ನಕ್ಕರೆ ನೋವಾಗುವುದು

ಎದೆಯೊಳಗೆ ಬೆಂಕಿ ಬಿದ್ದರೂ
ಜಪ್ಪಯ್ಯ ಎನ್ನದೇ ನಗುವ ಮುಖಗಳ ಕಂಡಾಗಲೆಲ್ಲಾ
ನನ್ನಲ್ಲಿ ಕನಿಕರದೊಂದಿಗೆ ಉಕ್ಕುವ ತಳಮಳ
ನಾನೊಬ್ಬಳೆ ಅಲ್ಲ ನನ್ನ ಸುತ್ತಲೂ
ಹತ್ತಾರು ಪಾತ್ರಗಳು
ನವಿಲುಗರಿ ಪೋಣಿಸಿಕೊಂಡು
ಡಂಭ ಬಡಿಯುವ ಕೆಂಬೂತಗಳು
ಹಾದು ಹೋಗುತ್ತಿವೆ.
ಒಂದರ ನಂತರ ಮತ್ತೊಂದು.

ಕೇಳಬೇಕೆಂದುಕೊಳ್ಳುತ್ತೇನೆ-
ರಕ್ತ ಉಕ್ಕುವ ಕಣ್ಣಿನ ಆಳದಲ್ಲಿ
ಮಡುಗಟ್ಟಿದ ನೋವಿಗೆ ಎಲ್ಲಿ
ಸಿಗಬಹುದು ಮದ್ದು ಮತ್ತು ಮುದ್ದು ಎಂದು.
ತಟ್ಟನೆ ಉತ್ತರಿಸುತ್ತದೆ ನೀಲಿಗಟ್ಟಿದ ದಪ್ಪ ತುಟಿಯೊಂದು
“ಒಡೆದ ತುಟಿಗಳಿಗೆ ಲೇಪಿಸಿಕೊಳ್ಳುವ
ವ್ಯಾಸಲೀನ ಕೂಡಾ ವಶೀಲಿ ಕೇಳುತ್ತದೆ.”

ಚರ್ಮದ ವಾಸನೆಯನ್ನು ಮೂಗಿಗೆ ಹತ್ತಿಸಿಕೊಂಡ
ಶ್ವಾನ ನಾಸಿಕಗಳಂತೆ ಕೆಂಪಿರುವೆ ಸಾಲು
ದಂಡುದಂಡಾಗಿ ಸುತ್ತಮುತ್ತಲಿನ ಮೂಲೆಗಳಿಂದ
ತಟ್ಟನೆ ಎದ್ದು ಬಿಡುತ್ತವೆ. ಹಸಕು ವಾಸನೆ ಹುಚ್ಚು ಹಿಡಿಸಿದಂತೆ.
ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಬೇಕೆಂದರೆ
ತೀರಿದ ಎಣ್ಣೆ ಡಬ್ಬ ಅಣಕಿಸಿ ನಗುತ್ತದೆ.

ಕೋಮಲ ಕನಸುಗಳ ಹೊತ್ತ ಹೊಲಕ್ಕೆ
ಚಿತ್ತಾರದ ಬೀಜಗಳ ಬಿತ್ತಿ, ಕೊನೆಯಲ್ಲಿ
ಕೊಳಚೆ ನೀರನ್ನು ಹಾಯಿಸಿ, ಕಳೆಗಿಡಗಳ ಬೆಳೆಸಿ
ಗೋರಿವಾಕ್ಯ ಹಾಡುವ
ಭಂಡರ ಗೊಂಡೆ ಬೆಳೆಯುತ್ತಲೇ ಇದೆ.
ಬಳ್ಳಿಯಾಗಿ ಸುತ್ತಿ ಉಸಿರುಗಟ್ಟಿಸಬೇಕೆನಿಸುತ್ತದೆ.
ನೀರು ಜಿನುಗಿದಡೆಯಲ್ಲೆಲ್ಲಾ ಆರ್ದ್ರವಾದ
ಮಣ್ಣಿನ ಗರ್ಭದಲ್ಲಿ ಬಿತ್ತದೆಯೇ
ಚಿಗುರೊಡೆದ ಹಸಿರು ಬೆರಗುಗೊಳಿಸುತ್ತದೆ. ನೋಡುತ್ತ
ಒಡಲಲ್ಲಿರುವ ಹಸಿರಿಗೆ ಹೆರಿಗೆ ನೋವು ಬಂದಂತಾಯ್ತು.
ಮುಖದಲ್ಲಿ ಮಲ್ಲಿಗೆಯ ನಗು ಮೂಡಿದರೂ
ಬಿರುಕಾದ ತುಟಿಗಳಿಗೆ ನಗಲಾಗಲಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಿಶಾಚಿ ದೈವಕ್ಕೆ ಹೇಳಿದ್ದು
Next post ಶಬರಿ – ೯

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys