ಸಮುದ್ರ

ಸಮುದ್ರವಿಲ್ಲದ ಹೈದರಾಬಾದಿಗೆ ನಾನೇ ಸಮುದ್ರ-
ವೆಂದು ಹರಡಿದೆ ಆ ಮಹಾನಗರದ ಉದ್ದಗಲ
ತುಂಬಿ ಬೀದಿಗಳ ತುಂಬಿ ಕೇರಿಗಳ
ಒಳಗೊಳುವೆನೆಂದು ನನ್ನ ತಳಮಳದಲ್ಲಿ
ಅದರ ಕಳವಳ

ತಲ್ಲಣಗೊಳ್ಳುತ್ತ
ಕರೆದು ಕೈ ಚಾಚಿ
ತೆರೆದು ತೆರೆಬಿಚ್ಚಿ
ತೆರೆದರೂ ತೆರೆಯದ ಪ್ರಕ್ಷುಬ್ಧ ಚಿತ್ತ
ಗುಡಿ ಗೋಪುರ ಮಿನಾರಗಳ ಸುತ್ತ

ಸುತ್ತಿದೆನು ಮುತ್ತಿದೆನು
ಎಟುಕದ ಎತ್ತರದಲ್ಲಿ
ಮೋಡಗಳ ಬಿತ್ತಿದೆನು
ಅಂಗಡಿ ಜಗಲಿಗಳಲ್ಲಿ
ಮಸೀದಿ ಮೆಟ್ಟಿಲುಗಳಲ್ಲಿ
ಯಾರ ಮನೆಯಂಗಳದಲ್ಲಿ
ಎಲ್ಲೆಂದರಲ್ಲಿ
ನನ್ನ ಕನಸುಗಳ ಕೆತ್ತಿದೆನು
ಒಳಗೇ ಬತ್ತಿದೆನು

ಮುಸ್ಸಂಜೆಯ ಕತ್ತಲಲ್ಲಿ
ಹೆಕ್ಕಿದವರು ಯಾರು ಒಡೆದ ಚಿಪ್ಪಿಗಳ?
ಯಾರಿಗೂ ಕೇಳಿಸಬಾರದೆಂದು
ಬಿಕ್ಕಿದವರು ಯಾರು ಏಕಾಂತದಲ್ಲಿ ದುಃಖಗಳ?
ಅಳಿಸಿ ಹಾಕುತ್ತ ಹೋದವರು ಯಾರು
ತಮ್ಮ ಎಲ್ಲ ಗುರುತುಗಳ?

ಗಾಳಿಯಾದರೋ ಈಗ ತಣ್ಣಗಾಗಿದೆ
ಬೇರೆ ಸಮುದ್ರಗಳ ಬೇರೆ
ಆಘಾತಗಳ ನೆನಪು ತರುತ್ತಿದೆ
ಯುಗಗಳಾಗಿವೆ ನಿದ್ರಿಸಿದೆ-
ನಿದ್ರಿಸುವುದಿದೆ
ನನ್ನ ಮೇರೆಗಳ ತಬ್ಬವುದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡಿ.ಎಚ್. ಲಾರೆನ್ಸ್‍ನ “ಸನ್ಸ್ ಎಂಡ್ ಲವರ್‍ಸ್”
Next post ಗೋರಿಯಾಚೆಗಿನ ಮರ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys