ಮತ್ತೇ ಯುಗಾದಿ ಬಂದಿದೆ…

ಯುಗ ಯುಗಾದಿ ಬಂದಿದೆ…, ಬೆಲೆ ಏರಿಕೆ ತಂದಿದೆ
ಬಡವನ ಮಾಡಿಗೆ, ಇಲ್ಲಣಗಳ ತೋರಣ ಕಟ್ಟಿದೆ.
ಮಾವು ಇಲ್ಲ, ಬೇವು ಇಲ್ಲ, ಪ್ರಕೃತಿ ಕೂಡಾ ಮುನಿದಿದೆ!
ಮತ್ತೆ ಮತ್ತೆ ಯುಗಾದಿ ಬಂದಿದೆ, ಹೊಸ ತಗಾದಿ ತಂದಿದೆ.


ಒಲೆ ಮೇಲಿನ, ಹೊಸತು ಮಡಿಕೆ, ಕುದಿವ ಕಾಲದಿ
ಮೂಗರಳಿಸಿ, ಬಾಯಿ ಚಪ್ಪರಿಸಿ, ಜೊಲ್ಲು ಸುರಿಸಿದ ಯುಗಾದಿ
ಬೇಳೆ, ಬೆಲ್ಲ, ಶುಂಠಿ, ಏಲಕ್ಕಿ, ಮಾವು, ಬೇವು, ವಾಸನೆ ಘಮ್ಮನೇ…
ಮನೆ ಮನೆಗೂ, ಊರುಕೇರಿಗೂ ವಾಸನೆ! ಈಗ ಬರೀ ಸುಮ್ಮನೆ!!


ರುಬ್ಬಾ ಗುಂಡಿಲಿ, ಹೂರಣ ರುಬ್ಬುವಾ, ಮನವೆ ಬೇರೆ, ಯುಗಾದಿ
ಮಿಕ್ಸಿ, ಯಂತ್ರ ಗುಂಡಿಲಿ, ಕ್ಷಣದಿ ಹೂರಣ, ಈಗಿನ ಯುಗಾದಿ!
ಸದ್ದು ಗದ್ದಲಿಲ್ಲ! ಬರೀ ತೋರಣಿಕೆಯ, ಯುಗಾದಿ…
ಯಂತ್ರ ಮಾನವ, ಹಳೆ ನೆನಪೀಗ, ಉಂಡ ತೃಪ್ತಿಯ ಯುಗಾದಿ!


ಯುಗ ಯುಗಾದಿ, ಮರು ಯುಗಾದಿ ಬಂದಿದೇ…
ಕೃತಕ ತೋರಣದಿ, ತಳಿರು ವಾಸನೆ ಎಲ್ಲಿದೆ??
ಐಟಿ, ಬಿಟಿ, ಸೈಬರ್‍, ಫಾರಿನ್ ಮೆಶೀನಲಿ, ಯುಗಾದಿ ಸೊರಗಿದೆ!
ಏನಿತು ಯುಗಾದಿ ವಾಸನೆ, ಹೃದಯ ಶ್ರೀಮಂತಿಕೆ ಕಾಣೆನು!


ಹರಿದಾ ಜೇಬಲೀ, ಹಸಿರು, ಕನಕಾಂಬರ… ನೋಟಿನ, ಯುಗಾದಿ
ವಿಸ್ಕಿ, ರಮ್ಮು, ಕಾಫಿಡೇಗೆ, ಬೇವು ಬೆಲ್ಲ ಎಲ್ಲಿದೆ??
ಹೊಸತು ಬಟ್ಟೆ, ಕುಡಿಕೆ, ಮಡಿಕೆ, ಜಗವೇ ಮರೆತು ಮಲಗಿದೆ!
ಮೊಬೈಲು, ಎಸ್ಸೆಮ್ಮೆಸ್ಸು, ಸಿರಿಯಲ್ಲು, ಪೋಕಿಮ್ಯಾನ್‌ಗೆ ಸೋತಿದೆ!!


ಹಬ್ಬವಿಲ್ಲ! ಬಂಧುವಿಲ್ಲ! ಬರೀ ಬೂಟಾಟಿಕೆ
ಅಪ್ಪ, ಅಮ್ಮ, ಕಾಲಕಸವು! ಪ್ರೀತಿ, ಪ್ರೇಮ, ನಿತ್ಯಸರಕು!
ಹಣವೇ ತಂದೆ, ತಾಯಿ! ಉಗಾದಿ ಭ್ರಮೆಯು,
ಪದವಿ, ಪ್ರತಿಷ್ಠೆ, ಜಾತಿ, ಮತ, ಧರ್‍ಮಗಳೆ ಯುಗಾದಿಯು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರಿ ರಾಣಿಯರು
Next post ಸಂಗೀತ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…