Home / ಕವನ / ಕವಿತೆ / ಸಿರಿಗೊಂಬೆ

ಸಿರಿಗೊಂಬೆ

ಒಳ್ಳೆ
ಉಗಾದಿ ಹೊಂಗೆ ಮರದ್ಹಂಗೆ
ತಬ್ಬೊ ಹಂಗಿದ್ದೆ…
ನೋಡಿದ ಯಾರಿಗೂ
ಇನ್ನೊಂದ್ಸಾರಿ
ನೋಡೋ ಅಂಗಿದ್ದೆ

ಹೇಳೋದೇನು
ನಿನ್ನನ್ನೋಡಿದ ಮಾನವ್ರೆಲ್ಲಾ
ಅಬ್ಬಬ್ಬಾ! ಏನು ಚೆಲುವು; ಎಂತಾ ಸಿರಿಗೊಂಬೆ
ಕೆಟ್ಟ ಕಣ್ಣಿಲಿ ನೋಡಿದ್ರೆ
ಸಿಡಿಯಂಗೈದಳನ್ತಿದ್ರು.

ಏನಿಲ್ಲ ಅಂದ್ರು
ಕೊನೆಗೆ
ನಿನ್ನ ಕಯ್ಯಾರ
ಒಂದು ಲೋಟ ನೀರನ್ನಾದ್ರು ಕುಡಿಬೇಕು
ಅನ್ಸೋ ಅಂಗಿದ್ದೆ.

ನಿನ್ನ ಗಮನ ಸೆಳ್ಯೋಕೆ
ಒಂದು ಸೊಲ್ಲು ನುಡಿಸೋಕೆ
ತಮ್ಮ ತಮ್ಮಲ್ಲೆ ಪಂದ್ಯ ಕಟ್ಕೊತಿದ್ರು
ಏನೇನೋ ಮಾಡ್ತಿದ್ರು
ನಮ್ಮ ಊರ ಹುಡುಗರು.

ನೀನು
ಸುಮ್ನೆ ಅಂಗೆ ನೋಡಿದ್ರು
ಉಪ್ಚಾರಕೆಂದೆ ಆಡಿದ್ರು
ಸ್ವರ್ಗ ಸಿಕ್ಕಂಗಾಡ್ತಿದ್ರು.

ಏನ್ ತಿಂದು ಮಾಡಿದ್ರು
ಒಂದ್ಸಾರಿನಾದ್ರು ನೀನು
ಕಣ್ಣಿಗೆ ಬೀಳದಿದ್ರೆ
ಆವೊತ್ತೆಲ್ಲಾ…
ಏನೋ ಕಳಕಂಡಂಗೆ… ಒಳಗೊಳಗೆ

ನೀನು
‘ಸ್ವಾಮಿ’ ಹುಟ್ಟಾಕಿಂತ ಮುಂಚೆ
ಮನೆ ಕೆಲ್ಸ ಎಲ್ಲಾ ಮುಗ್ಸಿ
ನಿತ್ಯದಂತೆ ಹೋಲಕೆ ಹೊರಟು ನಿಂತರೆ…

ಎದ್ದ ಕೂಡ್ಲೆ
ನಿನ್ನ ಕಂಡು
ಖುಷಿಗೊಂಡ ಹಕ್ಕಿ ಪಕ್ಷಿ
ಉದಯರಾಗ ಹಾಡ್ತಿದ್ವು.

ಆತುರ ತಡೆಯದ ಆ ‘ಸೂರ್‍ಜ’
ನಿನ್ನ ನೋಡಾಕೆ
ಮರ ಮಂಡಿ ತೆರೆ ಸರ್‍ಸಿ
ಇಣಕ್ ಹಾಕಿದ್ದ.

ನಿನ್ನ ಹುಚ್ಚು ತುಂಬಿಕೊಂಡ
ಹಾದಿಬದಿ ಗಿಡ ಮರ
ಒಮ್ಮೆಗೆ ಎಚ್ಚೆತ್ತು…
ನಿಂತಲ್ಲೆ ಮುಲು ಮುಲುಗುಟ್ತಿದ್ವು.

ನಮ್ಮನ್ನಾರು ಕೇಳ್ತಾರಕ್ಕ
ನಿನ್ನ ತಲ್ಯಾಗಾದ್ರು ಇದ್ರೆ ಒಂದು ಸಾರ್ಥಕ
ನನ್ನ ಎತ್ಗೊ ನನ್ನ ಎತ್ಗೊ
ಬಾರೆ… ನಮ್ಮಕ್ಕ ಎಂದು
ಬಾಯ್ಬಿಟ್ ಕರಿತಿದ್ವು
ಬಣ್ಣ ಬಣ್ಣದ ಬಳ್ಳಿ ಬೇಲಿ ಹೂವು.

ಒಂದೊಂದು
ಒಂದೊಂದು ರೀತಿ
ಸವಿ ಸವಿ ಗಂಧ ಸೂಸಿ
ಪೈಪೋಟಿ ನಡೆಸ್ತಿದ್ವು.

ಹೋಗ್ಗ! ಆ ಮಣ್ಣಿಗೂ ಏನು ಮೋಹ
ನಾನ್ ಬೇರೆ ಕಾಣೆ
ಇಬ್ಬನಿ ಬಿದ್ದು ತಣ್ಣಗಾಗಿದ್ರು
ನಿನ್ನ ಪಾದ ಸೋಕಿದ ಕೂಡ್ಲೆ
ಮೆತ್ಗಂಬುಡ್ತಿತ್ತು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...