Home / ಕವನ / ಕವಿತೆ / ಎಲ್ಲಿಗೆ ಓಡುವುದು

ಎಲ್ಲಿಗೆ ಓಡುವುದು

ಗದಲ ಗೋಜಲು ದೂಳು ದುಮ್ಮು
ದುರ್ವಾಸನೆ ಸಿಡಿಮದ್ದುಗಳ ಕಟುನಾತ
ಕೊಳಚೆ ಹರಿವ ಓಣಿ ಬೀದಿಗಳು
ದಾರಿಯಲ್ಲಿ ಬಿಡಾಡಿ ದನ-ಜನಗಳು
ಮುಂದೆ ಸಾಗಲು ಬಿಡದೆ ಅಡ್ಡಾದಿಡ್ಡಿ
ನಿಂತು ಮೆಲುಕು ಹಾಕುತ್ತಿವೆ
ಸರಭರ ವಾಹನಗಳು ಕಿವಿಕೊರೆಯುತ್ತಿವೆ
ಧೂಳೆಬ್ಬಿಸಿ ಮೂಗಿಗಡರಿಸಿ ಉಸಿರುಕಟ್ಟಿಸಿವೆ
ಕಣ್ಣಿಗಡರಿ ದಿಕ್ಕು ಕಾಣದ ಮಲಿನ ಪರಿಸರ
ವ್ಯಕ್ತಿ ವ್ಯಕ್ತಿಗಳ ಸ್ವಾರ್ಥ ನೀಚ ಕುತಂತ್ರಗಳು
ಜಾತಿಜಾತಿಗಳ ಕತ್ತಿ ಮಸೆತಗಳು
ಕುಹಕ ನೋಟಗಳು ಕಟುವಿಷ ಒಳಗೆ
ಮೇಲೆ ಸಿಹಿ ಬಣ್ಣ ಸವರಿದ ಮಾತುಗಳು
ನರಿಹದ್ದು ಗೂಗೆ ಕಾಗೆ ವಿಷ ಜಂತುಗಳ
ಒಳಗೆ ತುಂಬಿಕೊಂಡಿರುವ ಮನುಷ್ಯರ
ರೂಹುಗಳು ಕಾಗದದ ಹೂಗಳು

ನೋಟುಗಳ ಪ್ರತಿಷ್ಠೆಗಳ ಬುರುಗು ಜಾಲದ
ಗಗನ ದೇಣಿಗೆ ಜೋತುಬಿದ್ದ
ಒಬ್ಬರ ನೋಡಿ ಒಬ್ಬರು
ಒಬ್ಬರ ನೋಡಿ ಒಬ್ಬರು
ಸಾಲು ಸಾಲು ಜೋಲು ಜೋಲು
ಮೇಲೇರಲು ಹವಣಿಸುವ
ಜಾರುವ ಏರುವ ಬಡಾಯಿಗಳ
ಬರಡು ಪಂದ್ಯಾಟ ಪೈಪೋಟಿಗಳ
ಮಾನವತೆ ಕಳೆದು ಹೋಗಿ ದಾನವತೆಯೇ ತಾಂಡವಾಡುವ
ಈ ಜನಾರಣ್ಯದಿಂದ
ಕೀವು ನಾರು ಕೊಳೆ ತುಂಬಿದ ವ್ರಣಗಳ
ಮನೆ ಮನಗಳಿಂದ
ಎಲ್ಲಿಗೆ ಓಡುವುದು?
ಹೇಗೆ ಓಡುವುದು?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...