ಭೂಪಾರದೊಳಗೆ ಮದೀನಶಹರದೊಳು

ಭೂಪಾರದೊಳಗೆ ಮದೀನಶಹರದೊಳು
ವ್ಯಾಪಾರ ಮಾಡುವಾಗೀನ ಗಾಡಿಯೋ          ||ಪ||

ಕೂಪದೊಳು ಹರಿದಾಡುತಿಹ ಜಲ
ವ್ಯಾಪಿಸಿತು ಮುದ್ದಿನ ಸಲಾಕೆಯು
ರೂಪ ಬೆಂಕಿಯ ಪುಟವಗೊಳ್ಳುತ
ತಾಪದಿಂ ಸರಿಸ್ಯಾಡುತಿಹುದೋ                 ||ಆ.ಪ.||

ಸಧ್ಯಕ್ಕೆ ಕಾಶೀಮಸಾಹೇಬರ ಸಮರದಿ
ಮದ್ದು ಹೇರಿಸುವ ಆಗೀನ ಗಾಡಿಯೋ
ಚೋದ್ಯವಾಯಿತು ಚಮತ್ಕಾರದಿ
ಎದ್ದು ತಾನೇ ತಾನೇ ಬರುವುದು
ಗದ್ದಲದಿ ಸಾಗುವದು ಆದರೊಳು
ಇದ್ದಲಿಯ ಮಸಿಬಿದ್ದು ಬಯಲದಿ   ||೧||

ಅಬ್ಬರದಿಂದ ಮಕಾನದ ಹೊಲಕೆಲ್ಲ
ಗೊಬ್ಬರ ಹೇರುವ ಅಗೀನ ಗಾಡಿಯೋ
ಸಬ್ಬಯಲಿನೊಳು ಸರಸಿ ಬರುವಾಗ
ನಿಬ್ಬಯಲ ನಿಜತತ್ವ ಮಾಗ೯ದಿ
ಕೊಬ್ಬಿಕೊಂಡಿಹ ಕಮಲ ಚಕ್ರದಿ
ಗಬ್ಬಿನೊಳು ಗಮಕದಿ ಬರುವದೋ    ||೨||

ಕರ್ಬಲದೊಳಗೆಲ್ಲ ಕಟಗಿ ಹೊತ್ತು ಹಾಕಿ
ಉಬ್ಬೇರಿ ಬರುವ ಅಗೀನ ಗಾಡಿಯೋ
ಆರ್ಭಟಿಸಿ ಜಲವಾಯು ಸೂಸುತ
ಪೆರ್ಬುಲಿಯ ತೆರದಿಂದ ಒದರುತ
ಆಬ್ಬರದಿ ಹರದಾಡುವದು ಬಲು
ಹಬ್ಬಿಕೊಂಡಿತು ಹಲವು ಲೋಕದಿ     ||೩||

ಕ್ಷೋಣಿಪರಾಜನ ಶಹಾನ ದೊರಗಳ
ಠಾಣಿದೊಳಗಿರುವ ಅಗೀನ ಗಾಡಿಯೋ
ಪಾಣಿ ಅಲಗು ಸಮಸ್ತ ಆಯುಧ
ಕ್ಷೀಣವಿಲ್ಲದೆ ತುಂಬ ತವಕದಿ
ಬಾಣ ಬಿಲ್ಲುಗಳಿಡಿಸಿ ಬೇಗನೆ
ರಾಣಿ ಸರಕಾರ ಸದರಿನೊಳು           ||೪||

ಧರೆಯೊಳು ದಕ್ಷಿಣ ದೇಶದೊಳಗೆಲ್ಲ
ಅರಳಿ ಹೇರಿಸುವ ಅಗೀನ ಗಾಡಿಯೋ
ಸರಸದಿಂ ವಿಸ್ತರಿಸಿ ಪೇಳುವೆ
ವರ ಶಿಶುನಾಳಧೀಶನಾಜ್ಞೆಯ
ಮೆರೆಸಿದರು ಇಂಗ್ಲೀಷದೊರೆಗಳು
ಸರ್ವರಿಗೆ ಆಶ್ಚರ್ಯವಾಯಿತು         ||೫||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ?
Next post ಇಮ್ರಾನ್ ಗುಡಿಯಾ ಈಗ ಸಾನಿಯಾ ಚಡ್ಡಿ ಮ್ಯಾಗೆ ಕೆಂಗಣ್ಣು

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…