Home / ಕವನ / ಕವಿತೆ / ಮತ್ತೇ ಯುಗಾದಿ ಬಂದಿದೆ…

ಮತ್ತೇ ಯುಗಾದಿ ಬಂದಿದೆ…

ಯುಗ ಯುಗಾದಿ ಬಂದಿದೆ…, ಬೆಲೆ ಏರಿಕೆ ತಂದಿದೆ
ಬಡವನ ಮಾಡಿಗೆ, ಇಲ್ಲಣಗಳ ತೋರಣ ಕಟ್ಟಿದೆ.
ಮಾವು ಇಲ್ಲ, ಬೇವು ಇಲ್ಲ, ಪ್ರಕೃತಿ ಕೂಡಾ ಮುನಿದಿದೆ!
ಮತ್ತೆ ಮತ್ತೆ ಯುಗಾದಿ ಬಂದಿದೆ, ಹೊಸ ತಗಾದಿ ತಂದಿದೆ.


ಒಲೆ ಮೇಲಿನ, ಹೊಸತು ಮಡಿಕೆ, ಕುದಿವ ಕಾಲದಿ
ಮೂಗರಳಿಸಿ, ಬಾಯಿ ಚಪ್ಪರಿಸಿ, ಜೊಲ್ಲು ಸುರಿಸಿದ ಯುಗಾದಿ
ಬೇಳೆ, ಬೆಲ್ಲ, ಶುಂಠಿ, ಏಲಕ್ಕಿ, ಮಾವು, ಬೇವು, ವಾಸನೆ ಘಮ್ಮನೇ…
ಮನೆ ಮನೆಗೂ, ಊರುಕೇರಿಗೂ ವಾಸನೆ! ಈಗ ಬರೀ ಸುಮ್ಮನೆ!!


ರುಬ್ಬಾ ಗುಂಡಿಲಿ, ಹೂರಣ ರುಬ್ಬುವಾ, ಮನವೆ ಬೇರೆ, ಯುಗಾದಿ
ಮಿಕ್ಸಿ, ಯಂತ್ರ ಗುಂಡಿಲಿ, ಕ್ಷಣದಿ ಹೂರಣ, ಈಗಿನ ಯುಗಾದಿ!
ಸದ್ದು ಗದ್ದಲಿಲ್ಲ! ಬರೀ ತೋರಣಿಕೆಯ, ಯುಗಾದಿ…
ಯಂತ್ರ ಮಾನವ, ಹಳೆ ನೆನಪೀಗ, ಉಂಡ ತೃಪ್ತಿಯ ಯುಗಾದಿ!


ಯುಗ ಯುಗಾದಿ, ಮರು ಯುಗಾದಿ ಬಂದಿದೇ…
ಕೃತಕ ತೋರಣದಿ, ತಳಿರು ವಾಸನೆ ಎಲ್ಲಿದೆ??
ಐಟಿ, ಬಿಟಿ, ಸೈಬರ್‍, ಫಾರಿನ್ ಮೆಶೀನಲಿ, ಯುಗಾದಿ ಸೊರಗಿದೆ!
ಏನಿತು ಯುಗಾದಿ ವಾಸನೆ, ಹೃದಯ ಶ್ರೀಮಂತಿಕೆ ಕಾಣೆನು!


ಹರಿದಾ ಜೇಬಲೀ, ಹಸಿರು, ಕನಕಾಂಬರ… ನೋಟಿನ, ಯುಗಾದಿ
ವಿಸ್ಕಿ, ರಮ್ಮು, ಕಾಫಿಡೇಗೆ, ಬೇವು ಬೆಲ್ಲ ಎಲ್ಲಿದೆ??
ಹೊಸತು ಬಟ್ಟೆ, ಕುಡಿಕೆ, ಮಡಿಕೆ, ಜಗವೇ ಮರೆತು ಮಲಗಿದೆ!
ಮೊಬೈಲು, ಎಸ್ಸೆಮ್ಮೆಸ್ಸು, ಸಿರಿಯಲ್ಲು, ಪೋಕಿಮ್ಯಾನ್‌ಗೆ ಸೋತಿದೆ!!


ಹಬ್ಬವಿಲ್ಲ! ಬಂಧುವಿಲ್ಲ! ಬರೀ ಬೂಟಾಟಿಕೆ
ಅಪ್ಪ, ಅಮ್ಮ, ಕಾಲಕಸವು! ಪ್ರೀತಿ, ಪ್ರೇಮ, ನಿತ್ಯಸರಕು!
ಹಣವೇ ತಂದೆ, ತಾಯಿ! ಉಗಾದಿ ಭ್ರಮೆಯು,
ಪದವಿ, ಪ್ರತಿಷ್ಠೆ, ಜಾತಿ, ಮತ, ಧರ್‍ಮಗಳೆ ಯುಗಾದಿಯು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...