ಗಂಡ

ಗಂಡನೆಂದರೆ ಪ್ರಾಣ ಗಂಡ-ಹೆಣ್ಣೆ ನೀ ಗಂಡನ ಕೂಡಿಕೊಂಡ್ಯ
ನೋಡು ಮಂಡೂಕ ಸರ್ಪದ ನೆಳಲಿಗೆ ಹೋದಂತೆ
ಬಂಡೀಗೆ ಬಸವನು ಶಿರಬಾಗಿಕೊಂಡಂತೆ!

ಹೆಸರಿಗೆ ಗಂಡ ಬಹುಚೆಂದ-ನಿನ್ನ ಸರ್ವಸ್ವವೇ ಅದುವೊಂದು
ನೋಡು ಹಸನಾದ ಪುರುಷನು ದೊರೆತರೆ ಆನಂದ
ಇಲ್ಲದಿದ್ದರೆ ಸದಾ ಸ್ವಾಮಿ ಗೋವಿಂದ!

ಗಂಡನ ಮನೆ ಸಗ್ಗ ನಿನಗೆ-ಮುನಿಯೆ ಗಂಡನೆ ಯಮರಾಯ ಕೊನೆಗೆ
ನಿನ್ನ ಮುಳುಗಿಪ ತೇಲಿಪ ಶಕ್ತಿಯುಂಟಾತಗೆ
ನೀನೊಂದು ವಿಕ್ರಯದೊಸ್ತುವು ಪುರುಷಗೆ!

ಮಲ್ಲಿಗೆ ಹರಳಂತೆ ನೀನು-ಬಳುಕಿ ಉಲ್ಲಾಸ ಪುಟ್ಟಿಸಲೇನು
ಭಳ್ಳಿರೆ ಭಾಪ್ಪುರೆ ಸಮರಿಲ್ಲವೆಂಬೋನು
ನಲ್ಲೆ ಬಾ ಮುತ್ತಿಡು ಧನ್ಯ ನಾನೆಂಬೋನು!

ಅಧಿಕಾರಿ ನಿನಗವನೊಬ್ಬ-ನಿರುತ ದುಡಿದರೆ ಅಶನದ ಹಬ್ಬ
ತಪ್ಪಿ ಬೇನೆ ಬೇಸರವಾಗಿ ಉಶ್ಶೆನ್ನಲಬ್ಬಬ್ಬ
ಏನಾಯ್ತ ಎಂದು ಗಂಟ್ಹಾಕುವ ಹುಬ್ಬ!

ಯುಕ್ತಿಯಿಂದಲಿ ಬಾಳು ನೀನು-ಸರ್ವಶಕ್ತನು ಪುರುಷನು
ತಪ್ಪಿದೆಯೆಂದರೆ ಕತ್ತನೆ ಮುರಿವೋನು (ತಾನವನು)
ಶಿಕಷ ರಕ್ಷಕ ನಿನ್ನ ದೈವವೆ ನಾಥನು!

ಎಚ್ಚರದಿಂದಿರು ಹೆಣ್ಣೆ-ಇಂತು ಬರೆದಿಹನು ಬ್ರಹ್ಮಣ್ಣ
ತಪ್ಪಿಸಲಳವುಂಟೆ ಸ್ತ್ರೀಪುರುಷರೊಡನಾಟ
ಲೀಲಾಮಾನುಷ ಭಕ್ತವತ್ಸಲನ ಆಟ!

ನಿರ್ಮಲವಾಗಿರಲಿ ಮನಸು-ಪತಿಯ ಚಿತ್ತವ ನೀನನುಸರಿಸು
ಕರ್ಮಾನುಸಾರದಿ ಫಲವುಂಟು ಈ ಜಗದಿ
ಧರ್ಮವ ಬಿಡದಿರು ಎಂಬಳು ಜನಕಜೆ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...