Home / ಕವನ / ಕವಿತೆ / ಅಮಾನುಷ

ಅಮಾನುಷ

ದೇವರು, ಧರ್ಮವೆಂದರೆ ಸಾಕು
ಶಾಕಿನಿ, ಢಾಕಿನಿ ಪಿಶಾಚಿಗಳಾಗುವರು
ಮನುಷ್ಯರನ್ನು ಹೆಣ್ಣು, ಗಂಡನ್ನದೆ, ಶಿಶುಗಳನ್ನೂ ಬಿಡದೆ
ಜೀವದಲ್ಲಿದ್ದಂತೆಯೇ
ಹಸಿ ಹಸಿ ಮಾಂಸ, ಖಂಡಗಳನ್ನು ಹರಿಹರಿದು ಜಗಿಯುತ್ತ
ಬಿಸಿ, ಬಿಸಿ ರಕ್ತವನ್ನು ಗಟ ಗಟ ಕುಡಿಯುತ್ತ
ಮೂಳೆಗಳನ್ನು ಕಟ ಕಟ ಕಡಿಯುತ್ತ
ಭಯಂಕರ ಉನ್ಮಾದದ ನಗೆ ನಗುತ್ತ
ಹೃದಯ ವಿಜ್ರಾವಕವಾಗಿ ಕಿರಿಚುತ್ತ
ಪ್ರಳಯದ ಕುಣಿತದಲ್ಲಿ ತೊಡಗುವರು.

ನಾನಾ ಕಾರಣಗಳಿಗಾಗಿ
ಇವರ ಸುಲಭ ತುತ್ತಾಗುವರು
ಪ್ರೀತಿ ಪಾತ್ರರಾಗುವವರೆಂದರೆ ಹೆಂಗಸರು, ಮಕ್ಕಳು.

ಮಕ್ಕಳ ಒಂದೊಂದೇ ಎಳೆಯ ಭಾಗವನ್ನು
ಕತ್ತರಿಸಿ, ಕತ್ತರಿಸಿ,
ವಿಕೃತ ಭಕ್ತಿಯಲ್ಲಿ,
ಬಹು ಅಕ್ಕರೆಯಿಂದ,
ನಿಧಾನವಾಗಿ, ವಿಧಿಪೂರ್ವಕವಾಗಿ ನೈವೇದ್ಯ ಮಾಡುವರು
ಪ್ರಸಾದವೆಂದು ಕಣ್ಣಿಗೊತ್ತಿಕೊಂಡು
ಚಿಗುರೆಲೆಯಂತೆ ಮೆಲ್ಲುವರು
ಕೆಟ್ಟ ಪ್ರೀತಿ ಹೊಂದುವರು.

ಹೆಂಗಸನ್ನು, ಅದರಲ್ಲೂ ಗಂಡ ಸತ್ತವಳನ್ನು
ಅವಳದೆಲ್ಲವನ್ನೂ ಕಾಲಕಸ ಮಾಡಿ
ಕೊರಡುಮಾಡಿ,
ಸ್ವರ್ಗಾರೋಹಣ ಮಾಡಿಸುವೆನೆಂದು
ಸತ್ತವನ ಜೊತೆಗೆ ಸಿದಿಗೆ ಬದಿಗೆಗೆ ಕಟ್ಟಿ
ಸಕಲ ಭಾಜಾ ಭಜಂತ್ರಿಯಲ್ಲಿ
ಅಮಾನುಷ ಮಂತ್ರ, ಘೋಷಣೆಗಳ ಒದರುತ್ತ
ದುರ್ವ್ಯಕ್ತಿಗಳು ಮೆರವಣಿಗೆಯಲ್ಲಿ ಹೊತ್ತು ತಂದು
ವಾಸನೆ ಬರದಿರಲೆಂದು
ಸುವಾಸನಾ ಕಟ್ಟಿಗೆಗಳಿಂದ ನಿರ್ಮಿಸಿದ ಚಿತೆಯ ಮೇಲಿಟ್ಟು
ಕೆಂಪು ಕಣಿಗಲೆ ಹೂವುಗಳಲ್ಲಿ ಅರ್ಚಿಸಿ,
ಸತ್ತವರ ಅಪೂರ್ವ ಮೌನ ಗೋಷ್ಠಿಯಲ್ಲಿ
ಯಮ ಕಿಂಕರರ ಕಾವಲಿನಲ್ಲಿ
ಪೆಟ್ರೋಲ್ ಸುರಿದು ಧಗ್ಗನೆ ಉರಿ ಹೊತ್ತಿಸಿ
ಚಿಟಿಲ್, ಚಿಟಿಲ್ ಅಂತ ಉರಿ ಧಗ, ಧಗ ಉರಿಯುತ್ತಿದ್ದರೆ
ಇವರಿಗೆ ಎಲ್ಲಿಲ್ಲದ ಹುರುಪು
ಆ ಪಾಪದ ಹೆಣ್ಣು ಮಗಳು ಉರಿ, ಸಂಕಟ ತಾಳಲಾರದೆ
ಕಿರಿಚಾಡುವುದನ್ನು, ಒದರಾಡುವುದನ್ನು
ಸುಮ್ಮನೆ ಕಣ್ಣು ಬಿಟ್ಟು ಕೊಂಡು ನೋಡುತ್ತ
ಜೈ, ಜೈ ಕಾರ ಹಾಕುತ್ತಿರುತ್ತಾರೆ.
ಅವಳು ಪೂರ್ಣವಾಗಿ ಸುಟ್ಟು ಬೂದಿಯಾಗಿ
ಅದು ತಣ್ಣಗಾಗಿ ಆರುವವರೆವಿಗೆ
ಆ ಕಾಲಿನ ಭಾರ ಈ ಕಾಲಿಗೆ ವರ್ಗಾಯಿಸದಂತೆ
ಕಾದಿರುತ್ತಾರೆ.

ನಂತರ, ಪ್ರೇತ ಗೀತೆ ಹಾಡುತ್ತ, ಹೆಜ್ಜೆ ಹಾಕುತ್ತ
ಪ್ರದಕ್ಷಿಣೆ ಬಂದು
ಅಮಾನವೀಯ ಧನ್ಯತೆಯ ಕುರುಹಾಗಿ
ಆ ಚಿತಾ ಭಸ್ಮವನ್ನು ಮಸ್ತಕಗಳಲ್ಲಿ ಧರಿಸುವವರು ಯಾರೋ!
ಉಡಿಗಳಲ್ಲಿ ತುಂಬಿ ಕೊಳ್ಳುವವರು ಯಾರೋ!
ಭವಿಷ್ಯ ವಿರದವರ ಕೆಟ್ಟ ಸಡಗರವ
ನೋಡ ಬಾರದು!!
ಈ ಮನುಷ್ಯರು ಒಳ್ಳೆಯದಕ್ಕೆಂದರೆ ತಲೆ ಹೊಯ್ದರೂ
ಮುಂದೆ ಬರುವುದಿಲ್ಲ.
ಇಂತಹುದಕ್ಕಾದರೆ ನೀನ ಕರಿ ಬೇಡ ಹಿಂಡು, ಹಿಂಡು ಬರುತ್ತಾರಲ್ಲಾ
ಏನಿದು!
ಥೂ!! ಇಂತಾ ಜನ್ಮ ಏಳೇಳು ಜನ್ಮಕ್ಕೂ… ಕೊಟ್ಟರೂ…
ನನಗೆ ಬೇಡ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...