ಸಿರಿಗೊಂಬೆ

ಒಳ್ಳೆ
ಉಗಾದಿ ಹೊಂಗೆ ಮರದ್ಹಂಗೆ
ತಬ್ಬೊ ಹಂಗಿದ್ದೆ…
ನೋಡಿದ ಯಾರಿಗೂ
ಇನ್ನೊಂದ್ಸಾರಿ
ನೋಡೋ ಅಂಗಿದ್ದೆ

ಹೇಳೋದೇನು
ನಿನ್ನನ್ನೋಡಿದ ಮಾನವ್ರೆಲ್ಲಾ
ಅಬ್ಬಬ್ಬಾ! ಏನು ಚೆಲುವು; ಎಂತಾ ಸಿರಿಗೊಂಬೆ
ಕೆಟ್ಟ ಕಣ್ಣಿಲಿ ನೋಡಿದ್ರೆ
ಸಿಡಿಯಂಗೈದಳನ್ತಿದ್ರು.

ಏನಿಲ್ಲ ಅಂದ್ರು
ಕೊನೆಗೆ
ನಿನ್ನ ಕಯ್ಯಾರ
ಒಂದು ಲೋಟ ನೀರನ್ನಾದ್ರು ಕುಡಿಬೇಕು
ಅನ್ಸೋ ಅಂಗಿದ್ದೆ.

ನಿನ್ನ ಗಮನ ಸೆಳ್ಯೋಕೆ
ಒಂದು ಸೊಲ್ಲು ನುಡಿಸೋಕೆ
ತಮ್ಮ ತಮ್ಮಲ್ಲೆ ಪಂದ್ಯ ಕಟ್ಕೊತಿದ್ರು
ಏನೇನೋ ಮಾಡ್ತಿದ್ರು
ನಮ್ಮ ಊರ ಹುಡುಗರು.

ನೀನು
ಸುಮ್ನೆ ಅಂಗೆ ನೋಡಿದ್ರು
ಉಪ್ಚಾರಕೆಂದೆ ಆಡಿದ್ರು
ಸ್ವರ್ಗ ಸಿಕ್ಕಂಗಾಡ್ತಿದ್ರು.

ಏನ್ ತಿಂದು ಮಾಡಿದ್ರು
ಒಂದ್ಸಾರಿನಾದ್ರು ನೀನು
ಕಣ್ಣಿಗೆ ಬೀಳದಿದ್ರೆ
ಆವೊತ್ತೆಲ್ಲಾ…
ಏನೋ ಕಳಕಂಡಂಗೆ… ಒಳಗೊಳಗೆ

ನೀನು
‘ಸ್ವಾಮಿ’ ಹುಟ್ಟಾಕಿಂತ ಮುಂಚೆ
ಮನೆ ಕೆಲ್ಸ ಎಲ್ಲಾ ಮುಗ್ಸಿ
ನಿತ್ಯದಂತೆ ಹೋಲಕೆ ಹೊರಟು ನಿಂತರೆ…

ಎದ್ದ ಕೂಡ್ಲೆ
ನಿನ್ನ ಕಂಡು
ಖುಷಿಗೊಂಡ ಹಕ್ಕಿ ಪಕ್ಷಿ
ಉದಯರಾಗ ಹಾಡ್ತಿದ್ವು.

ಆತುರ ತಡೆಯದ ಆ ‘ಸೂರ್‍ಜ’
ನಿನ್ನ ನೋಡಾಕೆ
ಮರ ಮಂಡಿ ತೆರೆ ಸರ್‍ಸಿ
ಇಣಕ್ ಹಾಕಿದ್ದ.

ನಿನ್ನ ಹುಚ್ಚು ತುಂಬಿಕೊಂಡ
ಹಾದಿಬದಿ ಗಿಡ ಮರ
ಒಮ್ಮೆಗೆ ಎಚ್ಚೆತ್ತು…
ನಿಂತಲ್ಲೆ ಮುಲು ಮುಲುಗುಟ್ತಿದ್ವು.

ನಮ್ಮನ್ನಾರು ಕೇಳ್ತಾರಕ್ಕ
ನಿನ್ನ ತಲ್ಯಾಗಾದ್ರು ಇದ್ರೆ ಒಂದು ಸಾರ್ಥಕ
ನನ್ನ ಎತ್ಗೊ ನನ್ನ ಎತ್ಗೊ
ಬಾರೆ… ನಮ್ಮಕ್ಕ ಎಂದು
ಬಾಯ್ಬಿಟ್ ಕರಿತಿದ್ವು
ಬಣ್ಣ ಬಣ್ಣದ ಬಳ್ಳಿ ಬೇಲಿ ಹೂವು.

ಒಂದೊಂದು
ಒಂದೊಂದು ರೀತಿ
ಸವಿ ಸವಿ ಗಂಧ ಸೂಸಿ
ಪೈಪೋಟಿ ನಡೆಸ್ತಿದ್ವು.

ಹೋಗ್ಗ! ಆ ಮಣ್ಣಿಗೂ ಏನು ಮೋಹ
ನಾನ್ ಬೇರೆ ಕಾಣೆ
ಇಬ್ಬನಿ ಬಿದ್ದು ತಣ್ಣಗಾಗಿದ್ರು
ನಿನ್ನ ಪಾದ ಸೋಕಿದ ಕೂಡ್ಲೆ
ಮೆತ್ಗಂಬುಡ್ತಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸುಗಳಿಗೆ ದಡಗಳಿರುದಿಲ್ಲ
Next post ಚಂದವೆಲ್ಲರಿಗೊಂದಲ್ಲವೆಂಬಾ ದ್ವಂದ್ವ ವಂದ್ಯವಲ್ಲವೇ?

ಸಣ್ಣ ಕತೆ

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…