Home / ಕವನ / ಕವಿತೆ / ಭೂಪಾರದೊಳಗೆ ಮದೀನಶಹರದೊಳು

ಭೂಪಾರದೊಳಗೆ ಮದೀನಶಹರದೊಳು

ಭೂಪಾರದೊಳಗೆ ಮದೀನಶಹರದೊಳು
ವ್ಯಾಪಾರ ಮಾಡುವಾಗೀನ ಗಾಡಿಯೋ          ||ಪ||

ಕೂಪದೊಳು ಹರಿದಾಡುತಿಹ ಜಲ
ವ್ಯಾಪಿಸಿತು ಮುದ್ದಿನ ಸಲಾಕೆಯು
ರೂಪ ಬೆಂಕಿಯ ಪುಟವಗೊಳ್ಳುತ
ತಾಪದಿಂ ಸರಿಸ್ಯಾಡುತಿಹುದೋ                 ||ಆ.ಪ.||

ಸಧ್ಯಕ್ಕೆ ಕಾಶೀಮಸಾಹೇಬರ ಸಮರದಿ
ಮದ್ದು ಹೇರಿಸುವ ಆಗೀನ ಗಾಡಿಯೋ
ಚೋದ್ಯವಾಯಿತು ಚಮತ್ಕಾರದಿ
ಎದ್ದು ತಾನೇ ತಾನೇ ಬರುವುದು
ಗದ್ದಲದಿ ಸಾಗುವದು ಆದರೊಳು
ಇದ್ದಲಿಯ ಮಸಿಬಿದ್ದು ಬಯಲದಿ   ||೧||

ಅಬ್ಬರದಿಂದ ಮಕಾನದ ಹೊಲಕೆಲ್ಲ
ಗೊಬ್ಬರ ಹೇರುವ ಅಗೀನ ಗಾಡಿಯೋ
ಸಬ್ಬಯಲಿನೊಳು ಸರಸಿ ಬರುವಾಗ
ನಿಬ್ಬಯಲ ನಿಜತತ್ವ ಮಾಗ೯ದಿ
ಕೊಬ್ಬಿಕೊಂಡಿಹ ಕಮಲ ಚಕ್ರದಿ
ಗಬ್ಬಿನೊಳು ಗಮಕದಿ ಬರುವದೋ    ||೨||

ಕರ್ಬಲದೊಳಗೆಲ್ಲ ಕಟಗಿ ಹೊತ್ತು ಹಾಕಿ
ಉಬ್ಬೇರಿ ಬರುವ ಅಗೀನ ಗಾಡಿಯೋ
ಆರ್ಭಟಿಸಿ ಜಲವಾಯು ಸೂಸುತ
ಪೆರ್ಬುಲಿಯ ತೆರದಿಂದ ಒದರುತ
ಆಬ್ಬರದಿ ಹರದಾಡುವದು ಬಲು
ಹಬ್ಬಿಕೊಂಡಿತು ಹಲವು ಲೋಕದಿ     ||೩||

ಕ್ಷೋಣಿಪರಾಜನ ಶಹಾನ ದೊರಗಳ
ಠಾಣಿದೊಳಗಿರುವ ಅಗೀನ ಗಾಡಿಯೋ
ಪಾಣಿ ಅಲಗು ಸಮಸ್ತ ಆಯುಧ
ಕ್ಷೀಣವಿಲ್ಲದೆ ತುಂಬ ತವಕದಿ
ಬಾಣ ಬಿಲ್ಲುಗಳಿಡಿಸಿ ಬೇಗನೆ
ರಾಣಿ ಸರಕಾರ ಸದರಿನೊಳು           ||೪||

ಧರೆಯೊಳು ದಕ್ಷಿಣ ದೇಶದೊಳಗೆಲ್ಲ
ಅರಳಿ ಹೇರಿಸುವ ಅಗೀನ ಗಾಡಿಯೋ
ಸರಸದಿಂ ವಿಸ್ತರಿಸಿ ಪೇಳುವೆ
ವರ ಶಿಶುನಾಳಧೀಶನಾಜ್ಞೆಯ
ಮೆರೆಸಿದರು ಇಂಗ್ಲೀಷದೊರೆಗಳು
ಸರ್ವರಿಗೆ ಆಶ್ಚರ್ಯವಾಯಿತು         ||೫||

*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...