ಸಂಗೀತ

ಪಂಡಿತರ ಪಾಮರರ ಮನವನೊಲಿಸುತಲಿರುವೆ
ಕುದಿಯುತಿಹ ಆತ್ಮಕ್ಕೆ ಶಾಂತಿಯನು ಕೊಡುವೆ
ಕರೆದೊಯ್ವೆ ಎಲ್ಲಿಗೋ ಕಂಬನಿಯ ತರಿಸುವೆ
ಸರಿಯಿಲ್ಲ ನಿನಗಾರು ಸಂಗೀತವೆ!

ನಿರ್ಮಲದ ಹೃದಯಕ್ಕೆ ಭಕ್ತಿಯನು ಕರುಣಿಸುವೆ
ಭಾವದಲಿ ನಿಮಿಷದೊಳು ದೇವನನು ಕಾಣಿಸುವೆ
ಪ್ರೇಮಕ್ಕೆ ತಳಹದಿಯೆ ನೀನಾಗಿ ನಿಂತಿರುವೆ
ಏನಿಹುದೊ ನಿನ್ನೊಲುಮೆ ಸಂಗೀತವೆ!

ರೋದಿಸುವ ಶಿಸುಗಳಿಗೆ ಹೊಸ ಚೇತನವ ಕೊಡುವೆ
ಹಸುರು ಗರಿಕೆಯನಗಿವ ಪಶುಗಳನು ತಿರುಗಿಸುವೆ
ಹಸಿದಿರುವ ತಿರುಕರಿಗೆ ಆಶನವನು ದೊರಕಿಸುವೆ
ಜಗವೆಲ್ಲ ವಶ ನಿನಗೆ ಸಂಗೀತವೆ!

ಶುಭಕಾರ್ಯಗಳಿಗೆಲ್ಲ ನಾಂದಿಯಾಗಿರುವೆ
ಸಭೆಯೊಳಗೆ ಹಿರಿದಾಗಿ ಬಹುಮಾನ ತರುವೆ
ನೀನೊಲಿದ ಜನಗಳನು ಪೂಜ್ಯರಾಗಿಸುವೆ
ಪರಮ ಮಂಗಳಕರವೆ ಸಂಗೀತವೆ!

ನಾರದರ ತುಂಬುರರ ಜೀವ ನೀನಾಗಿರುವೆ
ತ್ಯಾಗರಾಜರ ಹೆಸರ ಸ್ಥಿರವಾಗಿ ನಿಲಿಸಿರುವೆ
ಕಾಳಸರ್ಪನ ತಲೆಯ ಬಿಚ್ಚಿ ಆಡಿಸಿ ಬಿಡುವೆ
ಆನಂದಮಯವಾದ ಸಂಗೀತವೆ!

ದೇವಸೃಷ್ಟಿಯೊಳೆಲ್ಲ ಹಿರಿದಾದ ಕಲೆಯೇ
ಸಕಲ ವಾದ್ಯಗಳಲ್ಲಿ ಮೆರೆದು ನಲಿಯುತಲಿರುವೆ
ರಸಿಕರೆಲ್ಲರ ಮನವ ಸೆಳೆದು ನಿಲ್ಲಿಸಿಬಿಡುವೆ
ಜನಕಜೆಗೆ ನೀ ಹಿತವೆ ಸಂಗೀತವೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ತೇ ಯುಗಾದಿ ಬಂದಿದೆ…
Next post ಜಾಣರು, ಕೋಣರು

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…