Home / ಕವನ / ಕವಿತೆ / ರಾಮಚಂದ್ರ ಶರ್ಮರೇ (ರ್‍)

ರಾಮಚಂದ್ರ ಶರ್ಮರೇ (ರ್‍)

ಶ್ರೀರಾಮಚಂದ್ರ ಹುಟ್ಟಿದ ದಿನವೇ
ಡೋಂಟ್ ಕೇರ್‍ ಅಂತ ನೀವೇ ಫೇರ್‌ವೆಲ್
ಏರ್ಪಾಡು ಮಾಡುಕೊಂಡಿದ್ದು ನೋ ಒನ್ ವಾಸ್ ಅವೇರ್‍
ನಮಗಾರಿಗೂ ಗೊತ್ತೇ ಮಾಡದಂತೆ ಹೊರಟು ಬಿಟ್ಟಿದ್ದು
ವಾಸ್ ಇನ್ ಎ ವೇ ಅನ್‌ಫೇರ್‍

ನಿಮ್ಮ ಪಾಂಡಿತ್ಯ ನೀವು ಕನ್ನಡ ಕಾವ್ಯಕ್ಕೆ ಕಲ್ಪಿಸಿದ ಕಾಯಕಲ್ಪ
ಓದಿ, ಕೇಳೀ ಅರ್ಥಮಾಡಿಕೊಂಡಿದ್ದೇನೆ ಅಲ್ಪಸ್ವಲ್ಪ
ಜೊಳ್ಳು ಕವನಗಳ ಬಗ್ಗೆ ನಿಮ್ಮ ಜಿಗುಪ್ಸೆ
ಪೊಳ್ಳು ಕವನಗಳ ಕ್ಯಾಸೆಟ್ಟು ಬಗ್ಗೆ ಕೆಟ್ಟ ಸಿಟ್ಟು

ಬೊಗಳೆಗಳ ಜತೆ ನಿಮ್ಮ ಜಗಳ
ನೇರನುಡಿ, ಹಾಸ್ಯ, ಪರಿಹಾಸ್ಯ
ಜಂಟಲ್‌ಮಾನ್ ಪದದ ಅರ್ಥ ವಿವರಣೆಯಂತಿದ್ದ ವ್ಯಕ್ತಿ
ಇವೆಲ್ಲವೂ ಅರ್ಥವಾಗಿದ್ದವು ಬಿಡಿ ಯತಾನುಶಕ್ತಿ
ಆದರೆ ಕಡೆವರೆಗೂ ಅರ್ಥವಾಗದುಳಿದ ಅಚ್ಚರಿಯಂದರೆ
ಎಂಥ ಕೋಪ, ವಿಕೋಪಗಳ ಮದ್ಯದಲ್ಲೂ ಎದುರಾಳಿಗಳನ್ನು
ನಿರಾಯುಧರನ್ನಾಗಿಸಿ ದಿಡೀರ್‍ ಎಂದು
ನಿಮ್ಮ ಮುಖದಲ್ಲಿ ನಿರಪೇಕ್ಷವಾಗಿ ಮೂಡಿ ಬಿಡುತ್ತಿದ್ದ
ಬಿದಿಗೆ ಚಂದ್ರಮನ ಮಗು ಮುಖದ ಗಾಂಧಿನಗು.
*****

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...