ಮತ್ತೇ ಯುಗಾದಿ ಬಂದಿದೆ…

ಯುಗ ಯುಗಾದಿ ಬಂದಿದೆ…, ಬೆಲೆ ಏರಿಕೆ ತಂದಿದೆ
ಬಡವನ ಮಾಡಿಗೆ, ಇಲ್ಲಣಗಳ ತೋರಣ ಕಟ್ಟಿದೆ.
ಮಾವು ಇಲ್ಲ, ಬೇವು ಇಲ್ಲ, ಪ್ರಕೃತಿ ಕೂಡಾ ಮುನಿದಿದೆ!
ಮತ್ತೆ ಮತ್ತೆ ಯುಗಾದಿ ಬಂದಿದೆ, ಹೊಸ ತಗಾದಿ ತಂದಿದೆ.


ಒಲೆ ಮೇಲಿನ, ಹೊಸತು ಮಡಿಕೆ, ಕುದಿವ ಕಾಲದಿ
ಮೂಗರಳಿಸಿ, ಬಾಯಿ ಚಪ್ಪರಿಸಿ, ಜೊಲ್ಲು ಸುರಿಸಿದ ಯುಗಾದಿ
ಬೇಳೆ, ಬೆಲ್ಲ, ಶುಂಠಿ, ಏಲಕ್ಕಿ, ಮಾವು, ಬೇವು, ವಾಸನೆ ಘಮ್ಮನೇ…
ಮನೆ ಮನೆಗೂ, ಊರುಕೇರಿಗೂ ವಾಸನೆ! ಈಗ ಬರೀ ಸುಮ್ಮನೆ!!


ರುಬ್ಬಾ ಗುಂಡಿಲಿ, ಹೂರಣ ರುಬ್ಬುವಾ, ಮನವೆ ಬೇರೆ, ಯುಗಾದಿ
ಮಿಕ್ಸಿ, ಯಂತ್ರ ಗುಂಡಿಲಿ, ಕ್ಷಣದಿ ಹೂರಣ, ಈಗಿನ ಯುಗಾದಿ!
ಸದ್ದು ಗದ್ದಲಿಲ್ಲ! ಬರೀ ತೋರಣಿಕೆಯ, ಯುಗಾದಿ…
ಯಂತ್ರ ಮಾನವ, ಹಳೆ ನೆನಪೀಗ, ಉಂಡ ತೃಪ್ತಿಯ ಯುಗಾದಿ!


ಯುಗ ಯುಗಾದಿ, ಮರು ಯುಗಾದಿ ಬಂದಿದೇ…
ಕೃತಕ ತೋರಣದಿ, ತಳಿರು ವಾಸನೆ ಎಲ್ಲಿದೆ??
ಐಟಿ, ಬಿಟಿ, ಸೈಬರ್‍, ಫಾರಿನ್ ಮೆಶೀನಲಿ, ಯುಗಾದಿ ಸೊರಗಿದೆ!
ಏನಿತು ಯುಗಾದಿ ವಾಸನೆ, ಹೃದಯ ಶ್ರೀಮಂತಿಕೆ ಕಾಣೆನು!


ಹರಿದಾ ಜೇಬಲೀ, ಹಸಿರು, ಕನಕಾಂಬರ… ನೋಟಿನ, ಯುಗಾದಿ
ವಿಸ್ಕಿ, ರಮ್ಮು, ಕಾಫಿಡೇಗೆ, ಬೇವು ಬೆಲ್ಲ ಎಲ್ಲಿದೆ??
ಹೊಸತು ಬಟ್ಟೆ, ಕುಡಿಕೆ, ಮಡಿಕೆ, ಜಗವೇ ಮರೆತು ಮಲಗಿದೆ!
ಮೊಬೈಲು, ಎಸ್ಸೆಮ್ಮೆಸ್ಸು, ಸಿರಿಯಲ್ಲು, ಪೋಕಿಮ್ಯಾನ್‌ಗೆ ಸೋತಿದೆ!!


ಹಬ್ಬವಿಲ್ಲ! ಬಂಧುವಿಲ್ಲ! ಬರೀ ಬೂಟಾಟಿಕೆ
ಅಪ್ಪ, ಅಮ್ಮ, ಕಾಲಕಸವು! ಪ್ರೀತಿ, ಪ್ರೇಮ, ನಿತ್ಯಸರಕು!
ಹಣವೇ ತಂದೆ, ತಾಯಿ! ಉಗಾದಿ ಭ್ರಮೆಯು,
ಪದವಿ, ಪ್ರತಿಷ್ಠೆ, ಜಾತಿ, ಮತ, ಧರ್‍ಮಗಳೆ ಯುಗಾದಿಯು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರಿ ರಾಣಿಯರು
Next post ಸಂಗೀತ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys