ಕುತೂಹಲ ಎಷ್ಟೊಂದು!

ಕುತೂಹಲ ಎಷ್ಟೊಂದು – ನಮಗೆ
ಕುತೂಹಲ ಎಷ್ಟೊಂದು ||ಪ||

ನಮ್ಮ ತಟ್ಟೆಯಲಿ ಹೆಗ್ಗಣವಿದ್ದರೂ
ಪರರ ತಟ್ಟೆಯಲಿ ನೊಣವನು ಕಾಣುವ . . . . ||ಅ.ಪ.||

ಅನ್ಯರ ಮನೆಯ ದೋಸೆ ತೂತು . . . .
ನಮ್ಮಯ ಮನೆಯ ಹೆಂಚೇ ತೂತು . . . .
ಆದರೂ ಮಾತು; ಇಲ್ಲ ವಿರಾಮ
ಯಾವುದು ಇದಕೆ ಅಂತಿಮ ಸರಿಗಮ!

ತೋರು ಬೆರಳಿಹುದು ನಿಮ್ಮತ್ತ . . . .
ಉಳಿದ ಬೆರಳುಗಳು ನನ್ನತ್ತ . . . .
ಆದರೂ ಯಾಕೊ ಕದನ ಕುತೂಹಲ
ತಿಥಿಯೂಟಕೆ ಹಾತೊರೆಯುವ ಹಂಬಲ!

ನೆರೆಯ ಮನೆಯಲಿ ರಾಮಾಯಣವು . . . .
ನಮ್ಮ ಮನೆಯಲಿ ಮಹಾಭಾರತ . . . .
ಆದರೂ ದೃಷ್ಟಿ ಚಾಚುವುದೇಕೆ?
ಗೋಡೆಯನೆ ಕಿವಿ ಮಾಡುವುದೇಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೆದ್ದ
Next post ಅಮಾನುಷ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…