ವ್ಯಾಪಾರಿಗಳು

ಬರುವುದಿಲ್ಲವಿನ್ನೆಂದರೆ ಬರುತಿದ್ದರು
ದೂರ ದೇಶದ ವ್ಯಾಪಾರಿಗಳು
ವಿಧ ವಿಧ ಸರಕನು ತುಂಬಿದ ಹೇರು
ಎಳೆಯಲು ಅರಬೀ ಕುದುರೆಗಳು

ಊರಿನ ಮುಂದೆಯೆ ಡೇರೆಯ ಹಾಕಿ
ಹೂಡುವರಿವರು ಬಿಡಾರ
ಗಲ್ಲಿ ಗಲ್ಲಿಗೂ ಬರುವರು ಹುಡುಕಿ
ಮಾತೇ ಮಾಯಾ ಬಜಾರ

ಉಂಗುರ ಮಣಿಸರ ಕಾಡಿಗೆ ಚೌರಿ
ಕನ್ನಡಿಯೊಳಗಿನ ಮುಖವು
ವರ್ಷದ ದುಃಖದ ಗಂಟನು ಮಾರಿ
ಕೊಂಡರೆ ಬಯಸಿದ ಸುಖವು

ಅವರೂ ಜಾಣರೆ! ತಮ್ಮ ಖರೀದಿಗೆ
ಹಾಕುವರಂತೆ ಗಿಲೀಟು
ಬಿಚ್ಚಲು ಹೀಗೆ ಮುಂದಿನ ಬೇಸಿಗೆ
ಥಳ ಥಳ ಹೊಳೆಯುವುದೊಗಟು

ಆದರು ನಾವು ಕಾದಿರುತಿದ್ದೆವು
ಇವರು ಬರುವ ಸಮಯ
ತುಂಬಿದಂತೆ ಮನದೊಳಗಿನ ನೋವು
ಪ್ರತಿಯೊಂದೂ ಮನೆಯ!

ಮಳೆ ಮುಗಿಯಿತು ಬೇಸಿಗೆಯೂ ಕಳೆಯಿತು
ಆದರು ಯಾರದು ಸುಳಿವಿಲ್ಲ
ಒಳಗಿನ ನೋವು ಒಳಗೇ ಉಳಿಯಿತು
ಅಳಿವುದೆಂದರೆ ಅಳಿದಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ – ೪
Next post ಮನದಿನಿಯ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…