ವ್ಯಾಪಾರಿಗಳು

ಬರುವುದಿಲ್ಲವಿನ್ನೆಂದರೆ ಬರುತಿದ್ದರು
ದೂರ ದೇಶದ ವ್ಯಾಪಾರಿಗಳು
ವಿಧ ವಿಧ ಸರಕನು ತುಂಬಿದ ಹೇರು
ಎಳೆಯಲು ಅರಬೀ ಕುದುರೆಗಳು

ಊರಿನ ಮುಂದೆಯೆ ಡೇರೆಯ ಹಾಕಿ
ಹೂಡುವರಿವರು ಬಿಡಾರ
ಗಲ್ಲಿ ಗಲ್ಲಿಗೂ ಬರುವರು ಹುಡುಕಿ
ಮಾತೇ ಮಾಯಾ ಬಜಾರ

ಉಂಗುರ ಮಣಿಸರ ಕಾಡಿಗೆ ಚೌರಿ
ಕನ್ನಡಿಯೊಳಗಿನ ಮುಖವು
ವರ್ಷದ ದುಃಖದ ಗಂಟನು ಮಾರಿ
ಕೊಂಡರೆ ಬಯಸಿದ ಸುಖವು

ಅವರೂ ಜಾಣರೆ! ತಮ್ಮ ಖರೀದಿಗೆ
ಹಾಕುವರಂತೆ ಗಿಲೀಟು
ಬಿಚ್ಚಲು ಹೀಗೆ ಮುಂದಿನ ಬೇಸಿಗೆ
ಥಳ ಥಳ ಹೊಳೆಯುವುದೊಗಟು

ಆದರು ನಾವು ಕಾದಿರುತಿದ್ದೆವು
ಇವರು ಬರುವ ಸಮಯ
ತುಂಬಿದಂತೆ ಮನದೊಳಗಿನ ನೋವು
ಪ್ರತಿಯೊಂದೂ ಮನೆಯ!

ಮಳೆ ಮುಗಿಯಿತು ಬೇಸಿಗೆಯೂ ಕಳೆಯಿತು
ಆದರು ಯಾರದು ಸುಳಿವಿಲ್ಲ
ಒಳಗಿನ ನೋವು ಒಳಗೇ ಉಳಿಯಿತು
ಅಳಿವುದೆಂದರೆ ಅಳಿದಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ – ೪
Next post ಮನದಿನಿಯ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

cheap jordans|wholesale air max|wholesale jordans|wholesale jewelry|wholesale jerseys