Home / ಕವನ / ಕವಿತೆ / ಗೋರಿಯಾಚೆಗಿನ ಮರ

ಗೋರಿಯಾಚೆಗಿನ ಮರ

ಸ್ತಬ್ಧರಾತ್ರಿಯಲ್ಲಿ ಕ್ಲೇಷಗೊಂಡಿದೆ
ಗೋರಿಯಾಚೆಗಿನ ಮರ.
ಎಲೆಗಳಲ್ಲಿ ರೌರವ ಮರ್‍ಮರ
ಹುದುಗಿಸಿಟ್ಟ ಎದೆಯ ಹಾಡನ್ನು
ನಿರ್ಜನ ನೆಲೆಯಲ್ಲಿ
ಆಗಾಗ ಗುನುಗುತ್ತಾ, ನಿರುಮ್ಮಳ
ನಗ್ನತೆಯ ಧರಿಸಿ ಬಯಲಾಗಬೇಕು.

ವಿಷಣ್ಣತೆಯ ಹಿಂಡು ಹಿಂಡು ಕುರಿಗಳು
ದಾರಿಯುದ್ದಕ್ಕೂ ಸಾಗುತ್ತಿವೆ.
ಅಲ್ಲೆಲ್ಲೋ ಪ್ರಪಾತದಂಚಿಗೆ
ಮಿಂಚುವ ಮಿರುಪ ಹಸಿರ ಬಲೆಯ
ಹುಚ್ಚು ಕೈ ಬೀಸಿ ಕರೆದಂತೆ
ಒಳಗೆ ಪುಳಕವಿಟ್ಟುಕೊಳ್ಳುತ್ತದೆ,
ಅಪರೂಪಕ್ಕೆ

ಯಕ್ಷಿಣಿ ಕುಣಿತ ಪ್ರೇತ ಕುಣಿತ,
ಜುಗಲಬಂಧಿಗಳು,
ಅವುಗಳ ಶೀತಲ ಕಪ್ಪು ಕಣ್ಣುಗಳು..
ಗುಡ್ಡೆಯ ಕಿಟಕಿ
ರಪರಪನೇ ಬಡಿವ ಸದ್ದು..
ಕೀಟ ಕೊರೆದ ತೂತುಗಳ
ಹೊದ್ದ ನಾಸಿಕದ ಹೊಳ್ಳೆಗಳು..

ಅಬ್ಬಾ.. ರೌಧ್ರ ನಾಟಕದ ಅಂಕಪರದೆ,
ನಾಂದಿಹಾಡು,
ಕೋಡಂಗಿ ವೇಷ, ವಿದೂಷಕ
ನೋಡಲು ಎತ್ತಿದ ತಲೆಗಳು

ಸಾಗರನ ಹಾಸಿಗೆಯ ತುಂಬಾ
ಅದೇ ಸುತ್ತು ಸುರುಳಿ
ಸೊರಗಿ ನರಳಿ ಸತ್ತು ಮರಳಿ
ಅಣುಗಳ ಕಣಗಳ ನಿರತ ರೂಪಾಂತರ
ಕೂಡು ಜೀವದೊಳಗಿನ ಮಾತು.
ಮರದ ಮೌನ.

ಹೊಡೆಮರಳಿ ಸೂಸುವ ಗಾಳಿ
ಹಣ್ಣೆಲೆಯ ಗೊಬ್ಬರ ತಿಂದು
ಮತ್ತೆ ಚಿಗುರು ಬಸಿರ ಹೊತ್ತ ಮರ
ಹಳೇ ರಾಗಕ್ಕೆ ಹೊಸ ಶಬ್ದ ಹೊಸ ಭಾವ
ಸೂಸಿದ ಅದೇ ಹಳೇ ಹಾಡು
ಮತ್ತೆ ತಿಕ್ಕಿದ ಎಲೆಗಳ ನಡುವಿನ
ಅದೇ ಮರ್‍ಮರ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...