ಮಳೆಗೂ ಇಳೆಗೂ
ಜಗಳ
ಅದಕಾಗಿ ಬಲಿಯೂ
ನಡೆದು ಹೋಯಿತು
***
ನದಿಗೂ ಕ್ರೌರ್ಯ ಇದೆ
ದಡದಲ್ಲಿನ ಬದುಕು
ಸ್ಮಶಾನವಾಗಿದೆ
***
ಭೂಮಿತಾಯಿ ಮೇಲೆ
ಮುಗಿಲ ಮಗಳ
ಮುನಿಸು
ನದಿ ಪ್ರವಾಹವಾಗಿ
ಬಯಲ ಬದುಕು
ಮತ್ತೆ ಬಯಲಾಗಿಸಿತು
****
ಮನುಷ್ಯ ಕಟ್ಟಿದ್ದನ್ನೆಲ್ಲಾ
ಮಳೆ ಕಸಿಯಿತು
ನದಿಯ ಸುತ್ತಲಿದ್ದವರ
ಕನಸು ಕುಸಿಯಿತು
***
ನದಿ ದಂಡೆ , ನಗರ ಪಟ್ಟಣದಿ
ನಿನ್ನದೇ ಸುದ್ದಿ
ಯಾಕೆ ಹೀಗೆ ಕುದಿಯುತಿರುವೆ
ಮಳೆಯೇ ?
****
ಹೊಲ ಗದ್ದೆ ರೈತ
ವ್ಯಾಪಾರಿ, ಪೂಜಾರಿ, ದೇವರು, ತಾಯಿ, ಮಗು, ಅಜ್ಜ
ಎಲ್ಲರೂ ಸೋತಿದ್ದಾರೆ
ಕೋಪ ಇಳಿದಿಲ್ಲವೇ ಮಳೆಯೇ ??
*****
Related Post
ಸಣ್ಣ ಕತೆ
-
ಸ್ವಯಂಪ್ರಕಾಶ
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
-
ತಿಥಿ
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…
-
ಪ್ರಥಮ ದರ್ಶನದ ಪ್ರೇಮ
ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…
-
ಪ್ರೇಮನಗರಿಯಲ್ಲಿ ಮದುವೆ
ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…
-
ಮನೆ “ಮಗಳು” ಗರ್ಭಿಣಿಯಾದಾಗ
ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…