ಏಣಿ

ಮೇಲೇರಬೇಕು ಮುಟ್ಟಬೇಕಿದೆ
ಗುರಿಯ
ಮತ್ತೆ ನಿಲುಕಂತಿದೆ ಎತ್ತರದಿ
ಏರಲೇಬೇಕು ಏಣಿ

ಏಣಿಗೆ ಹತ್ತಿರಕೆ ಬಂದವರ
ಎತ್ತರಕೆ ಏರಿಸುವುದೆಂದರೆ
ಏನೋ ಉಮೇದು
ಧೂಳಿನ ರಾಡಿ ಗಲೀಜುಗಳ
ಸಹಿಸಿಕೊಳ್ಳುತ್ತದೆ ಕ್ರೋಧಗೊಳ್ಳದೆ
ಮುಗ್ಧತೆಯ ಕಣ್ಣುಗಳ
ಅರ್ಥೈಸಿಕೊಂಡು
ಗದರದೇ ಮಜಲುಗಳ ಏರಲು
ಹಂತಹಂತವಾಗಿ ಮೆಟ್ಟಿಲುಗಳ
ಅಂತರವ ತೋರಿಸಿಕೊಡುತ್ತದೆ
ಹೆಜ್ಜೆಗಳಿಗೆ ಜತನದಿ

ಮತ್ತೆ ಏರುವ ಕಾಲುಗಳಲ್ಲಿ
ಎಷ್ಟೊಂದು ವೈವಿಧ್ಯ
ಕೆಲವಕ್ಕೆ ಹುಮ್ಮಸ್ಸು,
ಕೆಲವಕ್ಕೆ ಧಾವಂತ
ಕೆಲವಕ್ಕೆ ಅನಿವಾರ್ಯ

ಏರಿದವರ ದಿಟ್ಟ ಹೆಜ್ಜೆ ಗುರುತುಗಳು
ಮೂಡಿ ಬಂದರೆ
ಏಣಿಯ ಆನಂದ ಪರಮ ಪಾವನ
ದಿಗಿಲುಗೊಳ್ಳದೆ
ಏರಿದವನಿಗಷ್ಟೇ ಗೊತ್ತು

ಏಣಿಯ ತ್ಯಾಗ ಮತ್ತು
ಏರುವ ಕಸರತ್ತು
ಯಾಮಾರಿದರೆ
ಏಣಿಯ ತ್ಯಾಗ ಏರುಗನ ಕಸರತ್ತು
ನೆಲಪಾಲು, ಅದಕ್ಕೆ ಅಡಿಗಡಿಗೆ
ಸೋಪಾನ ಜೋಪಾನ

ಏಣಿಯಾಗಲೇ ಬೇಕು
ಒಬ್ಬರು ಇನ್ನೊಬ್ಬರಿಗೆ
ಏಣಿಯೇರಲೇಬೇಕು
ಗುರಿ ಹೊಂದಲು

ಗುರಿ ಏರಿದ ಕಾಲುಗಳ
ಉನ್ನತಿಯ ಕಂಡು ದೂರದಿ ನಿಂತು
ಮನ ಪೂರ್ತಿ ಹರಸುವವರು
ಮಾನ್ಯತೆಯ ಪಡೆದು
ಮಾನ್ಯ ಆಗುವರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೈಲಾರಯ್ಯ ಬಂದಾನಯ್ಯ
Next post ಹೈದರ್‌ಗುಡದಲ್ಲೊಬ್ಬ ಹೈದ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…