Home / ಕವನ / ಕವಿತೆ / ಭಯೋತ್ಪಾದಕರು

ಭಯೋತ್ಪಾದಕರು

ತಲೆಗೂದಲು ಕೆದರಿರುವುದು
ಗಡ್ಡ ಹೇರಳ ಬೆಳೆದಿರುವುದು
ಕಣ್ಣು ಆಳಕ್ಕೆ ಇಳಿದಿರುವುದು
ಜೇಬಿನಲ್ಲಿ ಬಾಂಬಿರುವುದು

ಮಂದಿಯ ಹಿಂದೆಯು ಇರುವರು
ಮಂದಿಯ ಮುಂದೆಯು ಇರುವರು
ಮಂದಿಯ ನಡುವೆಯ ಇರುವರು
ಯಾರಿಗೂ ಕಾಣದೆ ಇರುವರು

ಹಿಮಾಲಯದ ಮೇಲೆ ಹಿಮ ಬೀಳುವುದು
ಮನೆಯಂಗಳದ ಮೇಲೆ ಮಳೆ ಬೀಳುವುದು
ಕಾಡಿನ ಮೇಲೆ ಬೆಂಕಿ ಬೀಳುವುದು
ನಿದ್ರಿಸಿದವರಿಗೆ ನಿದ್ದೆ ಬೀಳುವುದು

ಒಬ್ಬಾನೊಬ್ಬ ರಾಜ
ಕನಸೊಂದ ಕಂಡ
ಪೇಪರ್‌ವೈಟಿನ ಬದಲಿಗೆ ಇತ್ತು
ಮೇಜಿನ ಮೇಲವನ ರುಂಡ

ಕೂಡಲೆ ಎದ್ದು ಅಪ್ಪಣೆಮಾಡಿದ
ಪೇಪರ್ ವೈಟುಗಳಿನ್ನು ನಿಷಿದ್ಧ
ಎಲ್ಲವನೂ ಹುಡುಕಿ ತೆಗೆಸಿ
ಸಮುದ್ರದಲ್ಲಿ ಮುಳುಗಿಸಿದ

ಆದರೇನು ಭಯೋತ್ಪಾದಕರು
ಬೇರೆ ಕನಸ ಕಳಿಸಿದರು
ತುಂಡರಿಸಿದ ಅವನ ಕೈಗಳು
ಆದವು ರೇಲ್ವೆ ಸಿಗ್ನಲುಗಳು

ಮಸಿಯ ಬದಲಿಗೆ ನೆತ್ತರು
ಉಪ್ಪಿನಂತೆ ಬೆವರು!
ಕಣ್ಣು ತಾಳೆಹಣ್ಣುಗಳು
ಎದೆಯೊಳಗೆ ಇದ್ದಿಲು!

ಏಳಲಾರ ಕನಸು ಹರಿದು
ಎದ್ದರೆ ಗತಿಯೇನು ?
ಹಾಗೆ ಸುಮ್ಮನೆ ಮಲಗಿರುವನು
ಯುಗ ಮುಗಿಯುವುದ ಕಾದು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...