Home / ಕವನ / ಕವಿತೆ / ಏಕೆ ? ಒಳಮನಸ ಮಾತ

ಏಕೆ ? ಒಳಮನಸ ಮಾತ

ಏಕೆ ? ಒಳಮನಸ ಮಾತ
ಕೇಳುತಿಲ್ಲ ನೀನು?|
ಕೇಳಿದರೆ ನಿನಗೆಲ್ಲಾ
ಒಳಿತೆಯೇ ಆಗವುದು|
ಕೇಳು ನೀನದರ ಮಾತ||

ಒಳಮನಸು ಪ್ರತಿ ಹಂತದಲ್ಲೂ
ನಿನ್ನನೆಚ್ಚೆರಿಸಿ ತಿಳಿಹೇಳುವುದು
ನೀನು ಮಾಡುತಿಹುದು
ಸರಿಯಲ್ಲವೆಂದು|
ನೀ ಸರಿಯಾದುದ ಮಾಡಿದರೆ
ಅದು ನಿನ್ನ ಆತ್ಮಬಲ ಹೆಚ್ಚಿಸುವುದು||

ಕೇಳು ನೀ ನಿನ್ನ ಒಳಮನಸ
ಗುರುವದುವೇ ನಿನಗೆ
ಕೇಳದ್ದಿದರೆ ಮುಂದೆ
ಪಶ್ಚಾತ್ತಾಪ ಪಡುವೆ|
ಬರೀ ಚತುರ ಬುದ್ದಿಯ
ಮಾತ ಕೇಳಿ ಹಿಗ್ಗಿ
ಹೆಮ್ಮೆ ಪಡುವುದು ತರವೆ|
ಹೃದಯದ ಮಾತನು ಕೇಳುತಿರು||

ಒಳಮನಸಿಗಿದೆ ಸತ್ಯವರಿಯವ ಯುಕ್ತಿ
ಒಳಮನಸಿಗಿದೆ ಸೂಕ್ಷ್ಮಾಸೂಕ್ಷಮತೆ ಶಕ್ತಿ|
ಧರ್ಮ ಅಧರ್ಮವನರಿಯುವ ಪರಿಣತೆ
ಒಳಮನಸು ಸದಾ ಅಜ್ಞಾನವ ಓಡಿಸುವ ಹಣತೆ
ಅದುವೇ ಮಹಾಜ್ಞಾನ ದಾರಿಯ ಪ್ರಣತೆ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...