ಯೋಧನ ಹಾಡು

ಹೆತ್ತ ತಾಯಿಯೆ ನಿನ್ನ ಸೇವೆಗೆ
ಮುಡಿಪು ನನ್ನೀ ಬಾಳುವೆ,
ನಿನ್ನ ಮಗ ನಾ ಎನುವ ಹೆಮ್ಮೆಯ
ಹೊತ್ತು ಹರಿದಿದೆ ಕಾಲುವೆ.

ನಿನ್ನ ಸ್ಮರಣೆಯೆ ಇಂಥ ಭೀಕರ
ಯುದ್ಧ ರಂಗದ ನಡುವೆಯೂ,
ಸಹಜವಲ್ಲದ ಬಿರುಸು ಬಾಳಿನ
ಮೃತ್ಯು ಸನ್ನಿಧಿಯಲ್ಲಿಯೂ.

ನೆಮ್ಮದಿಯೊಳಿದೆ ಇಡಿಯ ದೇಶವೆ
ನಮ್ಮ ನಿಷ್ಠೆಯ ನೆಚ್ಚಿಯೆ,
ಇಂಥ ಭಾವನೆ ಬೆಚ್ಚಗಿಟ್ಟಿದೆ
ಬಲವ ಕೊಟ್ಟಿದೆ ತೋಳಿಗೆ.

ಶಿಖಿರವೇರುತ ಏರಿ ಹೋರುತ
ಕೊರವ ಈ ಹಿಮದಲ್ಲಿಯೂ
ಹೊಟ್ಟೆ ಹಸಿದೂ ನಿದ್ದೆ ಇರದೆಯು
ತೇಗಿ ನಲಿಯಿತು ಬಾಳಿದು

ನನ್ನ ಭೂಮಿಯ ನನ್ನ ತಾಯಿಯ
ದಿವ್ಯಪಾದದ ಧೂಳಿಯ
ನೆತ್ತಿಯಲಿ ನಾ ಹೊತ್ತು ತೋರುವೆ
ನನ್ನ ಕ್ಷಾತ್ರದ ರೀತಿಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಮಚಂದ್ರ ಶರ್ಮರೇ (ರ್‍)
Next post ಗಂಡ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…