ಮಳೆಗೂ ಇಳೆಗೂ
ಜಗಳ
ಅದಕಾಗಿ ಬಲಿಯೂ
ನಡೆದು ಹೋಯಿತು
***
ನದಿಗೂ ಕ್ರೌರ್ಯ ಇದೆ
ದಡದಲ್ಲಿನ ಬದುಕು
ಸ್ಮಶಾನವಾಗಿದೆ
***
ಭೂಮಿತಾಯಿ ಮೇಲೆ
ಮುಗಿಲ ಮಗಳ
ಮುನಿಸು
ನದಿ ಪ್ರವಾಹವಾಗಿ
ಬಯಲ ಬದುಕು
ಮತ್ತೆ ಬಯಲಾಗಿಸಿತು
****
ಮನುಷ್ಯ ಕಟ್ಟಿದ್ದನ್ನೆಲ್ಲಾ
ಮಳೆ ಕಸಿಯಿತು
ನದಿಯ ಸುತ್ತಲಿದ್ದವರ
ಕನಸು ಕುಸಿಯಿತು
***
ನದಿ ದಂಡೆ , ನಗರ ಪಟ್ಟಣದಿ
ನಿನ್ನದೇ ಸುದ್ದಿ
ಯಾಕೆ ಹೀಗೆ ಕುದಿಯುತಿರುವೆ
ಮಳೆಯೇ ?
****
ಹೊಲ ಗದ್ದೆ ರೈತ
ವ್ಯಾಪಾರಿ, ಪೂಜಾರಿ, ದೇವರು, ತಾಯಿ, ಮಗು, ಅಜ್ಜ
ಎಲ್ಲರೂ ಸೋತಿದ್ದಾರೆ
ಕೋಪ ಇಳಿದಿಲ್ಲವೇ ಮಳೆಯೇ ??
*****
Related Post
ಸಣ್ಣ ಕತೆ
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
-
ಎರಡು…. ದೃಷ್ಟಿ!
ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…
-
ವಿಷಚಕ್ರ
"ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…
-
ಮಿಂಚು
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
-
ಟೋಪಿ ಮಾರುತಿ
"ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…