ಚಲ್ಲಿ ಬಾ ಶಾಸ್ತ್ರಗಳ ಚಲ್ಲಿ ಬಾ ಶಸ್ತ್ರಗಳ

ನಾಲ್ಕು ವರುಷಗಳ ಶಾಸ್ತ್ರ ಪಂಡಿತ ಶಾಸ್ತ್ರಿ
ಮೂರು ನಿಮಿಷದ ಶೂನ್ಯ ನೀ ಬಲ್ಲೆಯಾ
ಅದ್ವೈತ ತರ್ಕದಲಿ ಗಣಿತಜ್ಞ ನೀನಾಗಿ.
ನಿಶ್ಯಬ್ದದಲಿನಿಂದು ನಗಬಲ್ಲೆಯಾ

ಶೂನ್ಯ ಹೇಳಲು ಹೋಗಿ ಸೊನ್ನೆ ಯಾದೆಯ ಜಾಣ
ಕಾಜಾಣ ಕೋಗಿಲೆಯ ಮಾಜಾಣರು
ನಿನ್ನ ಕಣಜದ ಒಳಗೆ ಹಣಜಲಿಯ ಒಟ್ಟುತ್ತ
ರತ್ನದೀಪ್ತಿಯ ಲಾಭ ನೀ ಮರತೆಯ

ನಾನು ಸುಂದರ ಆತ್ಮಶಿವನ ಬಂಧುರ ಪದ್ಮ
ಓ ಅವನೆ ತಾಯ್ತಂದಿ ಬಂಧುಬಳಗ
ಈ ಪ್ರೀತಿ ಮೌನಕ್ಕೆ ಈ ಪ್ರೇಮದೂಟಕ್ಕೆ
ಅದ್ವೈತವಿವೇಕ ಯಾಕೆ ಬೇಕು

ನಾನೆ ಬ್ರಹ್ಮನನು ಎಂದು ಬ್ರಹ್ಮನನ್ನು ಕೊಂದವನೆ
ಮರಳಿ ಬಾ ಈ ಪ್ರೀತಿ ಕಾರಂಜಿಗೆ
ಸರ್ವಾತ್ಮ ಶಿವನೆಂದು ಉಬ್ಬುಬ್ಬಿ ಉಲಿದವನೆ
ಬಾಲಲೀಲಾಯೋಗಿಯಾಗು ಇಳೆಗೆ

ಹೂವಾಗು ಹಣ್ಣಾಗು ಹೊಳೆಯಾಗು ಬೆಳಗಾಗು
ಆತ್ಮಸಂಪುಟವೊಡೆದು ಕಮಲವಾಗು
ಚಲ್ಲಿ ಬಾ ಶಾಸ್ತ್ರಗಳ ಚಲ್ಲಿ ಬಾ ಶಸ್ತ್ರಗಳ
ಇಲ್ಲಿಬಾ ಗರಿಬಿಚ್ಚಿ ಹಂಸೆಯಾಗು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಳ
Next post ವಿನಯ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…