ಅಮವಾಸ್ಯೆಯ ಸೆರಗು ಮುಸ್ಸಂಜೆ
ವಿಮಾನ ಏರುವುದು ಸಮುದ್ರ ದಾಟುವುದು
ಬೇಡವೇ ಬೇಡ
ಸಂಪ್ರದಾಯದ ಅಮ್ಮನ ಸಂಕಟ ಒಳಗೊಳಗೆ-
ವೀಸಾದ ಕೊನೆಯ ದಿನಾಂಕ
ನೋಡು ಅಮ್ಮ ಹೊರಡಲೇಬೇಕು
ಹೊಸ್ತಿಲಿನ ಮೇಲಿರುವ
ನನ್ನ ಅಸಹಾಯಕತೆ-
ಅಪ್ಪನ ಧೈರ್ಯದ ಮಾತುಗಳು
ಎರುಡು ದಿನಗಳಿಂದ ನನ್ನವನ ಸಮುದ್ರದಬ್ಬರ
ಒಂದೇ ಸಮನೆ ಫೋನಕಾಲ್ಸ್
ಪಾಸ್ಪೋರ್ಟ್ ಟಿಕೇಟ್ ಸರಿಯಾಗಿಟ್ಟುಕೊ
ಏರ್ಪೋರ್ಟ ಟ್ಯಾಕ್ಸ್ಗೆ ದುಡ್ಡುಕಟ್ಟಬೇಕು
ಸೂಟ್ ಕೇಸಿಗೆ ಮೂವತ್ತೇ ಕೆ.ಜಿ ಸಾಮಾನು
ಹೆಚ್ಚಾದುದು ಹೆಗಲಿಗೇರಿಸಬೇಡ
ಮಗುವಿಗೆ ಬೆಚ್ಚನೆಯ ಉಡುಪು
ನಿನಗೊಂದು ಸ್ವೆಟ್ಟರ್ ಮಾತ್ರ
ಎಮರ್ಜನ್ಸಿಗೆ ಬಗಲಚೀಲದಲ್ಲಿರಲಿ,
ಟ್ರಾನ್ಸಿಟ್ ಇದೆ ತುಂಬಾಚಳಿ-
ಭಾರವಾದರೂ ಮಗುವನ್ನು ಎತ್ತಿಕೊಂಡೇ ಇರು
ವಿಂಡೋ ಸೀಟು
ಸಾಧ್ಯವಾದಷ್ಟು ಆಕಾಶ ಸಮುದ್ರ ನೋಡು
ಓ.ಕೆ ಹ್ಯಾಪಿಜರ್ನಿ—ಕಟ್
ಮಗುವಿಗೆ ಡೈಫರ್ ಹಾಕಿ
ಅಮ್ಮನ ಕಾಲು ಬಿದ್ದು ಹೊರಟ ಕ್ಷಣ
ಕಣ್ತುಂಬ ನೀರು ಕಾಣದಂತೆ ಒರೆಸಿ
ಮುಗುಳ್ನಕ್ಕು ಕೈ ಬೀಸಿದೆ…..
೩೧-೧೨-೧೯೭೯
*****
Related Post
ಸಣ್ಣ ಕತೆ
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…
-
ಮರೀಚಿಕೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
-
ಕೊಳಲು ಉಳಿದಿದೆ
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
-
ರಾಮಿ
‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…
-
ಗೃಹವ್ಯವಸ್ಥೆ
ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…