Home / ಲೇಖನ / ವಿಜ್ಞಾನ / ಪರಿಸರ ಮಾಲಿನ್ಯವಿಲ್ಲದ ಸೌರಶಕ್ತಿಕಾರು (ನೂತನ ಪ್ರಯೋಗ)

ಪರಿಸರ ಮಾಲಿನ್ಯವಿಲ್ಲದ ಸೌರಶಕ್ತಿಕಾರು (ನೂತನ ಪ್ರಯೋಗ)

ಬೆಂಗಳೂರಿನ ಅಜಾದ್ ನಗರದ ವಾಸಿ ಸೈಯ್ಯದ್ ಅಹಮ್ಮದ್ ಅವರಿಗೆ ಸೌರಶಕ್ತಿಯಲ್ಲಿ ಗಾಡಿ ಓಡಿಸುವ ಬಯಕೆಯ ತೀವ್ರತೆಯಿಂದಾಗಿ ಕಳೆದ ೩೦ ವರ್‍ಷಗಳ ಸತತ ಪ್ರಯತ್ನದ ಫಲವಾಗಿ ಸೌರಶಕ್ತಿಯಿಂದ ಕಾರು, ಮೂರುಚಕ್ರ, ದ್ವಿಚಕ್ರ ವಾಹನಗಳನ್ನು ಆರಾಮವಾಗಿ ಒಡಿಸಬಹುದೆಂದು ಸಾಬೀತು ಪಡಿಸಿದ್ದಾರೆ. (ಕಡಿಮೆ ವ್ಯಚ್ಚದಲ್ಲಿ) ವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡುತ್ತಿರುವ ಅಹಮ್ಮದ್ ಏನನ್ನಾದರೂ ಸಾಧಿಸಬೇಕೆಂಬ ಛಲವುಳ್ಳವರು. ತಮ್ಮ ಕೈಗೆ ಸಿಕ್ಕ ವಸ್ತುಗಳನ್ನು (ಉಪಕರಣ) ಬಳಸಿಕೊಂಡು, ಅದಕ್ಕೊಂದು ರೂಪನೀಡಿ ಸೂರ್ಯನ ಶಾಖಾವನ್ನು ಹಾಯಿಸಿ ಪರಿಸರ ಪ್ರೇಮಿ ಕಾರೊಂದನ್ನು ಕೊನೆಗೂ ಸಿದ್ಧಪಡಿಸಿದರು. ಈ ಕಾರಿಗೆ ಇವರು ಖರ್ಚು ಮಾಡಿರುವುದು ಕೇವಲ ೫೦ ಸಾವಿರ ರೂಪಾಯಿಗಳು ಮಾತ್ರ. ಸೌರಶಕ್ತಿ ಚಾಲಿತ ಈ ಕಾರು ೩೨೫ ಕೆ.ಜಿ. ತೂಗುತ್ತದೆ. ಮೋಡ ಸೂರ್ಯನನ್ನು ಮುಚ್ಚಿಕೊಂಡ ಸಂದರ್ಭದಲ್ಲಿಯೂ ಕಾರುಕೆಡದೆಂಬ ಆತಂಕ ಪಡಬೇಕಿಲ್ಲ ಈ ಕಾರಿಗೆ ವಿಶೇಷ ಬ್ಯಾಟರಿ ವ್ಯವಸ್ಥೆಯನ್ನು ಮಾಡಲಾಗಿದೆ. ಒಮ್ಮೆ ಬ್ಯಾಟ್ರಿ ಚಾರ್ಜ್ ಮಾಡಿದರೆ ನೂರು ಕಿ.ಮೀ. ಗಾಡಿ ಓಡಿಸಬಹುದು.

ಈ ಕಾರು ಇತರೆ ಕಾರುಗಳಂತೆ ಸದ್ದು ಮಾಡುವುದಿಲ್ಲ ಹೊಗೆಯನ್ನು ಉಗಳುವುದೇ ಇಲ್ಲ ಗೇರು ಬದಲಿಸುವ ಗೊಂದಲ ಇಲ್ಲ. ಗಾಡಿಹತ್ತಿ ಸೀದಾ ಸ್ಟೇರಿಂಗ್ ತಿರುಗಿಸುತ್ತ ಹೋಗುವುದಷ್ಟೇ ಕೆಲಸ. ಈಗಾಗಲೇ ಬೆಂಗಳೂರಿನ ಸುತ್ತಮುತ್ತ ಎಲ್ಲಿಯೂ ಕೈ ಕೊಡದ ಈ ಕಾರು ಯಶಸ್ವಿಯಾಗಿದೆ. ಬಡವರಿಗೆ ಕೈ ಗೆಟಕುವ ಬೆಲೆಯಲ್ಲಿ ಸಿಗುವ ಈ ಕಾರು ಶ್ರೀಮಂತರಿಗೆ ಮಾಲಿನ್ಯ ರಹಿತ ಈ ಕಾರನ್ನು ಓಡಿಸುವಾಗ ತೃಪ್ತಿಯನ್ನು ನೀಡುತ್ತದೆ. ಪರಿಸರ ಮಾಲಿನ್ಯವಿಲ್ಲದೇ ಕೇವಲ ಸೌರಶಕ್ತಿಯಿಂದಲೇ ನಡೆಯುವ ಈ ಕಾರು ಪರಿಸರವಾದಿಗಳಿಗೆಲ್ಲ ಅತ್ಯಂತ ಅಚ್ಚು ಮೆಚ್ಚಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...