ವ್ಯಾಪಾರಿಗಳು

ಬರುವುದಿಲ್ಲವಿನ್ನೆಂದರೆ ಬರುತಿದ್ದರು
ದೂರ ದೇಶದ ವ್ಯಾಪಾರಿಗಳು
ವಿಧ ವಿಧ ಸರಕನು ತುಂಬಿದ ಹೇರು
ಎಳೆಯಲು ಅರಬೀ ಕುದುರೆಗಳು

ಊರಿನ ಮುಂದೆಯೆ ಡೇರೆಯ ಹಾಕಿ
ಹೂಡುವರಿವರು ಬಿಡಾರ
ಗಲ್ಲಿ ಗಲ್ಲಿಗೂ ಬರುವರು ಹುಡುಕಿ
ಮಾತೇ ಮಾಯಾ ಬಜಾರ

ಉಂಗುರ ಮಣಿಸರ ಕಾಡಿಗೆ ಚೌರಿ
ಕನ್ನಡಿಯೊಳಗಿನ ಮುಖವು
ವರ್ಷದ ದುಃಖದ ಗಂಟನು ಮಾರಿ
ಕೊಂಡರೆ ಬಯಸಿದ ಸುಖವು

ಅವರೂ ಜಾಣರೆ! ತಮ್ಮ ಖರೀದಿಗೆ
ಹಾಕುವರಂತೆ ಗಿಲೀಟು
ಬಿಚ್ಚಲು ಹೀಗೆ ಮುಂದಿನ ಬೇಸಿಗೆ
ಥಳ ಥಳ ಹೊಳೆಯುವುದೊಗಟು

ಆದರು ನಾವು ಕಾದಿರುತಿದ್ದೆವು
ಇವರು ಬರುವ ಸಮಯ
ತುಂಬಿದಂತೆ ಮನದೊಳಗಿನ ನೋವು
ಪ್ರತಿಯೊಂದೂ ಮನೆಯ!

ಮಳೆ ಮುಗಿಯಿತು ಬೇಸಿಗೆಯೂ ಕಳೆಯಿತು
ಆದರು ಯಾರದು ಸುಳಿವಿಲ್ಲ
ಒಳಗಿನ ನೋವು ಒಳಗೇ ಉಳಿಯಿತು
ಅಳಿವುದೆಂದರೆ ಅಳಿದಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ – ೪
Next post ಮನದಿನಿಯ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…