ನಿಬ್ಬೆರಗಿನ ನಿವಾಸಿಗಳು !!

ಇಂದಿನ ನಮ್ಮ ಮನೆಗಳಿಗೆ ಡೋರ್ ಲಾಕ್‌ಗಳನ್ನೂ ಹಾಕಿ ಮುಟ್ಟಿ ನೋಡಿ ಹೊರ
ಹೋಗುತ್ತೇವೆ. ಮುಂದೊಂದು ದಿನ ಈ ಕೀಲಿ ಜಡಿಯುವ ಸಮಸ್ಯೆಗಳೇ ಇರುವುದಿಲ್ಲವೆಂದು
ವಿಜ್ಞಾನಿಗಳು ಹೇಳುತ್ತಾರೆ. ಮನೆಯ ಯಜಮಾನ ಮನೆಯ ಬಾಗಿಲ ಬಳಿ ಬಂದಾಗ
ಸೆನ್ಸಾರ್‌ಗಳಿಂದ ಮುಖವನ್ನು ಅಥವಾ ಕಣ್ಣಿನ ಐರಸ್ ಅನ್ನು ಪರೀಕ್ಷೆ ಮಾಡಿ ಗುರ್ತನ್ನು
ಖಚಿತಗೊಳಿಸಿಕೊಂಡು ಸ್ವಯಂ ಚಾಲಿತವಾಗಿ ಬಾಗಿಲುಗಳು ತಮ್ಮಿಂದ ತಾವೇ
ತೆರೆದುಕೊಳ್ಳುತ್ತವೆ. ಈ ತಂತ್ರಜ್ಞಾನ ಮುಂದೊಂದು ದಿನ ಬರಲಿದೆ, ಎಂದು ವಿಜ್ಞಾನಿಗಳ
ವ್ಯಾಖ್ಯಾನವಾಗಿದೆ. ಇದರಂತೆ ಆಹಾರ ಪದಾರ್ಥಗಳ ಅವಶ್ಯಕತೆಯನ್ನು”ರೆಫ್ರಿಜಿರೇಟರ್’ಗಳು
ಗುರುತಿಸುತ್ತವೆ. ಭವಿಷ್ಯದಲ್ಲಿ ತಂಗಳು ಪೆಟ್ಟಿಗೆಯಲ್ಲಿ ತರಕಾರಿ ಮುಗಿದು ಹೋದಾಗ ಆದು
ತನ್ನಿಂದ ತಾನೆ ಸ್ವಯಂಚಾಲಿತಗೊಂಡು ತರಕಾರಿ ಮಾರ್ಕೆಟ್ಟಿಗೆ ಸಂದೇಶವನ್ನು ರವಾನಿಸುತ್ತವೆ.
ಮೈಕ್ರೋ ಓವನ್ ಆಹಾರ ಪದಾರ್ಥಗಳ ತಯಾರಿಕೆಯನ್ನು ಪರಿಶೀಲಿಸುತ್ತದೆ.
ವಾಷಿಂಗ್‌ಮಿಷನ್ ಕೂಡ ತನಗೆ ಬೇಕಾದ ಡಿಟರ್ಜಂಟ್ ಫಾಬ್ರಿಕ್ ಸಾಫ್ಟ್‌ನರ್‌ಗಳನ್ನೂ
ಅಂಗಡಿಯಿಂದ ತರಿಸಿಕೊಳ್ಳುವ ಏರ್ಪಾಡು ಮಾಡುತ್ತದೆ.

ಮನೆಯ ಕಿಟಕಿಗಳಲ್ಲಿಯೂ ಕೂಡ ಕ್ರಾಂತಿಕಾರಕ ಬದಲಾವಣೆಯಾಗುತ್ತದೆ.
‘ಸಾಸ್ಮಾರ್ಟ್‌ಗ್ಲಾಸ್’ ಎಂಬ ತಿರುಗುವ ರೆಕ್ಕೆಗಳು ಆಕ್ಟಿವ್ ಎಲಿಮೆಂಟ್ಸ್ ಆಗಿ
ಕಾರ್ಯನಿರ್ವಹಿಸುತ್ತವೆ. ಅಂದರೆ ಸೂರ್ಯ ಕಿರಣಗಳ ಉಷ್ಟತೆ ಮತ್ತು ಬೆಳಕಿನ ತೀವ್ರತೆಗೆ
ತಕ್ಕಂತೆ ಸ್ವಯಂ ಚಾಲನೆಗೊಂಡು ನಮಗೆ ಅಗತ್ಯವಿದ್ದಷ್ಟು ಸೂರ್ಯರಶ್ಮಿಗಳನ್ನು ಒಳಗೆ
ಬರುವಂತೆ ಏರ್ಪಾಡು ಇರುತ್ತದೆ. ಹಾಗೆಯೇ ರಾತ್ರಿ ಸಮಯದಲ್ಲಿ ನಮ್ಮ ಏಕಾಂತಕ್ಕೆ
ಭಂಗವಾಗದಂತೆ ಕಿಟಕಿಗಳೆ ಹೊಂದಾಣಿಕೆಯಾಗುತ್ತವೆ. ಹೊರಗಿನಿಂದ ನೋಡಿದರೆ ಕಿಟಕಿಗಳು
ಗಾತ್ರದಲ್ಲಿ ಚಿಕ್ಕವು ಎನಿಸಿದರೂ ಮನೆಯೊಳಗಿಂದ ನೋಡಿದರೆ ಅವು ಎರಡು ಪಟ್ಟು ದೊಡ್ದ
ಟಿ.ವಿ.ಯ ಚಪ್ಪಟೆ ಸ್ಕ್ರೀನಿನಂತೆ ಕಾಣಿಸುತ್ತವೆ. ಮುಂದೊಂದು ದಿನ ಮನೆಯೊಳಗೆ ನಿಮ್ಮ ಸ್ವಂತ
ಸ್ಯಾಟ್ ಲೈಟ್ ಲಿಂಕ್, ನಿಮ್ಮ ಮನರಂಜನೆ, ವಿಜ್ಞಾನ ಹಾಗೂ ಸುದ್ದಿ ಸಮಾಚಾರವನ್ನು
ಸಾದರಪಡಿಸುತ್ತದೆ. ಈಗ ಆಗಿರುವ ಫೈಬರ್ ಆಪ್ಟಿಕಲ್ ಕೇಬಲ್ ಸಂಪರ್ಕಗಳಿಗೆ ಮುಂದೆ
ಮೌಲ್ಯವಿರಲಾರದು. 2020 ಸುಮಾರಿಗೆ ಟಿ.ವಿ. ಯೂ ಸಹ ಹಳೆಯ ಸರಕಾಗಬಹುದು.
ಸೋಫಾದಲ್ಲಿ ಆರಾಮಾಗಿ ಮಲಗಿಕೊಂಡು ನಿಮ್ಮ ನೆಚ್ಚಿನ ತಾರೆಗಳ ಕಾರ್ಯಕ್ರಮಗಳನ್ನು 3D
ಹಲೋಗ್ರಾಂಮ್ ತಾಂತ್ರಿಕತೆಯ ಮೂಲಕ ವೀಕ್ಷಿಸಬಹುದು.

೦೦೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿ ಹೋಗಲೆ, ಹೇಗೆ ಕಾಣಲೆ?
Next post ನಾಟಿ ಕಲ್ಲನು ದಾಟಿ ಇಳಿದು ಬಾ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys