ಬೆರಳ ಕೇಳಿದರೆ ಕೈಯ ಕೊಡುವವನು

ಬೆರಳ ಕೇಳಿದರೆ ಕೈಯ ಕೊಡುವವನು
ಕೈಯ ಕೇಳಿದರೆ ಕೊರಳನೆ ಕೊಡುವವನು
ನಮ್ಮ ಏಕಲವ್ಯ
ಕೊರಳ ಕೇಳಿದರೆ ಒಡಲನ ಕೊಡನೆ
ತನ್ನ ಪ್ರಾಣವ ತೆರನೆ
ಹೇ ಗುರು ದ್ರೋಣ

ಆ ಶಿಷ್ಯನಿರುವಂಥ ಗುರುಗಳೆ ಗುರುಗಳು
ಆ ಕತೆಯಿರುವಂಥ ಭಾರತವೆ ಭಾರತ
ಆವತ್ತಿಗಾ ಕತೆ ಈವತ್ತಿಗೇನೋ
ಹೇ ಗುರು ದ್ರೋಣ

ಕಾಲ ಬದಲಾಗುವುದು ಕತೆ ಬದಲಾಗುವುದು
ಗುರು ಬದಲಾಗುವರು ಶಿಷ್ಯರು ಬದಲಾಗುವರು
ಗುರುಭಕ್ತಿಯೆನ್ನುವುದು ನಗೆಪಾಟಲಾಗುವುದು
ಏಕಲವ್ಯ ಬರೆ ಭಿಲ್ಲನಾಗುವನು
ಹೇ ಗುರು ದ್ರೋಣ

ಭಿಲ್ಲನೇ ಅವನು ಭಿಲ್ಲನೆನ್ನುವುದು ಸರಿ
ಬಿಲ್ಲುವಿದ್ಯೆಯಲಿ ಪರಿಣತನು ಅಹುದು
ಅವನಿಗೇತಕೆ ಒಂದು ಮೂರುತಿಯ ಭಯಭಕುತಿ
ಅದು ಎಂಥ ಗುರುವೊ ಅದು ಎಂಥ ಋಣವೊ
ಹೇ ಗುರು ದ್ರೋಣ

ಕತೆ ಯಾಕಿಲ್ಲಿ ತಡೆಯುತ ಹೋಯಿತೊ
ಸಾಮ್ರಾಜ್ಯಗಳ ತಲೆ ಮುಗಿಯಿಸಿತೊ
ಕಲಿಸಿದ ಗುರು ಕಲ್ಪಿಸಿದ ಗುರು ಮನದೊಳು ಸಂಕಲ್ಪಿಸಿದ ಗುರು
ಕನಸಲಿ ಕಾಣಿಸಿದ ಗುರು
ಎಲ್ಲ ಗುರುಗಳು ಜಗದಾದಿ ಗುರುವೆಂದು
ಶರಣಾಯಿತೊ
ಹೇ ಗುರು ದ್ರೋಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೩
Next post `ನಾನು’ ಹೋದರೆ…

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys