ನೀವೇಕೆ ಬೇಕು?

ತಾರೆಯರೇ ಮಿಣುಮಿಣುಕಿ
ಅಣಕಿಸಿದ್ದು ಸಾಕು.
ಚಂದ್ರಮನೇ, ನಿನ್ನ ನಗುವಿಗೆ
ಮೂರು ಕಾಸು.
ಕೋಲ್ಮಿಂಚುಗಳೇ
ಎಷ್ಟು ಬಗೆಯ ಚಿತ್ತಾರ ಬರೆಯುತ್ತೀರಿ ನೀವು?
ಚಣಕೊಮ್ಮೆ ವೇಷ
ಬದಲಾಯಿಸಲೇಬೇಕೆ, ಮೋಡಗಳೇ?
ಕಲಕಲಿಸದಿದ್ದರೆ ನಿದ್ದೆ ಬರುವುದಿಲ್ಲವೆ, ಜಲವೆ?
ಕುಹೂ – ಕುಹೂ ಎಂದು ಕಿರುಲಬೇಡ, ಕೋಗಿಲೆಯೇ…
ಖುಷಿಯಿಂದ ಕೂಗುತ್ತೇನೆ ಕಿವಿಗೊಟ್ಟು ಕೇಳಿ-
‘ಕವನ ಹೊಸೆಯಲಿಕ್ಕೆ ಬೇಡ… ನೀವಿನ್ನು’


ಇಲ್ಲಿ…..
ನನ್ನ ನೆಲೆಯಲ್ಲಿ, ಕೆಂಪೆಲೆಗಳ ನಡುವೆ
ಅರಳುತ್ತವೆ ಹಸಿರು ಹೂಗಳು.
ಹೆಪ್ಪುಗಟ್ಟಿದ ಮೌನದಲ್ಲಿ
ಗುಣುಗುಣುಸಿ ಹಾಡುತ್ತವೆ ಗೂಬೆಗಳು.
ಹೆಜ್ಜೆ ಹಾದಿಯ ತುಂಬ
ಕುಲುಕುಲು ನಗುತ್ತದೆ ಇರುಳು.
ಇಲ್ಲಿ….. ಕನಸುಗಳೂ ಕಾಡುವುದಿಲ್ಲ.
ನೆನಪುಗಳು ಮರುಕಳಿಸುವುದಿಲ್ಲ.
ಕಲ್ಪನೆಗೂ ಮೀರಿದ ಬದುಕು,
ಕವನಿಸಲಿಕ್ಕೆ ಕೈ ತುಂಬ ಸರಕು.
ಹೀಗಿರುವಾಗ ನೀವೇಕೆ ಬೇಕು ಹೇಳಿ?


Previous post ರಾಮ ರಾಮ
Next post ಯಕ್ಷ ಪ್ರಶ್ನೆಗಳು

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…