Home / ಕವನ / ಕವಿತೆ / ರಾಮಚಂದ್ರ ಶರ್ಮರೇ (ರ್‍)

ರಾಮಚಂದ್ರ ಶರ್ಮರೇ (ರ್‍)

ಶ್ರೀರಾಮಚಂದ್ರ ಹುಟ್ಟಿದ ದಿನವೇ
ಡೋಂಟ್ ಕೇರ್‍ ಅಂತ ನೀವೇ ಫೇರ್‌ವೆಲ್
ಏರ್ಪಾಡು ಮಾಡುಕೊಂಡಿದ್ದು ನೋ ಒನ್ ವಾಸ್ ಅವೇರ್‍
ನಮಗಾರಿಗೂ ಗೊತ್ತೇ ಮಾಡದಂತೆ ಹೊರಟು ಬಿಟ್ಟಿದ್ದು
ವಾಸ್ ಇನ್ ಎ ವೇ ಅನ್‌ಫೇರ್‍

ನಿಮ್ಮ ಪಾಂಡಿತ್ಯ ನೀವು ಕನ್ನಡ ಕಾವ್ಯಕ್ಕೆ ಕಲ್ಪಿಸಿದ ಕಾಯಕಲ್ಪ
ಓದಿ, ಕೇಳೀ ಅರ್ಥಮಾಡಿಕೊಂಡಿದ್ದೇನೆ ಅಲ್ಪಸ್ವಲ್ಪ
ಜೊಳ್ಳು ಕವನಗಳ ಬಗ್ಗೆ ನಿಮ್ಮ ಜಿಗುಪ್ಸೆ
ಪೊಳ್ಳು ಕವನಗಳ ಕ್ಯಾಸೆಟ್ಟು ಬಗ್ಗೆ ಕೆಟ್ಟ ಸಿಟ್ಟು

ಬೊಗಳೆಗಳ ಜತೆ ನಿಮ್ಮ ಜಗಳ
ನೇರನುಡಿ, ಹಾಸ್ಯ, ಪರಿಹಾಸ್ಯ
ಜಂಟಲ್‌ಮಾನ್ ಪದದ ಅರ್ಥ ವಿವರಣೆಯಂತಿದ್ದ ವ್ಯಕ್ತಿ
ಇವೆಲ್ಲವೂ ಅರ್ಥವಾಗಿದ್ದವು ಬಿಡಿ ಯತಾನುಶಕ್ತಿ
ಆದರೆ ಕಡೆವರೆಗೂ ಅರ್ಥವಾಗದುಳಿದ ಅಚ್ಚರಿಯಂದರೆ
ಎಂಥ ಕೋಪ, ವಿಕೋಪಗಳ ಮದ್ಯದಲ್ಲೂ ಎದುರಾಳಿಗಳನ್ನು
ನಿರಾಯುಧರನ್ನಾಗಿಸಿ ದಿಡೀರ್‍ ಎಂದು
ನಿಮ್ಮ ಮುಖದಲ್ಲಿ ನಿರಪೇಕ್ಷವಾಗಿ ಮೂಡಿ ಬಿಡುತ್ತಿದ್ದ
ಬಿದಿಗೆ ಚಂದ್ರಮನ ಮಗು ಮುಖದ ಗಾಂಧಿನಗು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...