ಎಲ್ಲರಂತಿರಲಿಲ್ಲ ನನ್ನ ತಂದೆ
ಹೆಣ್ಣ ಕರುಳ ಗಂಡು ಜೀವ
ಮಕ್ಕಳೆಂದರೆ ಅವಗೆ
ಮರಳು ಮಾಯೆ
ಗುರಿಯ ತತ್ವದ ತಿಳಿಸಿ
ದಿಟ್ಟತನವನು ಕಲಿಸಿ
ಬದುಕು ಚಾತುರ್ಯ
ಬೆರೆಸಿ ಬೆಳಸಿದನು
ಪುಟ್ಟ ಕೈಗಳ ಹಿಡಿದು
ಭರವಸೆಯ ಒತ್ತಿದನು
ಬಾಳ ಹಾದಿಯ ಸವಿಸೋ
ಧೈರ್ಯವನು ತುಂಬಿ
ಆ ಹೊತ್ತು ಮುಂಜಾನೆ ನೀ ಅಗಲಿದೆ ದಿನ
ಕೈಯ ಚಾಲೋಟ ತುಟಿಯೇರುವ
ಮುನ್ನ ಹೇಳದೆ ನಡೆದೆ
ಹಂಗು ತೊರೆದು
‘ಬಾ ಮಗನೇ’ ಎನ್ನಲು
ನೀನಿಲ್ಲವೆಂದಾಗ ಅನಿಸಿದ್ದು
ಮರೀಚಿಕೆ ಈ ಬದುಕು
ಮರಳು ಮಾಯೆ
ಅತ್ತು ಉರುಳಾಡಿ
ಗುಣಗಾನಗೈಯುತಿರೆ
ನೆಂಟರಿಷ್ಟರು ಕೂಡಿ
ಮತ್ತು ಸಂತೈಕೆ ಮಾಡಿ
ತಂದೆ ಇಲ್ಲದ ಮನೆಯು
ಗುರುವು ಇಲ್ಲದ ಮಠವು
ಕೊನೆಯಿಲ್ಲದಾಯ್ತು
ನಮ್ಮ ನೋವು
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.