ಪರಿಸರ ಮಾಲಿನ್ಯವಿಲ್ಲದ ಸೌರಶಕ್ತಿಕಾರು (ನೂತನ ಪ್ರಯೋಗ)

ಪರಿಸರ ಮಾಲಿನ್ಯವಿಲ್ಲದ ಸೌರಶಕ್ತಿಕಾರು (ನೂತನ ಪ್ರಯೋಗ)

ಬೆಂಗಳೂರಿನ ಅಜಾದ್ ನಗರದ ವಾಸಿ ಸೈಯ್ಯದ್ ಅಹಮ್ಮದ್ ಅವರಿಗೆ ಸೌರಶಕ್ತಿಯಲ್ಲಿ ಗಾಡಿ ಓಡಿಸುವ ಬಯಕೆಯ ತೀವ್ರತೆಯಿಂದಾಗಿ ಕಳೆದ ೩೦ ವರ್‍ಷಗಳ ಸತತ ಪ್ರಯತ್ನದ ಫಲವಾಗಿ ಸೌರಶಕ್ತಿಯಿಂದ ಕಾರು, ಮೂರುಚಕ್ರ, ದ್ವಿಚಕ್ರ ವಾಹನಗಳನ್ನು ಆರಾಮವಾಗಿ ಒಡಿಸಬಹುದೆಂದು ಸಾಬೀತು ಪಡಿಸಿದ್ದಾರೆ. (ಕಡಿಮೆ ವ್ಯಚ್ಚದಲ್ಲಿ) ವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡುತ್ತಿರುವ ಅಹಮ್ಮದ್ ಏನನ್ನಾದರೂ ಸಾಧಿಸಬೇಕೆಂಬ ಛಲವುಳ್ಳವರು. ತಮ್ಮ ಕೈಗೆ ಸಿಕ್ಕ ವಸ್ತುಗಳನ್ನು (ಉಪಕರಣ) ಬಳಸಿಕೊಂಡು, ಅದಕ್ಕೊಂದು ರೂಪನೀಡಿ ಸೂರ್ಯನ ಶಾಖಾವನ್ನು ಹಾಯಿಸಿ ಪರಿಸರ ಪ್ರೇಮಿ ಕಾರೊಂದನ್ನು ಕೊನೆಗೂ ಸಿದ್ಧಪಡಿಸಿದರು. ಈ ಕಾರಿಗೆ ಇವರು ಖರ್ಚು ಮಾಡಿರುವುದು ಕೇವಲ ೫೦ ಸಾವಿರ ರೂಪಾಯಿಗಳು ಮಾತ್ರ. ಸೌರಶಕ್ತಿ ಚಾಲಿತ ಈ ಕಾರು ೩೨೫ ಕೆ.ಜಿ. ತೂಗುತ್ತದೆ. ಮೋಡ ಸೂರ್ಯನನ್ನು ಮುಚ್ಚಿಕೊಂಡ ಸಂದರ್ಭದಲ್ಲಿಯೂ ಕಾರುಕೆಡದೆಂಬ ಆತಂಕ ಪಡಬೇಕಿಲ್ಲ ಈ ಕಾರಿಗೆ ವಿಶೇಷ ಬ್ಯಾಟರಿ ವ್ಯವಸ್ಥೆಯನ್ನು ಮಾಡಲಾಗಿದೆ. ಒಮ್ಮೆ ಬ್ಯಾಟ್ರಿ ಚಾರ್ಜ್ ಮಾಡಿದರೆ ನೂರು ಕಿ.ಮೀ. ಗಾಡಿ ಓಡಿಸಬಹುದು.

ಈ ಕಾರು ಇತರೆ ಕಾರುಗಳಂತೆ ಸದ್ದು ಮಾಡುವುದಿಲ್ಲ ಹೊಗೆಯನ್ನು ಉಗಳುವುದೇ ಇಲ್ಲ ಗೇರು ಬದಲಿಸುವ ಗೊಂದಲ ಇಲ್ಲ. ಗಾಡಿಹತ್ತಿ ಸೀದಾ ಸ್ಟೇರಿಂಗ್ ತಿರುಗಿಸುತ್ತ ಹೋಗುವುದಷ್ಟೇ ಕೆಲಸ. ಈಗಾಗಲೇ ಬೆಂಗಳೂರಿನ ಸುತ್ತಮುತ್ತ ಎಲ್ಲಿಯೂ ಕೈ ಕೊಡದ ಈ ಕಾರು ಯಶಸ್ವಿಯಾಗಿದೆ. ಬಡವರಿಗೆ ಕೈ ಗೆಟಕುವ ಬೆಲೆಯಲ್ಲಿ ಸಿಗುವ ಈ ಕಾರು ಶ್ರೀಮಂತರಿಗೆ ಮಾಲಿನ್ಯ ರಹಿತ ಈ ಕಾರನ್ನು ಓಡಿಸುವಾಗ ತೃಪ್ತಿಯನ್ನು ನೀಡುತ್ತದೆ. ಪರಿಸರ ಮಾಲಿನ್ಯವಿಲ್ಲದೇ ಕೇವಲ ಸೌರಶಕ್ತಿಯಿಂದಲೇ ನಡೆಯುವ ಈ ಕಾರು ಪರಿಸರವಾದಿಗಳಿಗೆಲ್ಲ ಅತ್ಯಂತ ಅಚ್ಚು ಮೆಚ್ಚಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿ?

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…