ಹುಣ್ಣಿಮೆ

ನಿನ್ನ ಬರುವಿಕೆಗಾಗಿ ಕುಳಿತಿರುವೆ
ಏಕಾಂಗಿಯಾಗಿ ನೀಲಬಾನತುಂಬ
ಹಳದಿ ಹರಡಿ ದಕ್ಕಲಾಗದ ಭಾವಗಳ
ಚಿಕ್ಕೆಗಳು ಮೂಡಿದವು.

ಅಂತರಾಳ ತೆರೆದುಕೊಳ್ಳುವುದಿಲ್ಲ
ಸುಲಭದಲಿ ಎರಡು ಮನೆಗಳ
ಬಾಗಿಲುದಾಟಿ ಸಪ್ನಗಳು ದಿಕ್ಕೀ
ಹೊಡೆಯುವ ಕ್ಷಣ ಚಂದ್ರ ತೇಲಿದ.

ಹರಡಿ ಹಾಸಿದ ತಲೆಗೂದಲು
ತುಂಬ ಘಮ್ಮೆಂದು ಮಲ್ಲಿಗೆ
ಹೊರಳಿ ಸೂಸಿ ಹಂತ ಹಂತವಾಗಿ
ಮೇಲೇರಿ ಮೌಲ್ಯ ನೀಡಿತು ರಾತ್ರಿ ಪಹರೆಯಲಿ.

ಕಾಲಗೆಜ್ಜೆಯ ಝೇಂಕಾರದಲಿ
ಜೀರುಂಡೆ ಮೀಟಿ ಹಾಡಿದವು
ಬಯಲು ಆಲಯದಲಿ ಅವನ
ಹೆಜ್ಜೆಯ ಸಪ್ಪಳಕೆ ಕಾಯಿತು ಮನ ಅಂತಃಕರಣದಲಿ.

ಬಂದು ಒಮ್ಮೆ ತಬ್ಬಿ ಸಿಂಚನ ದೃಶ್ಯ
ಮಾಹಿತ ಕಂಪನಕಾದಿರುವ ಪ್ರಿಯಕರ
ಬೆಳದಿಂಗಳ ತಂಪು ಹೊತ್ತು ಬಂದಂತೆ
ಜಗಕ್ಕೆಲ್ಲಾ ಮಧುರ ಮಿಲನದ ಹುಣ್ಣಿಮೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ
Next post ಪಾವಿತ್ರ್‍ಯದೆಡೆಗೆ…

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys