ಚಲ್ಲಿ ಬಾ ಶಾಸ್ತ್ರಗಳ ಚಲ್ಲಿ ಬಾ ಶಸ್ತ್ರಗಳ

ನಾಲ್ಕು ವರುಷಗಳ ಶಾಸ್ತ್ರ ಪಂಡಿತ ಶಾಸ್ತ್ರಿ
ಮೂರು ನಿಮಿಷದ ಶೂನ್ಯ ನೀ ಬಲ್ಲೆಯಾ
ಅದ್ವೈತ ತರ್ಕದಲಿ ಗಣಿತಜ್ಞ ನೀನಾಗಿ.
ನಿಶ್ಯಬ್ದದಲಿನಿಂದು ನಗಬಲ್ಲೆಯಾ

ಶೂನ್ಯ ಹೇಳಲು ಹೋಗಿ ಸೊನ್ನೆ ಯಾದೆಯ ಜಾಣ
ಕಾಜಾಣ ಕೋಗಿಲೆಯ ಮಾಜಾಣರು
ನಿನ್ನ ಕಣಜದ ಒಳಗೆ ಹಣಜಲಿಯ ಒಟ್ಟುತ್ತ
ರತ್ನದೀಪ್ತಿಯ ಲಾಭ ನೀ ಮರತೆಯ

ನಾನು ಸುಂದರ ಆತ್ಮಶಿವನ ಬಂಧುರ ಪದ್ಮ
ಓ ಅವನೆ ತಾಯ್ತಂದಿ ಬಂಧುಬಳಗ
ಈ ಪ್ರೀತಿ ಮೌನಕ್ಕೆ ಈ ಪ್ರೇಮದೂಟಕ್ಕೆ
ಅದ್ವೈತವಿವೇಕ ಯಾಕೆ ಬೇಕು

ನಾನೆ ಬ್ರಹ್ಮನನು ಎಂದು ಬ್ರಹ್ಮನನ್ನು ಕೊಂದವನೆ
ಮರಳಿ ಬಾ ಈ ಪ್ರೀತಿ ಕಾರಂಜಿಗೆ
ಸರ್ವಾತ್ಮ ಶಿವನೆಂದು ಉಬ್ಬುಬ್ಬಿ ಉಲಿದವನೆ
ಬಾಲಲೀಲಾಯೋಗಿಯಾಗು ಇಳೆಗೆ

ಹೂವಾಗು ಹಣ್ಣಾಗು ಹೊಳೆಯಾಗು ಬೆಳಗಾಗು
ಆತ್ಮಸಂಪುಟವೊಡೆದು ಕಮಲವಾಗು
ಚಲ್ಲಿ ಬಾ ಶಾಸ್ತ್ರಗಳ ಚಲ್ಲಿ ಬಾ ಶಸ್ತ್ರಗಳ
ಇಲ್ಲಿಬಾ ಗರಿಬಿಚ್ಚಿ ಹಂಸೆಯಾಗು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಳ
Next post ವಿನಯ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys