ಚಲ್ಲಿ ಬಾ ಶಾಸ್ತ್ರಗಳ ಚಲ್ಲಿ ಬಾ ಶಸ್ತ್ರಗಳ

ನಾಲ್ಕು ವರುಷಗಳ ಶಾಸ್ತ್ರ ಪಂಡಿತ ಶಾಸ್ತ್ರಿ
ಮೂರು ನಿಮಿಷದ ಶೂನ್ಯ ನೀ ಬಲ್ಲೆಯಾ
ಅದ್ವೈತ ತರ್ಕದಲಿ ಗಣಿತಜ್ಞ ನೀನಾಗಿ.
ನಿಶ್ಯಬ್ದದಲಿನಿಂದು ನಗಬಲ್ಲೆಯಾ

ಶೂನ್ಯ ಹೇಳಲು ಹೋಗಿ ಸೊನ್ನೆ ಯಾದೆಯ ಜಾಣ
ಕಾಜಾಣ ಕೋಗಿಲೆಯ ಮಾಜಾಣರು
ನಿನ್ನ ಕಣಜದ ಒಳಗೆ ಹಣಜಲಿಯ ಒಟ್ಟುತ್ತ
ರತ್ನದೀಪ್ತಿಯ ಲಾಭ ನೀ ಮರತೆಯ

ನಾನು ಸುಂದರ ಆತ್ಮಶಿವನ ಬಂಧುರ ಪದ್ಮ
ಓ ಅವನೆ ತಾಯ್ತಂದಿ ಬಂಧುಬಳಗ
ಈ ಪ್ರೀತಿ ಮೌನಕ್ಕೆ ಈ ಪ್ರೇಮದೂಟಕ್ಕೆ
ಅದ್ವೈತವಿವೇಕ ಯಾಕೆ ಬೇಕು

ನಾನೆ ಬ್ರಹ್ಮನನು ಎಂದು ಬ್ರಹ್ಮನನ್ನು ಕೊಂದವನೆ
ಮರಳಿ ಬಾ ಈ ಪ್ರೀತಿ ಕಾರಂಜಿಗೆ
ಸರ್ವಾತ್ಮ ಶಿವನೆಂದು ಉಬ್ಬುಬ್ಬಿ ಉಲಿದವನೆ
ಬಾಲಲೀಲಾಯೋಗಿಯಾಗು ಇಳೆಗೆ

ಹೂವಾಗು ಹಣ್ಣಾಗು ಹೊಳೆಯಾಗು ಬೆಳಗಾಗು
ಆತ್ಮಸಂಪುಟವೊಡೆದು ಕಮಲವಾಗು
ಚಲ್ಲಿ ಬಾ ಶಾಸ್ತ್ರಗಳ ಚಲ್ಲಿ ಬಾ ಶಸ್ತ್ರಗಳ
ಇಲ್ಲಿಬಾ ಗರಿಬಿಚ್ಚಿ ಹಂಸೆಯಾಗು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಳ
Next post ವಿನಯ

ಸಣ್ಣ ಕತೆ

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…