Home / ಕವನ / ಕವಿತೆ / ಮತ್ತೇ ಯುಗಾದಿ ಬಂದಿದೆ…

ಮತ್ತೇ ಯುಗಾದಿ ಬಂದಿದೆ…

ಯುಗ ಯುಗಾದಿ ಬಂದಿದೆ…, ಬೆಲೆ ಏರಿಕೆ ತಂದಿದೆ
ಬಡವನ ಮಾಡಿಗೆ, ಇಲ್ಲಣಗಳ ತೋರಣ ಕಟ್ಟಿದೆ.
ಮಾವು ಇಲ್ಲ, ಬೇವು ಇಲ್ಲ, ಪ್ರಕೃತಿ ಕೂಡಾ ಮುನಿದಿದೆ!
ಮತ್ತೆ ಮತ್ತೆ ಯುಗಾದಿ ಬಂದಿದೆ, ಹೊಸ ತಗಾದಿ ತಂದಿದೆ.


ಒಲೆ ಮೇಲಿನ, ಹೊಸತು ಮಡಿಕೆ, ಕುದಿವ ಕಾಲದಿ
ಮೂಗರಳಿಸಿ, ಬಾಯಿ ಚಪ್ಪರಿಸಿ, ಜೊಲ್ಲು ಸುರಿಸಿದ ಯುಗಾದಿ
ಬೇಳೆ, ಬೆಲ್ಲ, ಶುಂಠಿ, ಏಲಕ್ಕಿ, ಮಾವು, ಬೇವು, ವಾಸನೆ ಘಮ್ಮನೇ…
ಮನೆ ಮನೆಗೂ, ಊರುಕೇರಿಗೂ ವಾಸನೆ! ಈಗ ಬರೀ ಸುಮ್ಮನೆ!!


ರುಬ್ಬಾ ಗುಂಡಿಲಿ, ಹೂರಣ ರುಬ್ಬುವಾ, ಮನವೆ ಬೇರೆ, ಯುಗಾದಿ
ಮಿಕ್ಸಿ, ಯಂತ್ರ ಗುಂಡಿಲಿ, ಕ್ಷಣದಿ ಹೂರಣ, ಈಗಿನ ಯುಗಾದಿ!
ಸದ್ದು ಗದ್ದಲಿಲ್ಲ! ಬರೀ ತೋರಣಿಕೆಯ, ಯುಗಾದಿ…
ಯಂತ್ರ ಮಾನವ, ಹಳೆ ನೆನಪೀಗ, ಉಂಡ ತೃಪ್ತಿಯ ಯುಗಾದಿ!


ಯುಗ ಯುಗಾದಿ, ಮರು ಯುಗಾದಿ ಬಂದಿದೇ…
ಕೃತಕ ತೋರಣದಿ, ತಳಿರು ವಾಸನೆ ಎಲ್ಲಿದೆ??
ಐಟಿ, ಬಿಟಿ, ಸೈಬರ್‍, ಫಾರಿನ್ ಮೆಶೀನಲಿ, ಯುಗಾದಿ ಸೊರಗಿದೆ!
ಏನಿತು ಯುಗಾದಿ ವಾಸನೆ, ಹೃದಯ ಶ್ರೀಮಂತಿಕೆ ಕಾಣೆನು!


ಹರಿದಾ ಜೇಬಲೀ, ಹಸಿರು, ಕನಕಾಂಬರ… ನೋಟಿನ, ಯುಗಾದಿ
ವಿಸ್ಕಿ, ರಮ್ಮು, ಕಾಫಿಡೇಗೆ, ಬೇವು ಬೆಲ್ಲ ಎಲ್ಲಿದೆ??
ಹೊಸತು ಬಟ್ಟೆ, ಕುಡಿಕೆ, ಮಡಿಕೆ, ಜಗವೇ ಮರೆತು ಮಲಗಿದೆ!
ಮೊಬೈಲು, ಎಸ್ಸೆಮ್ಮೆಸ್ಸು, ಸಿರಿಯಲ್ಲು, ಪೋಕಿಮ್ಯಾನ್‌ಗೆ ಸೋತಿದೆ!!


ಹಬ್ಬವಿಲ್ಲ! ಬಂಧುವಿಲ್ಲ! ಬರೀ ಬೂಟಾಟಿಕೆ
ಅಪ್ಪ, ಅಮ್ಮ, ಕಾಲಕಸವು! ಪ್ರೀತಿ, ಪ್ರೇಮ, ನಿತ್ಯಸರಕು!
ಹಣವೇ ತಂದೆ, ತಾಯಿ! ಉಗಾದಿ ಭ್ರಮೆಯು,
ಪದವಿ, ಪ್ರತಿಷ್ಠೆ, ಜಾತಿ, ಮತ, ಧರ್‍ಮಗಳೆ ಯುಗಾದಿಯು!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...