Home / ಕವನ / ಕವಿತೆ / ಬರ್ಫದ ಬೆಂಕಿ

ಬರ್ಫದ ಬೆಂಕಿ

ಉಕ್ಕುವ ಕಡಲ ಮೋಹಿಸುವ ಅವಳ
ಹಠಕ್ಕೆ ಬರ್ಫದ ಬೆಂಕಿಯ ಕುಡಿವ
ಹುಚ್ಚು.
ಸೀದು ಹೋದರೂ ಬಿಸಿಯುಸಿರ
ಹಂಬಲದ ಪಾತ್ರೆ
ಮತ್ತೆ ಮತ್ತೆ ತಿಕ್ಕಿ ತಿಕ್ಕಿ ಶುಭ್ರವಾಗಿಡುವುದೇ
ಅವಳ ದಿವ್ಯ ಭಕ್ತಿ.

ಕಪ್ಪು ಬಿಳುಪಿನ ಚಿತ್ರಗಳೇ
ಎದೆಯ ಹಾಳೆಯ ಮೇಲೆ ಒತ್ತಡ ಹೇರಿ
ಅಲ್ಲಿಲ್ಲಿ ಮಸುಕಾಗುತ್ತ
ಕೆಲವೊಮ್ಮೆ ಮುದುರಿಕೊಳ್ಳುತ್ತ
ತನ್ನಷ್ಟಕ್ಕೆ ಮರೆಯಾಗುತ್ತ ಹೋದರೂ
ಪಿಸುಗುಡುತ್ತವೆ ಆಗಾಗ

ಗಿಲೀಟು ಬಣ್ಣಗಳ ಕಂಡಾಗಲೆಲ್ಲಾ
ಕಣ್ಣು ಕಾಡಿಗೆಯರಳಿಸುವುದು
ಕಂಡು ಭಾರವಾಗುವ ಕೈ
ಉಂಗುರ ಬಳೆಗಳು
ತೂಕ ಕುಸಿದು ಹೊರೆಯಾಗುತ್ತವೆ.
ಹೇಮಕುಂಡದ ಬಾಗಿಲು ಮುಚ್ಚಿ
ಹೊಗೆ ಗೂಡು ಉಸಿರಗಟ್ಟಿಸುತ್ತದೆ.

ಬಲೆ ಬೀಸಿದಷ್ಟು ತಪ್ಪಿಸಿಕೊಳ್ಳುವ
ತಿಮಿಂಗಲದ ಜಲಕ್ರೀಡೆಯ ತುಂಬಾ
ಅಲ್ಲಿ ಮೇನಕೆಯರು, ರತಿ ರಂಭೆಯರು
ಮತ್ಸ್ಯಕನ್ಯೆಯರ ಮಾದಕ ಲೋಕ
ತೆರೆದುಕೊಂಡರೂ
ಈಕೆ ಬರಿಯ ಹೆಣ್ಣು ಅಷ್ಟೇ.

ತೆರೆಯದ ಕದ ದೂಡಿ ದೂಡಿ
ದಣಿದ ಮನಸ್ಸು ಪತನಗೊಂಡಿದ್ದು
ಕಾಣಲೇ ಇಲ್ಲ
ಕಾವೇರಿದ ಕಣ್ಣಿಗೆ, ಭೋರ್‍ಗರೆವ ಕಡಲಿಗೆ

ಬುಡಮೇಲಾದ ದೀಪದ ಬುಡ್ಡಿಗೆ
ಹಾಕಿದ ಎಣ್ಣೆ
ಸುರಿದು ಹೋಗಿ ದೀಪ ಹಚ್ಚಲಾಗದೇ,
ಕತ್ತಲಲ್ಲೇ ಕಳೆದ
ಬೆಳದಿಂಗಳ ರಾತ್ರಿಯ ಹಸಿಹಸಿಯ
ಬಯಕೆಯ ನೆನಪುಗಳು.
ಹಳಗನ ಬೀಜಗಳ ಕಾಯ್ದುಕೊಳ್ಳುವುದು
ಕಲೆಯೇ ಹೊರತು ಬೇರೆ ಅಲ್ಲವೇ ಅಲ್ಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...