Home / ಲೇಖನ / ಇತರೆ / ವಚನ ವಿಚಾರ – ನೀನು ನಾನು

ವಚನ ವಿಚಾರ – ನೀನು ನಾನು

ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ
ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆ
ಅಯ್ಯಾ ಎನ್ನೊಳಗೆ ಇನಿತಿರ್ದು ಮೈ ದೋರದ ಭೇದವ
ನಿಮ್ಮಲ್ಲಿ ಕಂಡೆ ಕಾಣಾ ಚೆನ್ನಮಲ್ಲಿಕಾರ್ಜುನಾ

[ಇನಿತಿರ್ದು-ಇಷ್ಟು ಇದ್ದು, ಹೀಗೆ ಇದ್ದು]

ಅಕ್ಕಮಹಾದೇವಿಯ ವಚನ. ನಾನು ಯಾರು ಎಂದು ನನಗೇ ಗೊತ್ತಾಗುವ ಮೊದಲು ನೀನು ಎಲ್ಲಿದ್ದೆ? ಇದ್ದರೂ ಇದ್ದಿರಬಹುದು, ಬಂಗಾರದೊಳಗೆ ಅಡಗಿರುವ ಬಣ್ಣದ ಹಾಗೆ. ಹಾಗೆ ನನ್ನೊಡನೆ ಬೇರ್ಪಡಿಸಲಾಗದಂತೆ ಇದ್ದೂ ಕೂಡ ಯಾಕೆ ನನಗೆ ಮೈದೋರದೆ ಹೋದೆ? ನನ್ನೊಳಗಿದ್ದೂ ನನ್ನಿಂದ ಬೇರೆಯಾಗಿಯೇ, ಕೈಗೆ ಸಿಗದೆ, ಕಣ್ಣಿಗೆ ಕಾಣದೆ ಇರುವ ಭೇದವನ್ನು ಮಾತ್ರ ಕಂಡೆ ಅನ್ನುತ್ತಾಳೆ. ಇರುವ ಒಂದು ಎರಡಾಗಿ ಮತ್ತೆ ಒಂದೇ ಆಗಲಾರದ ಉಮ್ಮಳವನ್ನು ಈ ವಚನ ಹೇಳುತ್ತದೆ.

ಈ ವಚನದಲ್ಲಿ ಗಮನಕ್ಕೆ ತಕ್ಕ ಎರಡು ಸಂಗತಿಗಳಿವೆ: ಮೊದಲನೆಯದು `ನಾನು’ ಎಂಬ ಅರಿವು ಮೂಡುವವರೆಗೆ `ನೀನು’ ಎಂಬ ಮಾತಿಗೆ ಅರ್ಥವೇ ಇಲ್ಲ. ನಾನು ಮತ್ತು ನೀನು ಅನ್ನುವ ಭೇದ ಸೃಷ್ಟಿಯಾಗದಿದ್ದರೆ `ಅರ್ಥ’ ಅನ್ನುವ ಮಾತಿಗೂ ಅರ್ಥವಿಲ್ಲ. ನಿನ್ನಿಂದ ನಾನು ಬೇರೆ, ನನ್ನಿಂದ ನೀನು ಬೇರೆ ಅನ್ನುವುದರಿಂದಲೇ ಅಲ್ಲವೇ ನಮ್ಮ ನಮ್ಮ `ವ್ಯಕ್ತಿತ್ವ’ ಸ್ಪುಟಗೊಳ್ಳುವುದು! ಹಾಗೆ `ನಾನು’ ಬೇರೆ ಎಂಬ ಅರಿವು ಮೂಡುವವರೆಗೆ ನೀನು ಎಲ್ಲಿದ್ದೆ ಅನ್ನುವ ಪ್ರಶ್ನೆ ಅಕ್ಕನದು.

ಇನ್ನೊಂದು ಸಂಗತಿ ಎಂದರೆ ನೀನು ಹಾಗೆ ಬೇರೆ ಅಲ್ಲವೇ ಅಲ್ಲ, ಬಂಗಾರದಿಂದ ಬಣ್ಣವನ್ನು ಬೇರ್ಪಡಿಸಲು ಆಗದಂತೆ ನೀನು ನನ್ನೊಳಗಿನವನೇ ಅನ್ನುವ ಅರಿವು. ಆದರೆ ತೊಡಕೆಂದರೆ ನನ್ನೊಳಗೆ ಇದ್ದರೂ ಹಾಗೆ ಇರುವಾತ ಬೇರೆಯಾಗಿ ಕಣ್ಣಿಗೆ ಕಾಣಿಸಿಕೊಳ್ಳದಿದ್ದರೆ ಕೂಡುವ ಮಾತೆಲ್ಲಿಂದ ಬಂದಿತು! ಹಾಗೆ ನನ್ನೊಳಗೆ ಇರುವವನನ್ನು ಕಾಣುವುದಕ್ಕೆ `ನಾನು’ ಪ್ರತ್ಯೇಕಗೊಂಡು ಇಲ್ಲವಾಗಬೇಕೋ ಏನೋ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...