Home / ಲೇಖನ / ವಿಜ್ಞಾನ / ಜೈವಿಕ ಬಾಂಬ್! ಭೂ ಪ್ರಳಯ!!

ಜೈವಿಕ ಬಾಂಬ್! ಭೂ ಪ್ರಳಯ!!

ಚಿತ್ರ: ಗರ್‍ಡ್ ಆಲ್ಟ್ ಮನ್

ಜೀವ ವಿಜ್ಞಾನದಲ್ಲಿ ನಡೆಯುತ್ತಿರುವ ನೂತನ ಸಂಶೋಧನೆಗಳ ದುಷ್ಪಲವಾಗಿದೆ ಎಂದು ಅಸಂಖ್ಯ ಮಾನವೀಯ ಹೃದಯಿಗಳು ಭಯವನ್ನು ವ್ಯಕ್ತಪಡಿಸಿವೆ. ಈ ಮಾತು ಸತ್ಯ ಜೈವಿಕ ಬಾಂಬಿನಿಂದ ಅಸಂಖ್ಯಾತ ಪಿಡುಗುಗಳು ಆಕ್ರಮಿಸಿ ಜಗತ್ತಿನ ಜೀವಿಗಳ ಮಾರಣ ಹೋಮವಾಗುತ್ತಿರುವುದು ವಾಸ್ತವದ ಸಂಗತಿಯಾಗಿದೆ.

ವಿಶ್ವದ ಎರಡನೆ ಮಹಾಯುದ್ಧದಲ್ಲಿಯೂ ಕೂಡ ಭಾಗಿಯಾಗಿದ್ದ ದೇಶಗಳು ಜೈವಿಕ ಸಮರಾಸ್ತ್ರಗಳನ್ನು ಬಳಸಿದ್ದವು. ಇವುಗಳಲ್ಲಿ ಖ್ಯಾತವಾದದ್ದೆಂದರೆ ಜಪಾನಿ ರಾಜಸೇನೆಯ ‘ಯುನಿಟ್ ೭೩೧’ ಈ ಅಸ್ತ್ರವನ್ನು ಅಂದಿನ ಸಮರದಲ್ಲಿ ಸಿಡಿಸಿದ ಪರಿಣಾಮವಾಗಿ ಪ್ಲೇಗು, ನೆಗಡಿರೋಗ, ಕಾಲರಾ ಮುಂತಾದ ಡಜನ್‌ಗಟ್ಟಲೆ ಭೀಕರ ರೋಗಾಣುಗಳನ್ನು ಉತ್ಪಾದಿಸಿತು. ಈ ಕಾಯಿಲೆಗಳನ್ನು ಶತ್ರುದೇಶಗಳಲ್ಲಿ ಹರಡಿಸಿದ ಯೋಜನೆ ಕೂಡ ಅದಾಗಿತ್ತು. ಜಿನೇವ -ಪ್ರೊಟೋಕಾಲ್ ೧೯೨೫ರ ಅನ್ವಯ ಇಂಥಹ ಅಸ್ತ್ರಗಳನ್ನು ಬಳೆಸುವಂತಿಲ್ಲವೆಂಬ ನಿಯಮವನ್ನೇ ಮಾಡಲಾಗಿತ್ತು ವಿಯಟ್ನಾಂ ಯುದ್ಧದಲ್ಲಿ ಜೈವಿಕ ಸಮರಾಸ್ತ್ರಗಳನ್ನು ಬಳಸಿತ್ತು ಎಂಬ ಬಗ್ಗೆ ಆಧಾರಗಳಿದ್ದವೆಂದು ಅಂದಿನ ಸಂಶೋಧಕ ತಂಡ ಹೇಳಿತ್ತು. ಇಂತಹ ಜೈವಿಕ ಸಮರಾಸ್ತ್ರಗಳನ್ನು ಬಹುತೇಕ ರಾಷ್ಟ್ರಗಳು ಇಂದು ಹೊಂದಿವೆ ಎಂಬುವುದು ಗುಪ್ತಗಾಮಿನಿಯ ಸತ್ಯ. ಈ ಜೈವಿಕ ಸಮರಾಸ್ತ್ರದಲ್ಲಿ ಇರುವುದರಿಂದ, ಇವು ಸ್ಫೋಟಗೊಂಡ ಸ್ಥಳದಲ್ಲಿ ಮುಂದೆಂದೂ ಜೀವಸಂಕುಲದ ವಾಸನೆ ಇರಲಾರದೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ಸಮರಾಸ್ತ್ರದ ಪರಿಣಾಮವಾಗಿ ಹುಟ್ಟಿಕೊಳ್ಳುವ ಪಿಡುಗುಗಳು ಅಸಂಖ್ಯ! ಕಳೆದ ಎರಡು ದಶಕಗಳಲ್ಲಿ ಸು. ೩೦ ಬಗೆಯ ಬ್ಯಾಕ್ಟೀರಿಯಾ ಮತ್ತು ವೈರಸ್ ಪಿಡುಗುಗಳು ಈ ಭೂಮಿಯ ಮೇಲೆ ಅವತರಿಸಿವೆ. ‘ಇಬೋಲ’ ಮತ್ತು ‘ಏಡ್ಸ್’ ಇವು ಪ್ರಮುಖವಾದ ಜೈವಿಕಾಸ್ತ್ರದ ಮೂಲಕೊಡುಗೆಗಳಾಗಿವೆ. ೧೯೯೫ ರಲ್ಲಿ ‘ಇಬೋಲ’ ಸೊಂಕು ಜೈರ್ ಸುತ್ತ ಮುತ್ತಲೂ ಕಾಣಿಸಿಕೊಂಡು ೧೫೦ ಜನರನ್ನು ಕೊಂದಿತು. ಈ ಸೊಂಕು ತಗುಲಿದ ೨೪ ಗಂಟೆಗಳ ಒಳಗೆ ಸಾವು ಖಚಿತ. ಇದಕ್ಕೆ ನಿಖರವಾದ ಚಿಕಿತ್ಸಯೇ ಇಲ್ಲ. ‘ಏಡ್ಸ್’ ಗೆ ಕಾರಣವಾಗುವ ಈಗ ಜಾಗತಿಕ ಮಟ್ಟದ ಕಾಡುವ ರೋಗ, ಇದರ ಜತೆಗೆ ಹಳೆಯ ರೋಗಗಳು ಪುನರಾವರ್ತನೆಗೊಳ್ಳುತ್ತಲಿವೆ. ‘ಪ್ಲೇಗು’ ಇದು ಕೂಡ ಭಯಂಕರ ರೋಗ. ಗುಜರಾತಿನಲ್ಲಿ ೧೯೯೪ ರಲ್ಲಿ ಕಾಣಿಸಿಕೊಂಡಿತು. ಇದು ಜೈವಿಕ ಸಮರಾಸ್ತ್ರದ ಪ್ರಯೋಗ ಎಂಬ ವಾದವಿದೆ. ೯೦ ರ ದಶಕದಲ್ಲಿ ಪ್ಲೇಗು ಜಗತ್ತಿನ ವಿವಿಧ ಭಾಗಗಳಲ್ಲಿ ಮರುಕಳಿಸುತ್ತಿರುವುದಂತು ಸತ್ಯ. ಭಾರತದಲ್ಲಿ ೩೦ ವರ್ಷಗಳ ನಂತರದಲ್ಲಿ ಕಾಣಿಸಿಕೊಂಡಿದ್ದರೆ ‘ಮಾಲವಿ’ ಮತ್ತು ‘ಜಿಂಬಾಬ್ವೆ’ ಯಲ್ಲಿ ೧೫ ವರ್ಷಗಳ ನಂತರ ಕಾಣಿಸಿಕೊಂಡಿತು. ಜಾಂಬಿಯಾದಲ್ಲಿ ೭೦ ವರ್ಷಗಳ ನಂತರ ಮರುಕಳಿಸಿತು. ಇದರ ಜೊತೆಗೆ ಮಲೇರಿಯಾ ಇದು ಕೂಡ ಒಂದು ವಿಲಕ್ಷಣ ರೋಗ, ಕ್ಲೋರೋಕ್ಟಿನ್ ರೋಧಕ ಮಲೇರಿಯಾ ಕ್ರಿಮಿಗಳು ವ್ಯಾಪಕವಾಗಿ ಹರಡುತ್ತವೆ. ಮಲೇರಿಯಾಕ್ಕೊಂದು ಪರಿಣಾಮಕಾರಿಯಾದ ಲಸಿಕೆಯನ್ನು ನಿರ್ಮಿಸಬೇಕೆಂಬ ಪ್ರಯತ್ನ ಇಂದಿಗೂ ಯಶಸ್ವಿಯಾಗಿಲ್ಲ. ಇದರಂತೆ ‘ಕ್ಷಯ’ ರೋಗವೂ ಒಂದು. ಪ್ರತಿವರ್ಷವೂ ಜಗತ್ತಿನ ಬಹುಭಾಗಗಳಲ್ಲಿರುವ ಹಲವು ರೋಗಗಳು ಸಣ್ಣ ಪುಟ್ಟ ಪಿಡುಗುಗಳ ರೀತಿಯಲ್ಲಿ ಮರುಕಳಿಸುತ್ತಿರುವ ಸುದ್ದಿಗಳು ಬರುತ್ತಿವೆ. ಕಾಲರಾ, ಕರಳುಬೇನೆ, ಜಾಪನೀಸ್, ಮಿದುಳು, ಜ್ವರ, ಡೆಂಗ್ಯೂಜ್ವರ ಮುಂತಾದವುಗಳು ಮನುಷ್ಯರನ್ನು ಆಗಾಗ ಆಕ್ರಮಿಸುತ್ತಲೇ ಇರುತ್ತವೆ.

ಈ ಹಿನ್ನಲೆಯಾಗಿ ಜೈವಿಕ ಸಮರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸಿ ಜಗತ್ತಿನಲ್ಲಿ ಶಾಂತಿ ಕಾಪಾಡಬೇಕಿದೆ. ಹಲವು ಶತೃರಾಷ್ಟ್ರಗಳಲ್ಲಿ ಇಂಥಹ ಜೈವಿಕ ಸಮರಾಸ್ತ್ರಗಳು ಆಂತರ್ಯದಲ್ಲಿಯೇ ತಯಾರಿಸಲಾಗುತ್ತದೆ, ಎಂಬ ಭಯಾನಕ ಸುದ್ದಿ ಇದೆ. ಮಾನವ ಕುಲವೆಲ್ಲ ಒಂದೇ ಶಾಂತಿ, ನೆಮ್ಮದಿ ನಮ್ಮೆಲ್ಲರ ಉಸಿರು ಎನ್ನುವುದು ಮುಖ್ಯವಾಗಬೇಕಿದೆ. ಇಲ್ಲದೇ ಹೋದರೆ ಈ ಅಸ್ತ್ರಗಳ ಪ್ರಯೋಗಗಳಿಂದ ಶಾಶ್ವತವಾಗಿ ಭೂಮಿ ಬಂಜರುವಾಗುವುದರಲ್ಲಿ ಸಂದೇಹವೇ ಇಲ್ಲ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್