Home / ಕವನ / ಕವಿತೆ / ಕವಿಯ ಮೊದಲ ಕವನ

ಕವಿಯ ಮೊದಲ ಕವನ

ಮಲೆನಾಡಿನ ಮಳೆಗಾಲದಲ್ಲಿ
ನಮ್ಮೂರು ಕಾಲೇಜು ಬಾಗಿಲುಗಳು
ತೆಗೆದುಕೊಳ್ಳುತ್ತವೆ.
ಬಣ್ಣ ಬಣ್ಣದ ಛತ್ರಿಗಳು
ಬಿಚ್ಚಿಕೊಳ್ಳುತ್ತವೆ.
ಸೂಜಿ ಮಲ್ಲಿಗೆ ಗುಂಡು ಮಲ್ಲಿಗೆಗಳು
ಘಮ ಘಮಿಸುತ್ತವೆ.
ಕಾಲೇಜು ಮೆಟ್ಟಲೇರುವ ಹುಡುಗಿಯರ
ಗಲ್ಲಗಳು ಕೇದಿಗೆಯಾದರೆ ಕಣ್ಣುಗಳು
ನೀರಳೆಯಾಗುತ್ತವೆ.
ಸ್ಟೇಷನರಿ ಅಂಗಡಿಯಲ್ಲಿಯ
ಲಿಪ್‌ಸ್ಟಿಕ್, ರೋಜ್, ಪರ್ಸಗಳು ಕರಗುತ್ತವೆ.
ಮಳೆಗೆ ಮಿಂದು ನಡುಗುವ
ಬೆಡಗಿಯರನ್ನು ನೋಡಿ Book stall
ದವರೂ ಬಿಸಿಯಾಗಿ ಬೆವರುತ್ತವೆ.
ಹಳೇ ಮೇಷ್ಟ್ರುಗಳು,
ಛೇಡಿಸುವ ಹೊಸ ಹುಡುಗಿಯರೆಂದು
ಇದ್ದ ಎರಡು ಕೂದಲುಗಳಿಂದ
ಬೋಳು ತಲೆ ಮುಚ್ಚುತ್ತ
ಇಸ್ತ್ರಿ ಹೊಡೆವ, ಕಾಲರ್ ಹರೆದ
ಶರ್ಟ್ ಹಾಕಿಕೊಂಡು,
ವಯಸ್ಸಾಗಿ ಒಳಗೆ ಠೊಳ್ಳಾಗಿದ್ದರೂ
ಜೊಳ್ಳು ಎಲುಬಿನ ಎದೆ ಏರಿಸಿ
ಇಲ್ಲದ ಮೀಸೆ ತಿರುಗಿಸಿ
ಭಲ ಭೀಮನ ಠೀವಿಯಂತೆ
ಕ್ಲಾಸಿಗೆ ಬಂದೇ ಬಿಡುತ್ತಾರೆ.
ಹುಡುಗಿಯರ ಕಿಲ ಕಿಲ ನಗು
ಹುಡುಗರ ಕಲ ಕಲ ಮಾತುಗಳಲ್ಲಿ
ಕ್ಲಾಸು ಸುರುವಾಗುತ್ತದೆ.
ಬಾಣಗಳು ಬೋಳು ತಲೆಗೆ ಬೀಳುತ್ತವೆ
ಮೇಷ್ಟ್ರು ಸುಸ್ತಾಗುತ್ತಾರೆ
ಜೊಳ್ಳು ಎಲುಬಿನ ಬೊಜ್ಜು ಮೇಷ್ಟ್ರು
‘ಹೊರಗೆ ಹೆಜ್ಜೆ ಇಡುತ್ತಿದ್ದಂತೆಯೇ
ರಪ ರಪ ಮಳೆ ಹೊಡೆಯುತ್ತದೆ
ಬಣ್ಣದ ಛತ್ರಿಗಳು ಬಿಚ್ಚಿಕೊಳ್ಳುತ್ತವೆ
ಮೇಷ್ಟ್ರನ್ನು ಮುತ್ತುತ್ತವೆ
ಧನ್ಯ ನಾ ಎನ್ನುತ್ತಾರೆ
ಕಾಲೇಜು ಹುಡುಗರು
ಕವಿಗಳಾಗುವ
ಮೊದಲನೆಯ ಕವನ
ಸುರುವಾಗುತ್ತದೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್ ಎನ್ ಎಸ್ ರಾವ್