Home / ಕವನ / ಕವಿತೆ / ನಕ್ಕರೆ ನೋವಾಗುವುದು

ನಕ್ಕರೆ ನೋವಾಗುವುದು

ಎದೆಯೊಳಗೆ ಬೆಂಕಿ ಬಿದ್ದರೂ
ಜಪ್ಪಯ್ಯ ಎನ್ನದೇ ನಗುವ ಮುಖಗಳ ಕಂಡಾಗಲೆಲ್ಲಾ
ನನ್ನಲ್ಲಿ ಕನಿಕರದೊಂದಿಗೆ ಉಕ್ಕುವ ತಳಮಳ
ನಾನೊಬ್ಬಳೆ ಅಲ್ಲ ನನ್ನ ಸುತ್ತಲೂ
ಹತ್ತಾರು ಪಾತ್ರಗಳು
ನವಿಲುಗರಿ ಪೋಣಿಸಿಕೊಂಡು
ಡಂಭ ಬಡಿಯುವ ಕೆಂಬೂತಗಳು
ಹಾದು ಹೋಗುತ್ತಿವೆ.
ಒಂದರ ನಂತರ ಮತ್ತೊಂದು.

ಕೇಳಬೇಕೆಂದುಕೊಳ್ಳುತ್ತೇನೆ-
ರಕ್ತ ಉಕ್ಕುವ ಕಣ್ಣಿನ ಆಳದಲ್ಲಿ
ಮಡುಗಟ್ಟಿದ ನೋವಿಗೆ ಎಲ್ಲಿ
ಸಿಗಬಹುದು ಮದ್ದು ಮತ್ತು ಮುದ್ದು ಎಂದು.
ತಟ್ಟನೆ ಉತ್ತರಿಸುತ್ತದೆ ನೀಲಿಗಟ್ಟಿದ ದಪ್ಪ ತುಟಿಯೊಂದು
“ಒಡೆದ ತುಟಿಗಳಿಗೆ ಲೇಪಿಸಿಕೊಳ್ಳುವ
ವ್ಯಾಸಲೀನ ಕೂಡಾ ವಶೀಲಿ ಕೇಳುತ್ತದೆ.”

ಚರ್ಮದ ವಾಸನೆಯನ್ನು ಮೂಗಿಗೆ ಹತ್ತಿಸಿಕೊಂಡ
ಶ್ವಾನ ನಾಸಿಕಗಳಂತೆ ಕೆಂಪಿರುವೆ ಸಾಲು
ದಂಡುದಂಡಾಗಿ ಸುತ್ತಮುತ್ತಲಿನ ಮೂಲೆಗಳಿಂದ
ತಟ್ಟನೆ ಎದ್ದು ಬಿಡುತ್ತವೆ. ಹಸಕು ವಾಸನೆ ಹುಚ್ಚು ಹಿಡಿಸಿದಂತೆ.
ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಬೇಕೆಂದರೆ
ತೀರಿದ ಎಣ್ಣೆ ಡಬ್ಬ ಅಣಕಿಸಿ ನಗುತ್ತದೆ.

ಕೋಮಲ ಕನಸುಗಳ ಹೊತ್ತ ಹೊಲಕ್ಕೆ
ಚಿತ್ತಾರದ ಬೀಜಗಳ ಬಿತ್ತಿ, ಕೊನೆಯಲ್ಲಿ
ಕೊಳಚೆ ನೀರನ್ನು ಹಾಯಿಸಿ, ಕಳೆಗಿಡಗಳ ಬೆಳೆಸಿ
ಗೋರಿವಾಕ್ಯ ಹಾಡುವ
ಭಂಡರ ಗೊಂಡೆ ಬೆಳೆಯುತ್ತಲೇ ಇದೆ.
ಬಳ್ಳಿಯಾಗಿ ಸುತ್ತಿ ಉಸಿರುಗಟ್ಟಿಸಬೇಕೆನಿಸುತ್ತದೆ.
ನೀರು ಜಿನುಗಿದಡೆಯಲ್ಲೆಲ್ಲಾ ಆರ್ದ್ರವಾದ
ಮಣ್ಣಿನ ಗರ್ಭದಲ್ಲಿ ಬಿತ್ತದೆಯೇ
ಚಿಗುರೊಡೆದ ಹಸಿರು ಬೆರಗುಗೊಳಿಸುತ್ತದೆ. ನೋಡುತ್ತ
ಒಡಲಲ್ಲಿರುವ ಹಸಿರಿಗೆ ಹೆರಿಗೆ ನೋವು ಬಂದಂತಾಯ್ತು.
ಮುಖದಲ್ಲಿ ಮಲ್ಲಿಗೆಯ ನಗು ಮೂಡಿದರೂ
ಬಿರುಕಾದ ತುಟಿಗಳಿಗೆ ನಗಲಾಗಲಿಲ್ಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...