ನನ್ನ ತಂದೆ

ಎಲ್ಲರಂತಿರಲಿಲ್ಲ ನನ್ನ ತಂದೆ
ಹೆಣ್ಣ ಕರುಳ ಗಂಡು ಜೀವ
ಮಕ್ಕಳೆಂದರೆ ಅವಗೆ
ಮರಳು ಮಾಯೆ

ಗುರಿಯ ತತ್ವದ ತಿಳಿಸಿ
ದಿಟ್ಟತನವನು ಕಲಿಸಿ
ಬದುಕು ಚಾತುರ್ಯ
ಬೆರೆಸಿ ಬೆಳಸಿದನು

ಪುಟ್ಟ ಕೈಗಳ ಹಿಡಿದು
ಭರವಸೆಯ ಒತ್ತಿದನು
ಬಾಳ ಹಾದಿಯ ಸವಿಸೋ
ಧೈರ್ಯವನು ತುಂಬಿ

ಆ ಹೊತ್ತು ಮುಂಜಾನೆ ನೀ ಅಗಲಿದೆ ದಿನ
ಕೈಯ ಚಾಲೋಟ ತುಟಿಯೇರುವ
ಮುನ್ನ ಹೇಳದೆ ನಡೆದೆ
ಹಂಗು ತೊರೆದು

‘ಬಾ ಮಗನೇ’ ಎನ್ನಲು
ನೀನಿಲ್ಲವೆಂದಾಗ ಅನಿಸಿದ್ದು
ಮರೀಚಿಕೆ ಈ ಬದುಕು
ಮರಳು ಮಾಯೆ

ಅತ್ತು ಉರುಳಾಡಿ
ಗುಣಗಾನಗೈಯುತಿರೆ
ನೆಂಟರಿಷ್ಟರು ಕೂಡಿ
ಮತ್ತು ಸಂತೈಕೆ ಮಾಡಿ

ತಂದೆ ಇಲ್ಲದ ಮನೆಯು
ಗುರುವು ಇಲ್ಲದ ಮಠವು
ಕೊನೆಯಿಲ್ಲದಾಯ್ತು
ನಮ್ಮ ನೋವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಟಿದೇಳುವ ರಾಗದುಸಿರ
Next post ಉಸ್ಮಾನ್ ಸಾಗರದ ದಂಡೆಯಿಂದ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…