ನನ್ನೂರ ಬಾಲೆ

ನನ್ನೂರ ಬಾಲೆ
ರಸ ಕಾವ್ಯ ನವ್ವಾಲೆ
ಸಿಹಿ ನೀರ ತರಲೆಂದು ಅಂಗಳಕ ಇಳಿದಳಂದರೆ…
ಓಣಿಯ ಗಂಡು ಹೆಣ್ಣು ಒಟ್ಟಾಗಿ
ತೇಜಃ ಪುಂಜವು ಕಂಡಂತೆ
ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತ ನಿಲ್ಲುವರು.

ಅವಳೋ… ಕಂಡವರ ಕಣ್ಣುಗಳು ಕೆಟ್ಟದಿದು ಅನ್ನದ ಹಾಗೆ
ಸೂಕ್ಷ್ಮವಾಗಿ ಅತ್ತಿತ್ತ ನೋಡುತ್ತ
ಏನನ್ನೋ ಹುಡುಕುತ್ತ
ತೇಲುತ್ತ ನಡೆಯುವಳು ಚಾಣಾಕ್ಷಿ

ಒಳಗಿರುವ ಜೀವ
ಹೊರಗೆಲ್ಲೂ ಸುಳಿಯದಿರಲು
ಒಂದೆಳೆ ಕುಗ್ಗುವಳು ತರಳೆ
ಎಳೆ ಬಾಳೆ ಸುಳಿಗೆ ಬೆಂಕಿ ಝಳವು ಸೋಕಿದಂತೆ.

ಯಾಕಿಲ್ಲ ಯಾಕಿಲ್ಲ ವೆನುತಲಿ
ತನ್ನನ್ನು ತಾನೇ ಸಂಭಾಳಿಸಿ ಕೊಳುತಲಿ
ಸೇದೊ ಬಾವಿಯ ಸಾರುವಳು ಅಭಿಸಾರಿಕೆ.

ಮನಸಿಲ್ಲದ ಮನಸಿನಲಿ
ಆಗಲೂ ಅವಲೋಕನ ಮುಂದುವರಿಸಿ
ಕಂಠಕ್ಕೆ ಸರಕುಣಿಕೆ ಬಿಗಿವಳು
ಬಾವಿಯಲಿ ಇಳಿಬಿಟ್ಟು
ಗುಳು ಗುಳು ತುಂಬಿಸುವಳು ಕೊಡಗಳ.

ಕಲ್ಲು ಕಟ್ಟೆಯ ಪದ್ದಿಗೆ ತುಸುವೆ ಎಡ ಪಾದವ ತೂರಿಸಿ
ಹಾರುತ್ತ, ಹಾರುತ್ತ ಸೆಳೆಯುವಳು ಮೇಲೆ
ನೋಡುವ ಕಣ್ಣಿಗೆ ಹಬ್ಬವನು ತರುವಂತ ಲಾಸ್ಯದಲಿ
ಜಾನಪದ ಲೋಕದ ಐಸಿರಿ; ಕನ್ನಡ ಕುವರಿ.

ತುಂಬಿದ ಕೊಡದಂತ ಹುಡುಗಿ.
ತಲೆಯ ಮೇಲೊಂದು ಎಡದ ನಡುವಲ್ಲೊಂದು ಕೊಡವ
ಬಾಳೆ ಬಾಹುಗಳಲ್ಲಿ ಅವುಕಿ ಹಿಡಿದು
ಭಾರವನು ತೋಲಿಸುತ
ಹೆಜ್ಜೆಯನು ಹಾಕುವಳು ತ್ರಿಭಂಗಿ ಮುದ್ರೆಯಲಿ
ನನ್ನೂರ ಬೆಡಗಿನ ಬಿಡದಿ.

ಸಾಲದು ಎಂಬಂತೆ
ಹುಡುಕಿ ಹುಡುಕಿ ಮುತ್ತಿಟ್ಟ ಆ ತುಂಟ ಸೂರ್ಯ
ಮೂಗುತಿ ಮೇಲೆ ತುಳುಕಿದ ಹನಿಯೊಂದ
ಸುರ ಬಿಲ್ಲು ಮೂಡಿದವು.
ಅಂದಕ್ಕೆ ಮಕುಟವಿಟ್ಟಂತಾಯ್ತು.

ಮರೆಯಲ್ಲಿ ನಿಂತು
ಬಿಡದೆ ಎಲ್ಲವನು ಆಸ್ವಾದ ಮಾಡುತ್ತಿದ್ದ ಪೋರ
ಅಂತರಂಗದ ಚೋರ
ಇದುವೆ ಸಮಯವೆಂದ
ಛಂಗನೆ ಹೊರ ಜಿಗಿದು ಎದುರಿಗೆ ನಡೆದು ಬಂದ.

ಫಕ್ಕನೆ ಮಿನುಗಿದವು ಕಣ್ಣು
ಎದೆಯ ಸೆರಗು ಬೇರೆ ಸರಿದಿತ್ತು
ನಾಚಿ ರಂಗೇರಿ ಮುಖದಿರುವೆ
ತಾರಕದಲಿ ಮಿಡಿಯಿತು ಮಿದು ಹೃದಯದ ವೀಣೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂಜಾವಿನಲ್ಲಿ
Next post ಮೌನದೊಳು ಬೆಳೆವ ಸಸ್ಯಕ್ಕೆ ಮಿತಿಯುಂಟೇ?

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…