ಸೌಂದರ್ಯ ಸ್ವರ್ಗ

ಹಾರುತಿದೆ ನೋಡಿಲ್ಲಿ ” ಸೌಂದರ್ಯಸ್ವರ್ಗ ! ”
ಹುಲ್ಲ ಮರೆಯಲ್ಲಿ, ಬೇಲಿ ಬದಿಯಲ್ಲಿ; ಮಿಣುಕುತಿದೆ
ಆಕಾರ ಬಲು ಕಿರಿದು, ಜೀವ ಸ್ವರ್ಗ !
ನಲಿಯುತಾ ನೆಗೆಯುತಾ ಚಲುವು ಹಾರುತಿದೆ

ಕಣವಿಲ್ಲಿ ಕ್ಷಣವಲ್ಲಿ; ಮಿಂಚುವೇಗ !
ಮುಳ್ಳು ರಾಶಿಯಲಿ, ಕಳ್ಳಿ ಕಂಟೆಯಲಿ ಕಿಲು- ಕುಲು
ಪುಟು ಪುಟನೆ ನೆಗೆಯುತಿದೆ ಬೇಗ
ಕಿರಿಯ ಪಕ್ಕಕೆ ಹೊಚ್ಚಿಹುದು ಚಲ್ಪ ವರ್ಣ ಶಾಲು

ಎಳೆ ಕರುಳಿನೀಂ ಮನ ಸೆಳೆಯುತಿದೆ
ಕಿರಿ ಚಂಚು ಮುಂಬದಿಗೆ; ಗರಿಬಾಲ ಹಿಂಬದಿಗೆ
ಪಂಚಬಾಣನ ಬಿಲ್ ಮಣಿಯುತಿದೆ
ಕಂಠದಿಂಚರವ ತುಂಬುತಿದೆ ಪೊದೆಯ ಬದಿಗೆ

ಉಲಿಯುತಿದೆ ಆ ರಸ ಜೀವನವು
ಲತೆಯ ಮಂಟಪವೇರಿ ಉಯ್ಯಾಲೆಯಾಡುತಿದೆ
ನಿಲ್ಲದೆಯೆ ಆಡುತಿದೆ ಸರಸ ಚಲವು
ಕಮಲದೇಟಿಗೆ ಹಾರಿ ಹೂವ ಪುಳುಕಿಸುತಿದೆ

ಹಿಡಿಯಲಸದಳವು ಕಿರಿಯ ಹೃದಯ
ನಯನ ಓಟಕೂ ಮಿಗಿಲಾದ ಓಟವಿದಕೇನು ?
ಸರ್ಗವನು ಕಂಟೆಗೆಳೆದ ಲಲಿತ ಮಾಯ
ಓಲಾಡುತಿದೆ, ಚಲ್ಲಾಡುತಿದೆ ಜೀವ “ಸೌಂದರ್ಯ ಸ್ವರ್ಗ”ವೇನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಕ್ಕು
Next post ಹೊಸ ವರ್ಷಗಳು

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…