ಭವಸಯ್ಯಾಡಿದ್ದೇನೋ ಮೊಹರಮ್ಮಕೆ

ಭವಸಯ್ಯಾಡಿದ್ದೇನೋ ಮೊಹರಮ್ಮಕೆ
ಅಲಾವಿಯಾಡಿದ್ದೇನೋ || ಪ ||

ಭವ ಎಂಬ ಭವಸಯ್ಯ
ಅರುವಿನ ಅಲಾವಿ
ಮೂರು ಕೂಡಿದಲ್ಲೆ
ಮೊಹರಮ್ಮ ಮಾಡಿದ್ದೆ || ೧ ||

ದುಷ್ಟ ಯಜೀದನು
ಸುಖಸು ಜಾತಿ ಮುಸಲ್ಮಾನನು
ಝೇರೆಭಾರ ಘಟಪಟ ಕತ್ತಲ ರಾತ್ರಿ
ಝಟಪಟ ಘಟವೇರಿ ದರದಪವಾಯಿತು || ೨ ||

ತನು ಮಸೂತಿಯೊಳು
ಪಂಚತತ್ವ ಪಂಜಽಯ ಕೂಡಿಸಿದ್ದೇನೋ
ಈಡ ಪಿಂಗಳ ಹಸೇನಿ ಹುಸೇನಿ
ಜೀತಮೌಲಾಲಿಗೆ ತನುವನ್ನು ಒಪ್ಪಿಸಿ || ೩ ||

ನಡೆನುಡಿ ಲಾಡಿ ಮಾಡಿದ್ದೆ
ನಾ ಹರಕೆಯ ಬೇಡಿ ಕೊರಳೊಳಗೆ ಹಾಕಿಕೊಂಡಿದ್ದೆ
ಪಂಚಾಕ್ಷರಿ ಮಂತ್ರ ಪಾತೇಹ ಕೊಟ್ಟು
ಕಂದೂರಿ ಮಾಡಿ ಫಕ್ಕೀರಗೆ ಉಣಸಿದ್ದೆ || ೪ ||

ಸತ್ಯುಳ್ಳ ಶರಣರು ಪೈಗಂಬರರು
ಸತ್ಯವ ತೋರಿದರು
ಸತ್ತು ಸಾಯದ್ಹಾಂಗ ಇದ್ದು ಇಲ್ಲದ್ಹಾಂಗ
ಮಕ್ಕಾಮದೀನದೊಳು ಐಕ್ಯಾದ ಮಡಿವಾಳಗೆ || ೫ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಲವೇ… ಭಾಗ – ೧೦
Next post ಆಚೆ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys