Home / ಕವನ / ಕವಿತೆ / ಬರ್ಫದ ಬೆಂಕಿ

ಬರ್ಫದ ಬೆಂಕಿ

ಉಕ್ಕುವ ಕಡಲ ಮೋಹಿಸುವ ಅವಳ
ಹಠಕ್ಕೆ ಬರ್ಫದ ಬೆಂಕಿಯ ಕುಡಿವ
ಹುಚ್ಚು.
ಸೀದು ಹೋದರೂ ಬಿಸಿಯುಸಿರ
ಹಂಬಲದ ಪಾತ್ರೆ
ಮತ್ತೆ ಮತ್ತೆ ತಿಕ್ಕಿ ತಿಕ್ಕಿ ಶುಭ್ರವಾಗಿಡುವುದೇ
ಅವಳ ದಿವ್ಯ ಭಕ್ತಿ.

ಕಪ್ಪು ಬಿಳುಪಿನ ಚಿತ್ರಗಳೇ
ಎದೆಯ ಹಾಳೆಯ ಮೇಲೆ ಒತ್ತಡ ಹೇರಿ
ಅಲ್ಲಿಲ್ಲಿ ಮಸುಕಾಗುತ್ತ
ಕೆಲವೊಮ್ಮೆ ಮುದುರಿಕೊಳ್ಳುತ್ತ
ತನ್ನಷ್ಟಕ್ಕೆ ಮರೆಯಾಗುತ್ತ ಹೋದರೂ
ಪಿಸುಗುಡುತ್ತವೆ ಆಗಾಗ

ಗಿಲೀಟು ಬಣ್ಣಗಳ ಕಂಡಾಗಲೆಲ್ಲಾ
ಕಣ್ಣು ಕಾಡಿಗೆಯರಳಿಸುವುದು
ಕಂಡು ಭಾರವಾಗುವ ಕೈ
ಉಂಗುರ ಬಳೆಗಳು
ತೂಕ ಕುಸಿದು ಹೊರೆಯಾಗುತ್ತವೆ.
ಹೇಮಕುಂಡದ ಬಾಗಿಲು ಮುಚ್ಚಿ
ಹೊಗೆ ಗೂಡು ಉಸಿರಗಟ್ಟಿಸುತ್ತದೆ.

ಬಲೆ ಬೀಸಿದಷ್ಟು ತಪ್ಪಿಸಿಕೊಳ್ಳುವ
ತಿಮಿಂಗಲದ ಜಲಕ್ರೀಡೆಯ ತುಂಬಾ
ಅಲ್ಲಿ ಮೇನಕೆಯರು, ರತಿ ರಂಭೆಯರು
ಮತ್ಸ್ಯಕನ್ಯೆಯರ ಮಾದಕ ಲೋಕ
ತೆರೆದುಕೊಂಡರೂ
ಈಕೆ ಬರಿಯ ಹೆಣ್ಣು ಅಷ್ಟೇ.

ತೆರೆಯದ ಕದ ದೂಡಿ ದೂಡಿ
ದಣಿದ ಮನಸ್ಸು ಪತನಗೊಂಡಿದ್ದು
ಕಾಣಲೇ ಇಲ್ಲ
ಕಾವೇರಿದ ಕಣ್ಣಿಗೆ, ಭೋರ್‍ಗರೆವ ಕಡಲಿಗೆ

ಬುಡಮೇಲಾದ ದೀಪದ ಬುಡ್ಡಿಗೆ
ಹಾಕಿದ ಎಣ್ಣೆ
ಸುರಿದು ಹೋಗಿ ದೀಪ ಹಚ್ಚಲಾಗದೇ,
ಕತ್ತಲಲ್ಲೇ ಕಳೆದ
ಬೆಳದಿಂಗಳ ರಾತ್ರಿಯ ಹಸಿಹಸಿಯ
ಬಯಕೆಯ ನೆನಪುಗಳು.
ಹಳಗನ ಬೀಜಗಳ ಕಾಯ್ದುಕೊಳ್ಳುವುದು
ಕಲೆಯೇ ಹೊರತು ಬೇರೆ ಅಲ್ಲವೇ ಅಲ್ಲ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...