Home / ಕವನ / ಕವಿತೆ / ರಾಮಚಂದ್ರ ಶರ್ಮರೇ (ರ್‍)

ರಾಮಚಂದ್ರ ಶರ್ಮರೇ (ರ್‍)

ಶ್ರೀರಾಮಚಂದ್ರ ಹುಟ್ಟಿದ ದಿನವೇ
ಡೋಂಟ್ ಕೇರ್‍ ಅಂತ ನೀವೇ ಫೇರ್‌ವೆಲ್
ಏರ್ಪಾಡು ಮಾಡುಕೊಂಡಿದ್ದು ನೋ ಒನ್ ವಾಸ್ ಅವೇರ್‍
ನಮಗಾರಿಗೂ ಗೊತ್ತೇ ಮಾಡದಂತೆ ಹೊರಟು ಬಿಟ್ಟಿದ್ದು
ವಾಸ್ ಇನ್ ಎ ವೇ ಅನ್‌ಫೇರ್‍

ನಿಮ್ಮ ಪಾಂಡಿತ್ಯ ನೀವು ಕನ್ನಡ ಕಾವ್ಯಕ್ಕೆ ಕಲ್ಪಿಸಿದ ಕಾಯಕಲ್ಪ
ಓದಿ, ಕೇಳೀ ಅರ್ಥಮಾಡಿಕೊಂಡಿದ್ದೇನೆ ಅಲ್ಪಸ್ವಲ್ಪ
ಜೊಳ್ಳು ಕವನಗಳ ಬಗ್ಗೆ ನಿಮ್ಮ ಜಿಗುಪ್ಸೆ
ಪೊಳ್ಳು ಕವನಗಳ ಕ್ಯಾಸೆಟ್ಟು ಬಗ್ಗೆ ಕೆಟ್ಟ ಸಿಟ್ಟು

ಬೊಗಳೆಗಳ ಜತೆ ನಿಮ್ಮ ಜಗಳ
ನೇರನುಡಿ, ಹಾಸ್ಯ, ಪರಿಹಾಸ್ಯ
ಜಂಟಲ್‌ಮಾನ್ ಪದದ ಅರ್ಥ ವಿವರಣೆಯಂತಿದ್ದ ವ್ಯಕ್ತಿ
ಇವೆಲ್ಲವೂ ಅರ್ಥವಾಗಿದ್ದವು ಬಿಡಿ ಯತಾನುಶಕ್ತಿ
ಆದರೆ ಕಡೆವರೆಗೂ ಅರ್ಥವಾಗದುಳಿದ ಅಚ್ಚರಿಯಂದರೆ
ಎಂಥ ಕೋಪ, ವಿಕೋಪಗಳ ಮದ್ಯದಲ್ಲೂ ಎದುರಾಳಿಗಳನ್ನು
ನಿರಾಯುಧರನ್ನಾಗಿಸಿ ದಿಡೀರ್‍ ಎಂದು
ನಿಮ್ಮ ಮುಖದಲ್ಲಿ ನಿರಪೇಕ್ಷವಾಗಿ ಮೂಡಿ ಬಿಡುತ್ತಿದ್ದ
ಬಿದಿಗೆ ಚಂದ್ರಮನ ಮಗು ಮುಖದ ಗಾಂಧಿನಗು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...