Home / ಕವನ / ಕವಿತೆ / ಕವಿಯ ಮೊದಲ ಕವನ

ಕವಿಯ ಮೊದಲ ಕವನ

ಮಲೆನಾಡಿನ ಮಳೆಗಾಲದಲ್ಲಿ
ನಮ್ಮೂರು ಕಾಲೇಜು ಬಾಗಿಲುಗಳು
ತೆಗೆದುಕೊಳ್ಳುತ್ತವೆ.
ಬಣ್ಣ ಬಣ್ಣದ ಛತ್ರಿಗಳು
ಬಿಚ್ಚಿಕೊಳ್ಳುತ್ತವೆ.
ಸೂಜಿ ಮಲ್ಲಿಗೆ ಗುಂಡು ಮಲ್ಲಿಗೆಗಳು
ಘಮ ಘಮಿಸುತ್ತವೆ.
ಕಾಲೇಜು ಮೆಟ್ಟಲೇರುವ ಹುಡುಗಿಯರ
ಗಲ್ಲಗಳು ಕೇದಿಗೆಯಾದರೆ ಕಣ್ಣುಗಳು
ನೀರಳೆಯಾಗುತ್ತವೆ.
ಸ್ಟೇಷನರಿ ಅಂಗಡಿಯಲ್ಲಿಯ
ಲಿಪ್‌ಸ್ಟಿಕ್, ರೋಜ್, ಪರ್ಸಗಳು ಕರಗುತ್ತವೆ.
ಮಳೆಗೆ ಮಿಂದು ನಡುಗುವ
ಬೆಡಗಿಯರನ್ನು ನೋಡಿ Book stall
ದವರೂ ಬಿಸಿಯಾಗಿ ಬೆವರುತ್ತವೆ.
ಹಳೇ ಮೇಷ್ಟ್ರುಗಳು,
ಛೇಡಿಸುವ ಹೊಸ ಹುಡುಗಿಯರೆಂದು
ಇದ್ದ ಎರಡು ಕೂದಲುಗಳಿಂದ
ಬೋಳು ತಲೆ ಮುಚ್ಚುತ್ತ
ಇಸ್ತ್ರಿ ಹೊಡೆವ, ಕಾಲರ್ ಹರೆದ
ಶರ್ಟ್ ಹಾಕಿಕೊಂಡು,
ವಯಸ್ಸಾಗಿ ಒಳಗೆ ಠೊಳ್ಳಾಗಿದ್ದರೂ
ಜೊಳ್ಳು ಎಲುಬಿನ ಎದೆ ಏರಿಸಿ
ಇಲ್ಲದ ಮೀಸೆ ತಿರುಗಿಸಿ
ಭಲ ಭೀಮನ ಠೀವಿಯಂತೆ
ಕ್ಲಾಸಿಗೆ ಬಂದೇ ಬಿಡುತ್ತಾರೆ.
ಹುಡುಗಿಯರ ಕಿಲ ಕಿಲ ನಗು
ಹುಡುಗರ ಕಲ ಕಲ ಮಾತುಗಳಲ್ಲಿ
ಕ್ಲಾಸು ಸುರುವಾಗುತ್ತದೆ.
ಬಾಣಗಳು ಬೋಳು ತಲೆಗೆ ಬೀಳುತ್ತವೆ
ಮೇಷ್ಟ್ರು ಸುಸ್ತಾಗುತ್ತಾರೆ
ಜೊಳ್ಳು ಎಲುಬಿನ ಬೊಜ್ಜು ಮೇಷ್ಟ್ರು
‘ಹೊರಗೆ ಹೆಜ್ಜೆ ಇಡುತ್ತಿದ್ದಂತೆಯೇ
ರಪ ರಪ ಮಳೆ ಹೊಡೆಯುತ್ತದೆ
ಬಣ್ಣದ ಛತ್ರಿಗಳು ಬಿಚ್ಚಿಕೊಳ್ಳುತ್ತವೆ
ಮೇಷ್ಟ್ರನ್ನು ಮುತ್ತುತ್ತವೆ
ಧನ್ಯ ನಾ ಎನ್ನುತ್ತಾರೆ
ಕಾಲೇಜು ಹುಡುಗರು
ಕವಿಗಳಾಗುವ
ಮೊದಲನೆಯ ಕವನ
ಸುರುವಾಗುತ್ತದೆ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...