ಭಯೋತ್ಪಾದಕರು

ತಲೆಗೂದಲು ಕೆದರಿರುವುದು
ಗಡ್ಡ ಹೇರಳ ಬೆಳೆದಿರುವುದು
ಕಣ್ಣು ಆಳಕ್ಕೆ ಇಳಿದಿರುವುದು
ಜೇಬಿನಲ್ಲಿ ಬಾಂಬಿರುವುದು

ಮಂದಿಯ ಹಿಂದೆಯು ಇರುವರು
ಮಂದಿಯ ಮುಂದೆಯು ಇರುವರು
ಮಂದಿಯ ನಡುವೆಯ ಇರುವರು
ಯಾರಿಗೂ ಕಾಣದೆ ಇರುವರು

ಹಿಮಾಲಯದ ಮೇಲೆ ಹಿಮ ಬೀಳುವುದು
ಮನೆಯಂಗಳದ ಮೇಲೆ ಮಳೆ ಬೀಳುವುದು
ಕಾಡಿನ ಮೇಲೆ ಬೆಂಕಿ ಬೀಳುವುದು
ನಿದ್ರಿಸಿದವರಿಗೆ ನಿದ್ದೆ ಬೀಳುವುದು

ಒಬ್ಬಾನೊಬ್ಬ ರಾಜ
ಕನಸೊಂದ ಕಂಡ
ಪೇಪರ್‌ವೈಟಿನ ಬದಲಿಗೆ ಇತ್ತು
ಮೇಜಿನ ಮೇಲವನ ರುಂಡ

ಕೂಡಲೆ ಎದ್ದು ಅಪ್ಪಣೆಮಾಡಿದ
ಪೇಪರ್ ವೈಟುಗಳಿನ್ನು ನಿಷಿದ್ಧ
ಎಲ್ಲವನೂ ಹುಡುಕಿ ತೆಗೆಸಿ
ಸಮುದ್ರದಲ್ಲಿ ಮುಳುಗಿಸಿದ

ಆದರೇನು ಭಯೋತ್ಪಾದಕರು
ಬೇರೆ ಕನಸ ಕಳಿಸಿದರು
ತುಂಡರಿಸಿದ ಅವನ ಕೈಗಳು
ಆದವು ರೇಲ್ವೆ ಸಿಗ್ನಲುಗಳು

ಮಸಿಯ ಬದಲಿಗೆ ನೆತ್ತರು
ಉಪ್ಪಿನಂತೆ ಬೆವರು!
ಕಣ್ಣು ತಾಳೆಹಣ್ಣುಗಳು
ಎದೆಯೊಳಗೆ ಇದ್ದಿಲು!

ಏಳಲಾರ ಕನಸು ಹರಿದು
ಎದ್ದರೆ ಗತಿಯೇನು ?
ಹಾಗೆ ಸುಮ್ಮನೆ ಮಲಗಿರುವನು
ಯುಗ ಮುಗಿಯುವುದ ಕಾದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಊರ ಜನ ನನ್ನನ್ನು ಹುಚ್ಚನೆಂದು ಕರೆದಿದ್ದರು
Next post ಹಡೆದವ್ವನ ನೆನಪು

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys