ವ್ಯಸನಕೋಣೆ

ವ್ಯಸನಕೋಣೆಯಲಿ ನಮ್ಮ ಕಥಾನಾಯಕಿ ಬಿಳಿಯ
ವಸನಧಾರಿ ಮಲಗಿರುವಳಂತೆ ಯಾರಿಗೂ ತಿಳಿಯ-
ದವಳ ಬೇಸರದ ಮೂಲ

ಘನ ಸರಕಾರವೇನೂ ಸುಮ್ಮನೆ ಕೂತಿಲ್ಲ ಕೈಕಟ್ಟಿ
ಮನೆಯ ಸುತ್ತಲೂ ನಿಲ್ಲಿಸಿದೆ ಕಾವಲಿಗೆಂದು ಗಟ್ಟಿ
ಗೂಢಚಾರರ ಜಾಲ

ಸುಮ್ಮನೆ ಓಡಾಡುವವರ ಮೇಲೆ ಕಣ್ಣಿರಿಸಿ
ಗುಮಾನಿ ಬಂದವರ ಜೇಬುಗಳನರಸಿ
ತಿರುಗಾಡುವರು ಗಸ್ತು

ಸಮಸ್ಯೆಗಳ ಮೂಲಗಳ ಹುಡುಕಬಲ್ಲಂತಹ
ವಿಮರ್ಶಕ ಬುದ್ಧಿಜೀವಿಗಳ ವರ್ಗ ಸಹ
ಆಗಿಬಿಟ್ಟಿದೆ ಸುಸ್ತು

ಮಾಯವಾಗಿರುವರೆಷ್ಟೋ ಜನ ಇದ್ದಕಿದ್ದಂತೆ
ಸಾಯದೆಯೆ ಉಳಿದವರಿಂದ ತುಂಬಿರುವುದಂತೆ
ದೇಶದ ಬಂದೀಖಾನೆ

ಅದರೊಂದಿಗೇ ಹುಟ್ಟಿಕೊಳ್ಳುವುದು ಭೂಗತ ಸಾಹಿತ್ಯ
ಸದೆಬಡಿತ ಸರ್ವಾಧಿಕಾರ ನಿರಂಕುಶತ್ವ ಅಸತ್ಯ
ಸಾಹಿತಿಗಳಿಗೆ ಸ್ಫೂರ್ತಿ ತಾನೆ!

ಇತ್ತ ನಾಯಕಿಯೂ ಬದುಕಿಲ್ಲ ಎಷ್ಟೋ ದಿನಗಳ ಕೆಳಗೆ
ಸತ್ತು ಹೋದಳು ಎಂದು ಕಿವಿಯಿಂದ ಕಿವಿಗೆ
ಹಬ್ಬಿರುವುದು ವದಂತಿ

ತೆರೆಸಿ ನೊಡುವುದಕ್ಕೆ ಸರ್ವಥಾ ಒಪ್ಪುವುದಿಲ್ಲ
ಸರಕಾರ-ಎಲ್ಲ ಸರ್ವಾಧಿಕಾರದ ಹಿಂದೆಯೂ ಒಂದಲ್ಲ
ಒಂದು ಭಯಂಕರ ಭ್ರಾಂತಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಿವಿನ ವಾಟೆ
Next post ಸುಖ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys