Home / ಲೇಖನ / ವಿಜ್ಞಾನ / ಮೂಗಿನ ಮೂಲಕ ಮೆದುಳಿನ ಶಸ್ತ್ರ ಚಿಕಿತ್ಸೆ !?

ಮೂಗಿನ ಮೂಲಕ ಮೆದುಳಿನ ಶಸ್ತ್ರ ಚಿಕಿತ್ಸೆ !?

ಮೆದುಳು ಮನುಷ್ಯನಿಗೆ ಅತ್ಯಮೂಲ್ಯ ವಸ್ತು ಇದರಿಂದಲೇ ಇಡೀ ದೇಹದ ಸೂತ್ರ
ಸಂಹನ ಕ್ರಿಯೆ ನಡೆಯುತ್ತದೆ. ಸೂಕ್ಷ್ಮತೆಯಿಂದಲೂ ಅಷ್ಟೇ ಪ್ರಧಾನವಾದ ಮೆದುಳನ್ನು
ನೈಸರ್ಗಿಕವಾಗಿಯೆ ತಲೆಬುರುಡೆ ರಕ್ಷಿಸುತ್ತದೆ. ತಲೆ ಚಿಪ್ಪಿನೊಳಗೆ ಇರುವ ಮಿದುಳಿಗೆ ಏನಾದರೂ
ಘಾಸಿಯಾದಾಗ ಇದುವರೆಗೆ ಅದರೊಂದಿಗೆ ಸಂಪರ್ಕ ಹೊಂದುವುದು ಬಹಳ ಕಷ್ಟವಿತ್ತು
ಚಿಪ್ಪಿನ ಮೂಲಕ ಅಪರೇಷನ್ ಮಾಡಲು ಸಾಧ್ಯವಿರಲಿಲ್ಲ. ಇದೀಗ ಮೂಗಿನ ಮೂಲಕ
ಅಸ್ತ್ರಗಳನ್ನು ತೂರಿಸಿ ಮೆದುಳಿನ ತೊಂದರೆಗಳನ್ನು ನಾಶಮಾಡಬಹುದೆಂದು ದಿಲ್ಲಿಯ
ಇಂದ್ರಪ್ರಸ್ತ ಅಪೋಲೋ ಅಸ್ಟತ್ರೆಯ ಡಾ|| ವಿಜಯಕುಮಾರ್ ಮತ್ತು ತಂಡದವರು
ಕಂಡುಹಿಡಿದಿದ್ದಾರೆ.

ಮೂಗಿನ ಮೂಲಕ ಮೆದುಳನ್ನು ತಲುಪಿ ಶಸ್ತ್ರ ಚಿಕಿತ್ಸೆ ನಡೆಸುವ ಈ ತಂತ್ರದಲ್ಲಿ
ರಕ್ತಸ್ರಾವವಾಗಲಾರದೆಂದು ಡಾ|| ವಿಜಯಕುಮಾರ್ ತಿಳಿಸುತ್ತಾರೆ. ನೇಸನ್ ಎಂಡೋಸ್ಕೋಪಿ
ಅಥವಾ ಮೂಗಿನ ಮೂಲಕದ ಶಸ್ತ್ರಚಿಕಿತ್ಸಾ ವಿಧಾನದಿಂದ ಮೆದುಳಿನ ಯಾವ
ಭಾಗವನ್ನಾದರೂ ತಲುಪಬಹುದು. ಆದರೆ  ಮಿದುಳಿನ ಶಸ್ತ್ರ ಚಿಕಿತ್ಸೆಯಿಂದ
ಮಿದುಳಿನ ಕೆಳಭಾಗದಲ್ಲಿರುವ ಪಿಟ್ಯೂಟರಿ ಗ್ರಂಥಿಯವನ್ನು ತಲುಪಲು ಸಾಧ್ಯವಾಗುವುದಿಲ್ಲ

ಕೇವಲ 4 ಮೀಟರ್ ಉದ್ದನೆಯ ಹಗುರವಾದ ತಂತಿಯ ಮೂಲಕ ಈ ಎಲ್ಲ ಶಸ್ತ್ರ
ಚಿಕಿತ್ಸೆಯನ್ನು ನಡೆಸಲಾಗುವುದು. ಇದು ಮೂಗನ್ನು ಪ್ರವೇಶಿಸಿದಾಗ ಈ ಭಾಗದಸಂಪೂರ್ಣ
ಚಿತ್ರವು ಗಣಕಯಂತ್ರ (ಕಂಪ್ಯೂಟರ್) ನಲ್ಲಿ ಕಾಣುತ್ತದೆ. ಈ ಕಂಪ್ಯೂಟರ್ ಮೇಲೆ ಕಾಣುವ
ಚಿತ್ರದ ಸಹಾಯದಿಂದ ಎಲ್ಲವನ್ನು ಪರಿಗ್ರಹಿಸುತ್ತ ಮೆದುಳಿನ ಭಾಗವನ್ನು ಪ್ರವೇಶಿಸಿ ಅದರಲ್ಲಿ
ಏನಾದರೂ ಏರುಪೇರಾಗಿದ್ದರೆ ಆ ತಂತಿಯ ತುದಿಯಲ್ಲಿರುವ ಚಿಕಿತ್ಸಕ ಘಟಕದಿಂದ
ಪರಿಹರಿಸಲಾಗುತ್ತದೆ. ಇದರ ಬಗೆಗೆ ಸಂಶೋಧನೆಗಳು  ದೇಶಗಳಲ್ಲಿ ನಡೆದು ‘ಯಶಸ್ವಿ
ಚಿಕಿತ್ಸೆ’ ಎಂದು ಹೇಳಿದೆ ಮೆದುಳಿನ ದ್ರವಸೋರಿಕೆಗೆ ಮತ್ತು ಕೆಲವೊಂದು ಭಾಗದ ಶಸ್ತ್ರ
ಚಿಕಿತ್ಸೆಗಾಗಿ ಇದನ್ನು ಬಳಸಲಾಗುತ್ತದೆ.
****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...