆಯಲ್ಲಿ… ನಿಂತು, ನಿಂತು, ಸಾಗುವೆವು.

ನಾವು
ಪರಸ್ಪರರ ಶಕ್ತಿ, ಯುಕ್ತಿಗಳ ಬಗ್ಗೆ ಬಹಳ ಆಡುವುದಿಲ್ಲ
ಉಬ್ಬಿ ಹೋಗುವುದು
ಕೀಳಿರಿಮೆಯಲ್ಲಿ ನರಳುವುದು
ಬೇಡವೆನ್ನುವೆವು
ಬದುಕಿನಲಿ
ಅನಿವಾರ್ಯವೆಂದು
ತ್ಯಾಗ, ಸೇವೆಗೆ ಮುಂದಾಗಿ
ರಾಜಿ ಮಾಡಿಕೊಳ್ಳುವೆವು.

ದೂರ, ದೂರ ಹೋಗಿ
ಎಲ್ಲಾ ರೀತಿಯ ಆರೋಗ್ಯಕ್ಕೆ ಎರವಾಗಿ
ದುರಂತಕ್ಕೆ ತಲೆಕೊಡುವ ಸಾಧ್ಯತೆಗಂಜಿ
ಯಾರಿಗೆ ತಾನೆ ಎಲ್ಲದರಲಿ ಸಮನಾಗಿರುವುದೆಂಬ
ವಾಸ್ತವವ ನಂಬಿ
ಕಳೆದು ಉಳಿದು ಕೊಳ್ಳುವ
ಛಲ, ಛಾತಿಯಲಿ ಮುಂದುವರಿಯುತಿಹೆವು

ಯಾವ ಮನ
ಇರುವುದರಲ್ಲಿ ಏನು ಕಾಣುವುದಿಲ್ಲ
ಅದ ಕಾಣದು ಇನ್ನಾವುದರಲ್ಲೂ…!
ಭೃಂಗದ ತೆರ
ಅದಕೆ, ಇದಕೆ, ಎದೆದಕೋ…
ಅಲೆದಲೆದು
ಬರಿದೆ ದಣಿವುದು; ಸಾವುದೆಂಬ
ಎಚ್ಚರಿಕೆ ಮನದಲಿರಿಸಿ ನಡೆಯುತಿಹೆವು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...