ಎಲ್ಲಿಗೆ ಓಡುವುದು

ಗದಲ ಗೋಜಲು ದೂಳು ದುಮ್ಮು
ದುರ್ವಾಸನೆ ಸಿಡಿಮದ್ದುಗಳ ಕಟುನಾತ
ಕೊಳಚೆ ಹರಿವ ಓಣಿ ಬೀದಿಗಳು
ದಾರಿಯಲ್ಲಿ ಬಿಡಾಡಿ ದನ-ಜನಗಳು
ಮುಂದೆ ಸಾಗಲು ಬಿಡದೆ ಅಡ್ಡಾದಿಡ್ಡಿ
ನಿಂತು ಮೆಲುಕು ಹಾಕುತ್ತಿವೆ
ಸರಭರ ವಾಹನಗಳು ಕಿವಿಕೊರೆಯುತ್ತಿವೆ
ಧೂಳೆಬ್ಬಿಸಿ ಮೂಗಿಗಡರಿಸಿ ಉಸಿರುಕಟ್ಟಿಸಿವೆ
ಕಣ್ಣಿಗಡರಿ ದಿಕ್ಕು ಕಾಣದ ಮಲಿನ ಪರಿಸರ
ವ್ಯಕ್ತಿ ವ್ಯಕ್ತಿಗಳ ಸ್ವಾರ್ಥ ನೀಚ ಕುತಂತ್ರಗಳು
ಜಾತಿಜಾತಿಗಳ ಕತ್ತಿ ಮಸೆತಗಳು
ಕುಹಕ ನೋಟಗಳು ಕಟುವಿಷ ಒಳಗೆ
ಮೇಲೆ ಸಿಹಿ ಬಣ್ಣ ಸವರಿದ ಮಾತುಗಳು
ನರಿಹದ್ದು ಗೂಗೆ ಕಾಗೆ ವಿಷ ಜಂತುಗಳ
ಒಳಗೆ ತುಂಬಿಕೊಂಡಿರುವ ಮನುಷ್ಯರ
ರೂಹುಗಳು ಕಾಗದದ ಹೂಗಳು

ನೋಟುಗಳ ಪ್ರತಿಷ್ಠೆಗಳ ಬುರುಗು ಜಾಲದ
ಗಗನ ದೇಣಿಗೆ ಜೋತುಬಿದ್ದ
ಒಬ್ಬರ ನೋಡಿ ಒಬ್ಬರು
ಒಬ್ಬರ ನೋಡಿ ಒಬ್ಬರು
ಸಾಲು ಸಾಲು ಜೋಲು ಜೋಲು
ಮೇಲೇರಲು ಹವಣಿಸುವ
ಜಾರುವ ಏರುವ ಬಡಾಯಿಗಳ
ಬರಡು ಪಂದ್ಯಾಟ ಪೈಪೋಟಿಗಳ
ಮಾನವತೆ ಕಳೆದು ಹೋಗಿ ದಾನವತೆಯೇ ತಾಂಡವಾಡುವ
ಈ ಜನಾರಣ್ಯದಿಂದ
ಕೀವು ನಾರು ಕೊಳೆ ತುಂಬಿದ ವ್ರಣಗಳ
ಮನೆ ಮನಗಳಿಂದ
ಎಲ್ಲಿಗೆ ಓಡುವುದು?
ಹೇಗೆ ಓಡುವುದು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಿ ಪ್ಲಾಂಟ್
Next post ನನ್ನ ಸ್ನೇಹಿತ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…