ಹಡೆದವ್ವನ ನೆನಪು

ಹಾದಿ ಬೀದಿಯ ಗುಂಟ
ತಂಪು ನೆರಳಿನ ಸಾಲು
ತಂಗಾಳಿ ತೀಡಿ,
ಮುಂಗುರುಳು ಮೋಡಿ
ಮಲ್ಲಿಗೆಯ ನರುಗೆಂಪು
ಬಾನಾಡಿ ನುಡಿ ಇಂಪು
ಹಡೆದವ್ವ್ನ ನೆನಪು ನೂರ್ಕಾಲ

ತೌರೂರ ಬಾಳೆ
ತೊಯ್ದಾಟ ನೋಡು
ಕಣ್ಣೂರ ಮನೆಯಲ್ಲಿ
ಹನಿಗೂಡಿ ಹಾಡು
ಕಣ್ಣಕಾಡಿಗೆಗಿಂತ
ಮಣ್ಣವಾಸನೆ ಚೆಂದ
ಮಣ್ಣಿನ ಮಗಳ
ಮನಚೆಂದ
ಹಡೆದವ್ನ ನೆನಪು ನೂರ್ಕಾಲ

ಮೆದು ನುಡಿಯಲಿ
ಮರಳು ಮಾಡಿ ಮೃಷ್ಟಾನ ರುಚಿ
ತಣ್ಣೆಯನ್ನಕೆ ನೀಡಿ
ಉಣ್ಣಿಸಿದ ನೆನಪು ನೂರ್ಕಾಲ
ಕಂಕುಳಲಿ ಏರಿ ತೋಳಿಗೆ
ಜೋತಾಡಿ
ಕಾಡಿ ಬೇಡಿದ ನೆನಪು ನೂರ್ಕಾಲ
ಎರಡೇಟು ಹಿಂಗಾಲ್ಗೆ ಬಿಗಿದು
ಬಾಸುಂಡೆ ಬರೆ ಮುಂಗೈಗೆ ಎಳೆದು
ಬಗ್ಗಿ ನಡೆಯಲು ಕಲಿಸೆ
ಜಗ್ಗದೇ ಕಾಡಿದ ನೆನಪು ನೂರ್ಕಾಲ

ಹಾಸಿಗೆಯೂ ಹಾಸಿತ್ತು
ದೀಪವೂ ಉರಿದಿತ್ತು.
ಕಣ್ಣೂರ ಕೋಡಿಯೂ ಹರಿದಿತ್ತು
ತಾಯವ್ವನ ನಿರ್ಜೀವ ದೇಹವೂ ಮಲಗಿತ್ತು
ಹಡೆದವ್ವನ ನೆನಪು ನೂರ್ಕಾಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಯೋತ್ಪಾದಕರು
Next post ವಿಜಯ ವಿಲಾಸ – ತೃತೀಯ ತರಂಗ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys