Home / ಲೇಖನ / ಇತರೆ / ವಚನ ವಿಚಾರ – ನೀನು ನಾನು

ವಚನ ವಿಚಾರ – ನೀನು ನಾನು

ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ
ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆ
ಅಯ್ಯಾ ಎನ್ನೊಳಗೆ ಇನಿತಿರ್ದು ಮೈ ದೋರದ ಭೇದವ
ನಿಮ್ಮಲ್ಲಿ ಕಂಡೆ ಕಾಣಾ ಚೆನ್ನಮಲ್ಲಿಕಾರ್ಜುನಾ

[ಇನಿತಿರ್ದು-ಇಷ್ಟು ಇದ್ದು, ಹೀಗೆ ಇದ್ದು]

ಅಕ್ಕಮಹಾದೇವಿಯ ವಚನ. ನಾನು ಯಾರು ಎಂದು ನನಗೇ ಗೊತ್ತಾಗುವ ಮೊದಲು ನೀನು ಎಲ್ಲಿದ್ದೆ? ಇದ್ದರೂ ಇದ್ದಿರಬಹುದು, ಬಂಗಾರದೊಳಗೆ ಅಡಗಿರುವ ಬಣ್ಣದ ಹಾಗೆ. ಹಾಗೆ ನನ್ನೊಡನೆ ಬೇರ್ಪಡಿಸಲಾಗದಂತೆ ಇದ್ದೂ ಕೂಡ ಯಾಕೆ ನನಗೆ ಮೈದೋರದೆ ಹೋದೆ? ನನ್ನೊಳಗಿದ್ದೂ ನನ್ನಿಂದ ಬೇರೆಯಾಗಿಯೇ, ಕೈಗೆ ಸಿಗದೆ, ಕಣ್ಣಿಗೆ ಕಾಣದೆ ಇರುವ ಭೇದವನ್ನು ಮಾತ್ರ ಕಂಡೆ ಅನ್ನುತ್ತಾಳೆ. ಇರುವ ಒಂದು ಎರಡಾಗಿ ಮತ್ತೆ ಒಂದೇ ಆಗಲಾರದ ಉಮ್ಮಳವನ್ನು ಈ ವಚನ ಹೇಳುತ್ತದೆ.

ಈ ವಚನದಲ್ಲಿ ಗಮನಕ್ಕೆ ತಕ್ಕ ಎರಡು ಸಂಗತಿಗಳಿವೆ: ಮೊದಲನೆಯದು `ನಾನು’ ಎಂಬ ಅರಿವು ಮೂಡುವವರೆಗೆ `ನೀನು’ ಎಂಬ ಮಾತಿಗೆ ಅರ್ಥವೇ ಇಲ್ಲ. ನಾನು ಮತ್ತು ನೀನು ಅನ್ನುವ ಭೇದ ಸೃಷ್ಟಿಯಾಗದಿದ್ದರೆ `ಅರ್ಥ’ ಅನ್ನುವ ಮಾತಿಗೂ ಅರ್ಥವಿಲ್ಲ. ನಿನ್ನಿಂದ ನಾನು ಬೇರೆ, ನನ್ನಿಂದ ನೀನು ಬೇರೆ ಅನ್ನುವುದರಿಂದಲೇ ಅಲ್ಲವೇ ನಮ್ಮ ನಮ್ಮ `ವ್ಯಕ್ತಿತ್ವ’ ಸ್ಪುಟಗೊಳ್ಳುವುದು! ಹಾಗೆ `ನಾನು’ ಬೇರೆ ಎಂಬ ಅರಿವು ಮೂಡುವವರೆಗೆ ನೀನು ಎಲ್ಲಿದ್ದೆ ಅನ್ನುವ ಪ್ರಶ್ನೆ ಅಕ್ಕನದು.

ಇನ್ನೊಂದು ಸಂಗತಿ ಎಂದರೆ ನೀನು ಹಾಗೆ ಬೇರೆ ಅಲ್ಲವೇ ಅಲ್ಲ, ಬಂಗಾರದಿಂದ ಬಣ್ಣವನ್ನು ಬೇರ್ಪಡಿಸಲು ಆಗದಂತೆ ನೀನು ನನ್ನೊಳಗಿನವನೇ ಅನ್ನುವ ಅರಿವು. ಆದರೆ ತೊಡಕೆಂದರೆ ನನ್ನೊಳಗೆ ಇದ್ದರೂ ಹಾಗೆ ಇರುವಾತ ಬೇರೆಯಾಗಿ ಕಣ್ಣಿಗೆ ಕಾಣಿಸಿಕೊಳ್ಳದಿದ್ದರೆ ಕೂಡುವ ಮಾತೆಲ್ಲಿಂದ ಬಂದಿತು! ಹಾಗೆ ನನ್ನೊಳಗೆ ಇರುವವನನ್ನು ಕಾಣುವುದಕ್ಕೆ `ನಾನು’ ಪ್ರತ್ಯೇಕಗೊಂಡು ಇಲ್ಲವಾಗಬೇಕೋ ಏನೋ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...