Home / ಕವನ / ಕವಿತೆ / ಎಲ್ಲಿಗೆ ಓಡುವುದು

ಎಲ್ಲಿಗೆ ಓಡುವುದು

ಗದಲ ಗೋಜಲು ದೂಳು ದುಮ್ಮು
ದುರ್ವಾಸನೆ ಸಿಡಿಮದ್ದುಗಳ ಕಟುನಾತ
ಕೊಳಚೆ ಹರಿವ ಓಣಿ ಬೀದಿಗಳು
ದಾರಿಯಲ್ಲಿ ಬಿಡಾಡಿ ದನ-ಜನಗಳು
ಮುಂದೆ ಸಾಗಲು ಬಿಡದೆ ಅಡ್ಡಾದಿಡ್ಡಿ
ನಿಂತು ಮೆಲುಕು ಹಾಕುತ್ತಿವೆ
ಸರಭರ ವಾಹನಗಳು ಕಿವಿಕೊರೆಯುತ್ತಿವೆ
ಧೂಳೆಬ್ಬಿಸಿ ಮೂಗಿಗಡರಿಸಿ ಉಸಿರುಕಟ್ಟಿಸಿವೆ
ಕಣ್ಣಿಗಡರಿ ದಿಕ್ಕು ಕಾಣದ ಮಲಿನ ಪರಿಸರ
ವ್ಯಕ್ತಿ ವ್ಯಕ್ತಿಗಳ ಸ್ವಾರ್ಥ ನೀಚ ಕುತಂತ್ರಗಳು
ಜಾತಿಜಾತಿಗಳ ಕತ್ತಿ ಮಸೆತಗಳು
ಕುಹಕ ನೋಟಗಳು ಕಟುವಿಷ ಒಳಗೆ
ಮೇಲೆ ಸಿಹಿ ಬಣ್ಣ ಸವರಿದ ಮಾತುಗಳು
ನರಿಹದ್ದು ಗೂಗೆ ಕಾಗೆ ವಿಷ ಜಂತುಗಳ
ಒಳಗೆ ತುಂಬಿಕೊಂಡಿರುವ ಮನುಷ್ಯರ
ರೂಹುಗಳು ಕಾಗದದ ಹೂಗಳು

ನೋಟುಗಳ ಪ್ರತಿಷ್ಠೆಗಳ ಬುರುಗು ಜಾಲದ
ಗಗನ ದೇಣಿಗೆ ಜೋತುಬಿದ್ದ
ಒಬ್ಬರ ನೋಡಿ ಒಬ್ಬರು
ಒಬ್ಬರ ನೋಡಿ ಒಬ್ಬರು
ಸಾಲು ಸಾಲು ಜೋಲು ಜೋಲು
ಮೇಲೇರಲು ಹವಣಿಸುವ
ಜಾರುವ ಏರುವ ಬಡಾಯಿಗಳ
ಬರಡು ಪಂದ್ಯಾಟ ಪೈಪೋಟಿಗಳ
ಮಾನವತೆ ಕಳೆದು ಹೋಗಿ ದಾನವತೆಯೇ ತಾಂಡವಾಡುವ
ಈ ಜನಾರಣ್ಯದಿಂದ
ಕೀವು ನಾರು ಕೊಳೆ ತುಂಬಿದ ವ್ರಣಗಳ
ಮನೆ ಮನಗಳಿಂದ
ಎಲ್ಲಿಗೆ ಓಡುವುದು?
ಹೇಗೆ ಓಡುವುದು?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...