ಇರುಳಿನಲಿ ಮೊಗ್ಗಾಗಿ ಮರೆಯಾದ ಮೋಡಗಳ
ಚೆಂಗುಲಾಬಿಯ ದಳಗಳರಳುತಿವೆ, ರವಿಯುದಯ
ಎರಚುತಿರೆ ಓಕುಳಿಯನೆಲ್ಲೆಲ್ಲು ! – ಹಕ್ಕಿಗಳ
ರಾಗದುನ್ಮಾದದಲಿ, ಹಸುರು ನೆಲ ಜಗದೆದೆಯ
ಒಲವ ಹರಕೆಯ ಹೊತ್ತು ತೋರುತಿದೆ ಹನಿಗಳಲಿ !
ತಂಗಾಳಿ ಬೀರುತಿದೆ ಹಿಂದೆಂದು ಕಾಣದಿಹ
ಸುಖ ಕಂಪನೆಲ್ಲಿಂದಲೋ ಬಂದು ಕನಸಿನಲಿ
ಮುತ್ತಿಟ್ಟ ಮಾಯಾಂಗನೆಯ ತೆರದಿ ! ಅಗೋ, ವಿರಹ
ತಾಪದಲಿ ಬಿಸುಸುಯ್ದ ತೆಂಗು ಗರಿ – ತನ್ನಿಂದ
ಬಿಟ್ಟೋಡಿದಾ ಕೋಗಿಲೆಯ ಒಲವ ನೆನೆಯುತಿದೆ !
ಸುತ್ತೆಲ್ಲ ಸೌಂದರ್ಯ ತುಳುಕುತ್ತಿದೆ. ನಿನ್ನಂದ-
ನೋಟಗಳ ಸೆರೆಯಿಟ್ಟ ಕಣ್ಣೆವೆಯು ತೆರೆಯುತಿರೆ
ಬೆಳಗಾಯಿತೇಳು ಉಷೆ ! ಒಲವ ಬೀರೆನ್ನೆದೆಗೆ,
ನೀನೇಳದಿರೆ ಜಗದ ಸೌಂದರ್ಯ ಅರಳುವುದೆ?
*****
Related Post
ಸಣ್ಣ ಕತೆ
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಬೆಟ್ಟಿ
ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
-
ಸ್ನೇಹಲತಾ
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…
-
ಇರುವುದೆಲ್ಲವ ಬಿಟ್ಟು
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…