ಅವಳ ಬಾಳು!

ಬಯಲಲ್ಲಿ ಬಿಸಿಲಲ್ಲಿ ಆ ಬಾ-ಲೆ!
ಹಸಿಹುಲ್ಲು ಕುಯ್ದಾಡುವುದು ಕೇಳ್ದೆ!!  ||ಪಲ್ಲ||

ಹಾಡೊಂದು ತನ್ನಪ್ಪ ಮರೆತಽದೊ,
ಅವಳಮ್ಮ ಹರೆಯದಲಗಲಿಽದೊ!
‘ಕಿವಿನಿಗುರಿ ಕಂಕೆರಳೀ ನಾ ಕೇಳಿ,
ಹೆಣ್ ಬಾಳ ಕಂಡು ಸೋಜಿಗ ತಾಳಿ!  ||ಬಯ||

ತಾನೊರ್ವ ಕೊಡಗೂಸು ಎಂದಽಳು,
ಪುಡಿಕಾಸು ಬಿಸುಡೋದ ತೆಗೆದಽಳು!
ಸೆರಗು ಮೂಲೆಯಲಿಟ್ಟು ಬಿಗಿದಾಗ,
ಕಣ್ಣೀರ ಬಿಸಿಯೆನ್ನ ತಾಗಿಽತೊ!  ||ಬಯ||

ತನ್ನಣ್ಣ ಚಿಕ್ದಾಗೆ ಸತ್ತೋಽದ,
ಮಾಂವಂದಿರಾರಿಲ್ಲ ಒಣಜೀವ!
ಸತಿಯಾಗೆ ಗತಿಯಿಲ್ಲ-ಈ ಹುಲ್ಲು,
ಹುಲ್ನೆಲ ಅವಳೊಂದು ಒಸಿಪಾಲು!  ||ಬಯ||

ಹುಲ್ಲಿರಿವ ಕತ್ತಿಯ ಕೊರಳಿಽಗೆ,
ತಾನಾಗೆ ಮಡುಗ್ವಳು ಸಾಯೋಗೆ;
ತನತನಗೆ ತಾಳುಽವ ಬುದ್ದಿಯೋ
ಕಾಲಮಾನವ ನೂಕೆ ಧೈರ್ಯಽವೊ!  ||ಬಯ||

ಹೂಜೀವ ಸೊಗಸೆಂದು ಹಾಡೋಳು,
ಬೆಂದ ಬಾಳಿನ ತಾಪ ನೆನೆಯೊಽಳು;
ಕಣ್ಣೀರುಮಯಲೋಕ-ಅನ್ನೋಽಳು,
ತನ್ನ ಬಾಳಿನ ಮರುಕ ಮರೆಯೋಳು!  ||ಬಯ||

ಬಯಲ ಬಾನ್ ಸುತ್ತೆಲ್ಲ ಮೌನಽವೊ,
ಈ ಹುಡುಗಿಯ ಹಾಡಿನ ಮೇಳಽವೊ;
ಮಲೆನಾಡ ವಂಶದ ಸವಿಜೀಽವ,
ತಬ್ಬಲಿಯಾದ ಈ ಹೂಬಾಽಳ!  ||ಬಯ||

ಕೆಂಬಕ್ಕಿ ಬಯಲಾಗೆ ಹಾರ್‍ವಾಗ
ಕೊರಳೆತ್ತಿ ಆ ಬಾಲೆ ದಿಟ್ಟಿಽಸಿ;
ತನ್ ತಾಯಿ ಸಾಕಿದ್ದ ಮರಿಕೋಳಿ,
ನೆನೆಯೋಳು ತನ್ನೊಂದು ಮರಿಬೆಽಕ್ಕ!  ||ಬಯ||

ಹಾಡಲ್ಲೆ ಹನಿಯಾಗಿ ಜಿನುಗೋಳು!
ತನ್ನೆಸರು ಭೂರಮೆ-ಅನ್ನೋಳು!
ಗತಿ ತೋರದಲ್ಲಿಯೆ ಒರಗೋಽಳು,
ಏನಿದೀ ತರವಿದೊ ಜನಬಾಽಳು!  ||ಬಯ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೩೨
Next post ಪುಟಗೋಸಿ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಜಂಬದ ಕೋಳಿ

    ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…