ಜಯವೆನುತ ಕೈಮುಗಿದು ನಮಿಸುವೆ

ಜಯವೆನುತ ಕೈಮುಗಿದು ನಮಿಸುವೆ
ನಯದೊಳೊಂದಿಪೆ ದೃಢದಲಿ
ಭವಕ್ಕಪ್ರಾಣವ ದೂರಮಾಡೆಂದೆನುತ ಎನಮನಗೊನಿಯಲಿ || ಪ ||

ಭವನೆತ್ರೈಜೀವನ ಜಗತ್ಪರಿಪಾಲ ದಯಾನಿಧಿಯೆನುತಲಿ
ಮಹೀತಲ ಹಬ್ಬಲಿ ಮಹಾಭವಾಂಡದ ಸುತ್ತಲಿ
ಮೇಧಿನಿಸ್ತಳದಿ ಜನಸಿದೆಯೋ ಮೌಜಿಲಿ
ಚಿನುಮಯಾತ್ಮಕ ಸ್ವರೂಪಿಲೀ ಆ ಭಯ ಭಕ್ತಿಯಲಿ
ನಮಿಸುವೆ ಶ್ಯಾ ಚಮನ ಸುಂದರವಲಿ || ೧ ||

ಧರಿಯ ಚರಿಸ್ಯಾಡುತ್ತ ಬಂದಿರಿ
ಭರದಿ ದಕ್ಷಿಣ ಭಾಗಕೆ
ಗುರುಪರಾತ್ಪರದೇವ ಪರಮಫಕ್ಕೀರಪ್ರಭೋ ಜಾತಾರಕೆ
ಹರಿಹರಸ್ಥಲವೆಂದು ನೆಲಸಿ
ಮೆರಿದ ಬಾತಿಯ ಗ್ರಾಮಕೆ || ೨ ||

ಆದಿಯಿಂದ ಅತ್ತಲಾದಿರಿ
ಅನಾದಿ ಮೂರುತಿ ಆದಿಯೋ
ನಾದ ಬಿಂದು ಕಲಾತೀತ ವಿನೋದ ಬೋಧಾನಂದವು
ಸಾಧಿಸಿರಿ ಮುಕ್ತಾಂಗನಿಯರ ಪಾದಪರಬ್ರಹ್ಮವು
ಮೇದಿನಿಗೆ ಶಿಶುನಾಳಗ್ರಾಮದಿ ಓದಿಸುವೆ ತಮ್ಮಮಾನವು || ೩ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರತಿಯನು ಎತ್ತಿರೆ ಸದ್ಭಕ್ತರೆಲ್ಲರು
Next post ಪಂಕಜನೇತ್ರೇ ಬಾ ಅಂಕಿತಸ್ಥಾನಕೆ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys