Home / ಲೇಖನ / ವಿಜ್ಞಾನ / ಮೂಗಿನ ಮೂಲಕ ಮೆದುಳಿನ ಶಸ್ತ್ರ ಚಿಕಿತ್ಸೆ !?

ಮೂಗಿನ ಮೂಲಕ ಮೆದುಳಿನ ಶಸ್ತ್ರ ಚಿಕಿತ್ಸೆ !?

ಮೆದುಳು ಮನುಷ್ಯನಿಗೆ ಅತ್ಯಮೂಲ್ಯ ವಸ್ತು ಇದರಿಂದಲೇ ಇಡೀ ದೇಹದ ಸೂತ್ರ
ಸಂಹನ ಕ್ರಿಯೆ ನಡೆಯುತ್ತದೆ. ಸೂಕ್ಷ್ಮತೆಯಿಂದಲೂ ಅಷ್ಟೇ ಪ್ರಧಾನವಾದ ಮೆದುಳನ್ನು
ನೈಸರ್ಗಿಕವಾಗಿಯೆ ತಲೆಬುರುಡೆ ರಕ್ಷಿಸುತ್ತದೆ. ತಲೆ ಚಿಪ್ಪಿನೊಳಗೆ ಇರುವ ಮಿದುಳಿಗೆ ಏನಾದರೂ
ಘಾಸಿಯಾದಾಗ ಇದುವರೆಗೆ ಅದರೊಂದಿಗೆ ಸಂಪರ್ಕ ಹೊಂದುವುದು ಬಹಳ ಕಷ್ಟವಿತ್ತು
ಚಿಪ್ಪಿನ ಮೂಲಕ ಅಪರೇಷನ್ ಮಾಡಲು ಸಾಧ್ಯವಿರಲಿಲ್ಲ. ಇದೀಗ ಮೂಗಿನ ಮೂಲಕ
ಅಸ್ತ್ರಗಳನ್ನು ತೂರಿಸಿ ಮೆದುಳಿನ ತೊಂದರೆಗಳನ್ನು ನಾಶಮಾಡಬಹುದೆಂದು ದಿಲ್ಲಿಯ
ಇಂದ್ರಪ್ರಸ್ತ ಅಪೋಲೋ ಅಸ್ಟತ್ರೆಯ ಡಾ|| ವಿಜಯಕುಮಾರ್ ಮತ್ತು ತಂಡದವರು
ಕಂಡುಹಿಡಿದಿದ್ದಾರೆ.

ಮೂಗಿನ ಮೂಲಕ ಮೆದುಳನ್ನು ತಲುಪಿ ಶಸ್ತ್ರ ಚಿಕಿತ್ಸೆ ನಡೆಸುವ ಈ ತಂತ್ರದಲ್ಲಿ
ರಕ್ತಸ್ರಾವವಾಗಲಾರದೆಂದು ಡಾ|| ವಿಜಯಕುಮಾರ್ ತಿಳಿಸುತ್ತಾರೆ. ನೇಸನ್ ಎಂಡೋಸ್ಕೋಪಿ
ಅಥವಾ ಮೂಗಿನ ಮೂಲಕದ ಶಸ್ತ್ರಚಿಕಿತ್ಸಾ ವಿಧಾನದಿಂದ ಮೆದುಳಿನ ಯಾವ
ಭಾಗವನ್ನಾದರೂ ತಲುಪಬಹುದು. ಆದರೆ  ಮಿದುಳಿನ ಶಸ್ತ್ರ ಚಿಕಿತ್ಸೆಯಿಂದ
ಮಿದುಳಿನ ಕೆಳಭಾಗದಲ್ಲಿರುವ ಪಿಟ್ಯೂಟರಿ ಗ್ರಂಥಿಯವನ್ನು ತಲುಪಲು ಸಾಧ್ಯವಾಗುವುದಿಲ್ಲ

ಕೇವಲ 4 ಮೀಟರ್ ಉದ್ದನೆಯ ಹಗುರವಾದ ತಂತಿಯ ಮೂಲಕ ಈ ಎಲ್ಲ ಶಸ್ತ್ರ
ಚಿಕಿತ್ಸೆಯನ್ನು ನಡೆಸಲಾಗುವುದು. ಇದು ಮೂಗನ್ನು ಪ್ರವೇಶಿಸಿದಾಗ ಈ ಭಾಗದಸಂಪೂರ್ಣ
ಚಿತ್ರವು ಗಣಕಯಂತ್ರ (ಕಂಪ್ಯೂಟರ್) ನಲ್ಲಿ ಕಾಣುತ್ತದೆ. ಈ ಕಂಪ್ಯೂಟರ್ ಮೇಲೆ ಕಾಣುವ
ಚಿತ್ರದ ಸಹಾಯದಿಂದ ಎಲ್ಲವನ್ನು ಪರಿಗ್ರಹಿಸುತ್ತ ಮೆದುಳಿನ ಭಾಗವನ್ನು ಪ್ರವೇಶಿಸಿ ಅದರಲ್ಲಿ
ಏನಾದರೂ ಏರುಪೇರಾಗಿದ್ದರೆ ಆ ತಂತಿಯ ತುದಿಯಲ್ಲಿರುವ ಚಿಕಿತ್ಸಕ ಘಟಕದಿಂದ
ಪರಿಹರಿಸಲಾಗುತ್ತದೆ. ಇದರ ಬಗೆಗೆ ಸಂಶೋಧನೆಗಳು  ದೇಶಗಳಲ್ಲಿ ನಡೆದು ‘ಯಶಸ್ವಿ
ಚಿಕಿತ್ಸೆ’ ಎಂದು ಹೇಳಿದೆ ಮೆದುಳಿನ ದ್ರವಸೋರಿಕೆಗೆ ಮತ್ತು ಕೆಲವೊಂದು ಭಾಗದ ಶಸ್ತ್ರ
ಚಿಕಿತ್ಸೆಗಾಗಿ ಇದನ್ನು ಬಳಸಲಾಗುತ್ತದೆ.
****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...