ಸೌಂದರ್ಯ ಸ್ವರ್ಗ

ಹಾರುತಿದೆ ನೋಡಿಲ್ಲಿ ” ಸೌಂದರ್ಯಸ್ವರ್ಗ ! ”
ಹುಲ್ಲ ಮರೆಯಲ್ಲಿ, ಬೇಲಿ ಬದಿಯಲ್ಲಿ; ಮಿಣುಕುತಿದೆ
ಆಕಾರ ಬಲು ಕಿರಿದು, ಜೀವ ಸ್ವರ್ಗ !
ನಲಿಯುತಾ ನೆಗೆಯುತಾ ಚಲುವು ಹಾರುತಿದೆ

ಕಣವಿಲ್ಲಿ ಕ್ಷಣವಲ್ಲಿ; ಮಿಂಚುವೇಗ !
ಮುಳ್ಳು ರಾಶಿಯಲಿ, ಕಳ್ಳಿ ಕಂಟೆಯಲಿ ಕಿಲು- ಕುಲು
ಪುಟು ಪುಟನೆ ನೆಗೆಯುತಿದೆ ಬೇಗ
ಕಿರಿಯ ಪಕ್ಕಕೆ ಹೊಚ್ಚಿಹುದು ಚಲ್ಪ ವರ್ಣ ಶಾಲು

ಎಳೆ ಕರುಳಿನೀಂ ಮನ ಸೆಳೆಯುತಿದೆ
ಕಿರಿ ಚಂಚು ಮುಂಬದಿಗೆ; ಗರಿಬಾಲ ಹಿಂಬದಿಗೆ
ಪಂಚಬಾಣನ ಬಿಲ್ ಮಣಿಯುತಿದೆ
ಕಂಠದಿಂಚರವ ತುಂಬುತಿದೆ ಪೊದೆಯ ಬದಿಗೆ

ಉಲಿಯುತಿದೆ ಆ ರಸ ಜೀವನವು
ಲತೆಯ ಮಂಟಪವೇರಿ ಉಯ್ಯಾಲೆಯಾಡುತಿದೆ
ನಿಲ್ಲದೆಯೆ ಆಡುತಿದೆ ಸರಸ ಚಲವು
ಕಮಲದೇಟಿಗೆ ಹಾರಿ ಹೂವ ಪುಳುಕಿಸುತಿದೆ

ಹಿಡಿಯಲಸದಳವು ಕಿರಿಯ ಹೃದಯ
ನಯನ ಓಟಕೂ ಮಿಗಿಲಾದ ಓಟವಿದಕೇನು ?
ಸರ್ಗವನು ಕಂಟೆಗೆಳೆದ ಲಲಿತ ಮಾಯ
ಓಲಾಡುತಿದೆ, ಚಲ್ಲಾಡುತಿದೆ ಜೀವ “ಸೌಂದರ್ಯ ಸ್ವರ್ಗ”ವೇನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಕ್ಕು
Next post ಹೊಸ ವರ್ಷಗಳು

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys