ಗಂಡ

ಗಂಡನೆಂದರೆ ಪ್ರಾಣ ಗಂಡ-ಹೆಣ್ಣೆ ನೀ ಗಂಡನ ಕೂಡಿಕೊಂಡ್ಯ
ನೋಡು ಮಂಡೂಕ ಸರ್ಪದ ನೆಳಲಿಗೆ ಹೋದಂತೆ
ಬಂಡೀಗೆ ಬಸವನು ಶಿರಬಾಗಿಕೊಂಡಂತೆ!

ಹೆಸರಿಗೆ ಗಂಡ ಬಹುಚೆಂದ-ನಿನ್ನ ಸರ್ವಸ್ವವೇ ಅದುವೊಂದು
ನೋಡು ಹಸನಾದ ಪುರುಷನು ದೊರೆತರೆ ಆನಂದ
ಇಲ್ಲದಿದ್ದರೆ ಸದಾ ಸ್ವಾಮಿ ಗೋವಿಂದ!

ಗಂಡನ ಮನೆ ಸಗ್ಗ ನಿನಗೆ-ಮುನಿಯೆ ಗಂಡನೆ ಯಮರಾಯ ಕೊನೆಗೆ
ನಿನ್ನ ಮುಳುಗಿಪ ತೇಲಿಪ ಶಕ್ತಿಯುಂಟಾತಗೆ
ನೀನೊಂದು ವಿಕ್ರಯದೊಸ್ತುವು ಪುರುಷಗೆ!

ಮಲ್ಲಿಗೆ ಹರಳಂತೆ ನೀನು-ಬಳುಕಿ ಉಲ್ಲಾಸ ಪುಟ್ಟಿಸಲೇನು
ಭಳ್ಳಿರೆ ಭಾಪ್ಪುರೆ ಸಮರಿಲ್ಲವೆಂಬೋನು
ನಲ್ಲೆ ಬಾ ಮುತ್ತಿಡು ಧನ್ಯ ನಾನೆಂಬೋನು!

ಅಧಿಕಾರಿ ನಿನಗವನೊಬ್ಬ-ನಿರುತ ದುಡಿದರೆ ಅಶನದ ಹಬ್ಬ
ತಪ್ಪಿ ಬೇನೆ ಬೇಸರವಾಗಿ ಉಶ್ಶೆನ್ನಲಬ್ಬಬ್ಬ
ಏನಾಯ್ತ ಎಂದು ಗಂಟ್ಹಾಕುವ ಹುಬ್ಬ!

ಯುಕ್ತಿಯಿಂದಲಿ ಬಾಳು ನೀನು-ಸರ್ವಶಕ್ತನು ಪುರುಷನು
ತಪ್ಪಿದೆಯೆಂದರೆ ಕತ್ತನೆ ಮುರಿವೋನು (ತಾನವನು)
ಶಿಕಷ ರಕ್ಷಕ ನಿನ್ನ ದೈವವೆ ನಾಥನು!

ಎಚ್ಚರದಿಂದಿರು ಹೆಣ್ಣೆ-ಇಂತು ಬರೆದಿಹನು ಬ್ರಹ್ಮಣ್ಣ
ತಪ್ಪಿಸಲಳವುಂಟೆ ಸ್ತ್ರೀಪುರುಷರೊಡನಾಟ
ಲೀಲಾಮಾನುಷ ಭಕ್ತವತ್ಸಲನ ಆಟ!

ನಿರ್ಮಲವಾಗಿರಲಿ ಮನಸು-ಪತಿಯ ಚಿತ್ತವ ನೀನನುಸರಿಸು
ಕರ್ಮಾನುಸಾರದಿ ಫಲವುಂಟು ಈ ಜಗದಿ
ಧರ್ಮವ ಬಿಡದಿರು ಎಂಬಳು ಜನಕಜೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೋಧನ ಹಾಡು
Next post ಚಂದ ಚಂದದ ಮಕ್ಕಳು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…