ಇದು ಯಾವ ಜನ್ಮದ ಮೈತ್ರಿಯೋ

ಇದು ಯಾವ ಜನ್ಮದ ಮೈತ್ರಿಯೋ
ಇದು ಯಾವ ಬಂಧವೋ|
ನೀ ಯಾವ ಜನ್ಮದ ಗೆಳೆತಿಯೋ
ಅದಾವ ಜನ್ಮದ ಬಂಧುವೋ|
ಇದೇನು ಮುಂದಿರುವ ಭವಿಷ್ಯದ
ಶುಭ ನಾಂದಿಯ ಸೂಚನೆಯೋ||

ಎಲ್ಲಿಯ ನಾನು ಎಲ್ಲಿಯ ನೀನು
ಒಂದಾಗಿ ಪ್ರೀತಿ ಹೆಸರಲಿ
ಪ್ರೇಮಜೀವನದಿ ಸೇರಿ|
ಬಾಳಸಾಗಿಸುತ್ತಿರುವೆವು ಸಂತಸದಲಿ
ಎಷ್ಟು ಸುಂದರವೀ ಪ್ರೇಮ ಸಮಾಜ||

ಕಷ್ಟವೇ ಬರಲಿ ದುಃಖವೆ ಇರಲಿ
ಸುಖದಲಿ ಮೀಯ್ಯಲಿ
ಜೊತೆಯಾಗಿಯೇ ಈ ಪ್ರೇಮದೋಣಿ ಸಾಗಲಿ|
ಬಾಳ ಕಡಲಾಚೆಗೂ ಜೀವನ ಸಾಗಲಿ
ಪ್ರೇಮ ಸಾಮರಸ್ಯತೆ ಚಿರವಾಗಲಿ||

ಪ್ರೀತಿ, ಪ್ರೇಮದಲಿ ಸುಖವುಂಟು
ಎಂಬುದ ಸಾರಿ ಸಾರಿ ಹೇಳೊಣ
ಪ್ರೀತಿಸುವರಿಗೆ ಸ್ಫೂರ್ತಿಯ ನೀಡೋಣ|
ಪ್ರೀತಿಯೇ ಜೀವನ, ಪ್ರೀತಿಯೇ ಪಾವನ
ಪ್ರೀತಿಯಿಂದಲಿ ಈ ಬದುಕಿಗೊಂದು
ಗಂಗಾಸ್ನಾನ ಮಾಡಿಸೋಣ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್ಯನ ಕಿರಣಗಳಿಂದ ಚಲಿಸುವ ಸ್ಕೂಟರ್
Next post ಕರಿ ಕಣಿವೆ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys