ಯೋಧನ ಹಾಡು

ಹೆತ್ತ ತಾಯಿಯೆ ನಿನ್ನ ಸೇವೆಗೆ
ಮುಡಿಪು ನನ್ನೀ ಬಾಳುವೆ,
ನಿನ್ನ ಮಗ ನಾ ಎನುವ ಹೆಮ್ಮೆಯ
ಹೊತ್ತು ಹರಿದಿದೆ ಕಾಲುವೆ.

ನಿನ್ನ ಸ್ಮರಣೆಯೆ ಇಂಥ ಭೀಕರ
ಯುದ್ಧ ರಂಗದ ನಡುವೆಯೂ,
ಸಹಜವಲ್ಲದ ಬಿರುಸು ಬಾಳಿನ
ಮೃತ್ಯು ಸನ್ನಿಧಿಯಲ್ಲಿಯೂ.

ನೆಮ್ಮದಿಯೊಳಿದೆ ಇಡಿಯ ದೇಶವೆ
ನಮ್ಮ ನಿಷ್ಠೆಯ ನೆಚ್ಚಿಯೆ,
ಇಂಥ ಭಾವನೆ ಬೆಚ್ಚಗಿಟ್ಟಿದೆ
ಬಲವ ಕೊಟ್ಟಿದೆ ತೋಳಿಗೆ.

ಶಿಖಿರವೇರುತ ಏರಿ ಹೋರುತ
ಕೊರವ ಈ ಹಿಮದಲ್ಲಿಯೂ
ಹೊಟ್ಟೆ ಹಸಿದೂ ನಿದ್ದೆ ಇರದೆಯು
ತೇಗಿ ನಲಿಯಿತು ಬಾಳಿದು

ನನ್ನ ಭೂಮಿಯ ನನ್ನ ತಾಯಿಯ
ದಿವ್ಯಪಾದದ ಧೂಳಿಯ
ನೆತ್ತಿಯಲಿ ನಾ ಹೊತ್ತು ತೋರುವೆ
ನನ್ನ ಕ್ಷಾತ್ರದ ರೀತಿಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಮಚಂದ್ರ ಶರ್ಮರೇ (ರ್‍)
Next post ಗಂಡ

ಸಣ್ಣ ಕತೆ

  • ರಾಜಕೀಯ ಮುಖಂಡರು

    ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…